More

    ನಾಲ್ಕೇ ದಿನದಲ್ಲಿ 2003 ಕೋಟಿ ರೂ.! ಇಲ್ಲಿದೆ ಅಸಲಿಯತ್ತು, ಸಿಕ್ಕಾಪಟ್ಟೆ ಟ್ರೋಲ್​ ಆದ ಅಲ್ಲು ಅರ್ಜುನ್​

    ಹೈದರಾಬಾದ್​: ಆ್ಯಂಕರ್​ ಮಾಡಿದ ಯಡವಟ್ಟಿಗೆ ಅಲ್ಲು ಅರ್ಜುನ್​ ನಟನೆಯ “ಪುಷ್ಪ” ಸಿನಿಮಾ ತಂಡ ಸಿಕ್ಕಾಪಟ್ಟೆ ಟ್ರೋಲ್​ ಆಗಿದೆ. ಉದಯ್​ ಭಾನು ಬಹುತೇಕ ಮರೆತು ಹೋಗಿರುವ ಆ್ಯಂಕರ್​. ಅವರು ಇತ್ತೀಚೆಗೆ ಸಿನಿಮಾ ಈವೆಂಟ್​ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ತಿರುಪತಿಯಲ್ಲಿ ನಡೆದ ಪುಷ್ಪ ಚಿತ್ರದ ಸಕ್ಸಸ್​ ಈವೆಂಟ್​ನಲ್ಲಿ ಉದಯ್​ ಭಾನು ಆ್ಯಂಕರ್​ ಆಗಿದ್ದರು. ತುಂಬಾ ದಿನಗಳ ನಂತರ ವೇದಿಕೆ ಹತ್ತಿದ ಖುಷಿಯಲ್ಲಿ ಏನೇನೋ ಮಾತನಾಡಿ ಪುಷ್ಪ ತಂಡವನ್ನು ಟ್ರೋಲ್​ ದಾಳಕ್ಕೆ ನೂಕಿದ್ದಾರೆ. ​

    ಪುಷ್ಪ ತಂಡ ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ 2003 ಕೋಟಿ ರೂಪಾಯಿ ಸಂಗ್ರಹ ಮಾಡಿದೆ ಎಂದು ವೇದಿಕೆ ಮೇಲೆಯೇ ಉದಯ್​ ಭಾನು ಘೋಷಣೆ ಮಾಡಿದರು. ಆದರೆ, ಪುಷ್ಪ ತಂಡ ಗಳಿಸಿರುವುದು 203 ಕೋಟಿ ರೂಪಾಯಿ. ಮಾತಿನ ಭರದಲ್ಲಿ ನಾಲಿಗೆ ತಡವರಿಸಿ 203 ಕೋಟಿ ರೂ. ಅನ್ನುವ ಬದಲು 2003 ಕೋಟಿ ರೂಪಾಯಿ ಎಂದಿದ್ದಾರೆ. ಆ್ಯಂಕರ್​ ಮಾಡಿದ ಯಡವಟ್ಟಿಗೆ ಬೇರೆ ನಟರ ಅಭಿಮಾನಿಗಳು ಇದೀಗ ಅಲ್ಲು ಅರ್ಜುನ್​ ಅವರನ್ನು ಗೇಲಿ ಮಾಡತೊಡಗಿದ್ದಾರೆ.

    ನಕಲಿ ಹಣ ಸಂಗ್ರಹದಲ್ಲೇ ಇದು ಹೊಸ ಗರಿಷ್ಠ ಮೊತ್ತ ಎಂದು ನೆಟ್ಟಿಗರು ಚಿತ್ರತಂಡದ ಕಾಲೆಳೆಯುತ್ತಿದ್ದಾರೆ. ಆ್ಯಂಕರ್​ ಘೋಷಣೆ ಸಂಬಂಧ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಹೆಚ್ಚು ರೀಟ್ವೀಟ್​ ಮತ್ತು ಲೈಕ್ಸ್​ಗಳು ಹರಿದುಬರುತ್ತಿರುವುದು ಸಿನಿಮಾ ತಂಡಕ್ಕೆ ಇರುಸು-ಮುರುಸು ತರಿಸಿದೆ.

    ಇದೆಲ್ಲದರ ನಡುವೆಯೂ ಪುಷ್ಪ ತಂಡ ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಚಾರದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಪ್ಲಾನ್​ ಮಾಡಿದೆ. ಆರ್​ಆರ್​ಆರ್​ ಚಿತ್ರ ಬಿಡುಗಡೆಯವರೆಗಾದ್ರೂ ಒಳ್ಳೆಯ ಹಣ ಸಂಗ್ರಹ ಮಾಡಲು ಚಿತ್ರತಂಡ ಅಬ್ಬರ ಪ್ರಚಾರ ಮಾಡಲು ಯತ್ನಿಸುತ್ತಿದೆ. (ಏಜೆನ್ಸೀಸ್​)

    ಬೀದಿ ನಾಯಿಗಳಿಗೆ ಊಟ ಹಾಕಲು ಬಂದ ಮಹಿಳೆಗೆ ಮರ್ಮಾಂಗ ತೋರಿದ ಕಾನ್ಸ್​ಟೇಬಲ್: ಸ್ಥಳದಲ್ಲೇ ಹೈಡ್ರಾಮ

    ಡಿವೋರ್ಸ್​ ಪರಿಹಾರ ನೀಡಲು ದುಬೈ ಪ್ರಧಾನಿಗೆ ಕೋರ್ಟ್​ ಆದೇಶ: ಪರಿಹಾರ ಮೊತ್ತ ಕೇಳಿದ್ರೆ ಬೆರಗಾಗೋದು ಖಂಡಿತ!

    50 ಕೋಟಿ ರೂ. ದೋಚಿದ ಸೆಕೆಂಡ್​ ಹ್ಯಾಂಡ್​ ಐಟಂ ಎಂದ ಟ್ವಿಟ್ಟಿಗನಿಗೆ ಸಮಂತಾ​ ಕೊಟ್ಟ ಉತ್ತರ ಹೀಗಿತ್ತು…

    ದುಬಾರಿ ಆ್ಯಪಲ್ ವಾಚ್​ ಬುಕ್​ ಮಾಡಿದ್ದ ಖ್ಯಾತ ನಟನಿಗೆ ಶಾಕ್​ ಕೊಟ್ಟ ಆನ್​ಲೈನ್​ ಕಂಪನಿ: ಕೋರ್ಟ್​ನಲ್ಲಿ ಕೇಸ್​ ರಿವರ್ಸ್​ ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts