ಹೈದರಾಬಾದ್: ಮಾಡೆಲಿಂಗ್ ಕ್ಷೇತ್ರದಲ್ಲಿ ಮಾನುಷಿ ಚಿಲ್ಲರ್ ಹೆಸರು ಚಿರಪರಿಚಿತ. 2017ರಲ್ಲಿ ವಿಶ್ವ ಸುಂದರಿ ಕಿರೀಟ ಮುಡಿಗೇರುತ್ತಿದ್ದಂತೆ, ರಾಷ್ಟ್ರದ ಗಮನ ಸೆಳೆದಿದ್ದರು ಈ ಹರಿಯಾಣ ತರುಣಿ. ಆದರೆ, ವಿಶ್ವ ಸುಂದರಿ ಪಟ್ಟ ಸಿಕ್ಕ ಬಳಿಕ ಅವರ ಸಿನಿಮಾ ಕರಿಯರ್ ಮಾತ್ರ ವೇಗ ಪಡೆದುಕೊಳ್ಳಲೇ ಇಲ್ಲ. ಸಾಕಷ್ಟು ಸಿನಿಮಾಗಳಲ್ಲಿ ಅವರ ಹೆಸರು ತಳುಕು ಹಾಕಿಕೊಂಡರೂ, ಅಧಿಕೃತ ಅಂತ ಆಗಿದ್ದು ಅಕ್ಷಯ್ ಕುಮಾರ್ ಜತೆಗಿನ ಪೃಥ್ವಿರಾಜ್ ಸಿನಿಮಾವೊಂದೆ.
ಇದೀಗ ಪೃಥ್ವಿರಾಜ್ ಸಿನಿಮಾ ಬಿಡುಗಡೆಯಾಗಿದ್ದು, ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಬಿಡುಗಡೆಗು ಮುನ್ನ ಚಿತ್ರದ ಪ್ರಚಾರದ ಭಾಗವಾಗಿ ಮಾಧ್ಯಮ ಸಂದರ್ಶನಗಳಲ್ಲಿ ಭಾಗವಹಿಸಿದ ಮಾನುಷಿ ಚಿಲ್ಲರ್ ಕೆಲವೊಂದು ಆಸಕ್ತಿದಾಯ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.
ಆರ್ಆರ್ಆರ್ ಸಿನಿಮಾ ವೀಕ್ಷಣೆ ಬಳಿಕ ನಾನು ರಾಮ್ಚರಣ್ ಅಭಿಮಾನಿಯಾಗಿದ್ದೇನೆ. ಅವರ ಜತೆ ನಟಿಸಲು ಬಯಸಿದ್ದೇನೆ. ಒಂದು ವೇಳೆ ರಾಮ್ಚರಣ್ ಅವರಿಗೆ ಮದುವೆ ಆಗಿರದಿದ್ದರೆ, ನಾನೇ ಅವರ ಬಳಿ ಹೋಗಿ ಡೇಟಿಂಗ್ಗೆ ಕರೆಯುತ್ತಿದ್ದೆ. ಈಗಲೂ ರಾಮ್ಚರಣ್ ಡೇಟಿಂಗ್ಗೆ ಒಪ್ಪಿದರೆ, ಇಬ್ಬರು ಒಟ್ಟಿಗೆ ಸಿನಿಮಾ ವೀಕ್ಷಿಸಲಿದ್ದೇವೆ ಮತ್ತು ನೆಚ್ಚಿನ ತಿನಿಸುಗಳನ್ನು ತಿನ್ನುತ್ತಾ ಪರಸ್ಪರ ಮಾತುಕತೆ ನಡೆಸುತ್ತೇವೆ ಎಂದು ಮಾನುಷಿ ಹೇಳಿದ್ದಾರೆ.
ಸದ್ಯ ಮಾನುಷಿ ಚಿಲ್ಲರ್ ಹೇಳಿಕೆ ರಾಮ್ಚರಣ್ ಅಭಿಮಾನಿಗಳಿಗೆ ಖುಷಿ ತರಿಸಿದೆ. ನೀವು ಅಂದುಕೊಂಡಂತೆ ರಾಮ್ಚರಣ್ ಜತೆ ನಟಿಸುವಂತಾಗಲಿ ಎಂದು ಹರಸಿದ್ದಾರೆ. ಪೃಥ್ವಿರಾಜ್, ಮಾನುಷಿ ಅವರ ಮೊದಲ ಚಿತ್ರವಾಗಿದ್ದು, ಇಂದು ದೇಶಾದ್ಯಂತ ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಿನಿಮಾಗಳಲ್ಲಿ ಮಾನುಷಿ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ. (ಏಜೆನ್ಸೀಸ್)
ಮಹಾರಾಷ್ಟ್ರ ಸೇರಿ ದೇಶದ ಕೇಂದ್ರ ಭಾಗಗಳಲ್ಲಿ ಮಾನ್ಸೂನ್ ಮಾರುತಗಳು ವಾಡಿಕೆಗಿಂತ ವಿಳಂಬ ಸಾಧ್ಯತೆ
ಪಾಲಕರ ವಿರೋಧದ ಮಧ್ಯೆಯೂ ಪ್ರೀತಿಸಿ ಮದ್ವೆಯಾದ ಮರುದಿನವೇ ಗಂಡನಿಗೆ ಶಾಕ್ ಕೊಟ್ಟ ಯುವತಿ!