ಮಂಗಳೂರು: ನಗರದ ಪರಾರಿ ಎಂಬಲ್ಲಿ ಬಾಲಕಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳೆಲ್ಲರು ಮಧ್ಯಪ್ರದೇಶ ಮತ್ತು ಜಾರ್ಖಂಡ ಮೂಲದವರು.
ನವೆಂಬರ್ 21ರಂದು ಬಾಲಕಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದ ಕಾಮಾಂಧರು ಬಳಿಕ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿದ್ದರು. ಟೈಲ್ಸ್ ಫ್ಯಾಕ್ಟರಿಯ ಆವರಣದಲ್ಲಿ ಸಂಜೆ ವೇಳೆ ಈ ಪೈಶಾಚಿಕ ಕೃತ್ಯ ನಡೆದಿತ್ತು. ಗ್ಯಾಂಗ್ರೇಪ್ ಬಳಿಕ ಬಾಲಕಿಯನ್ನು ಉಸಿರುಗಟ್ಟಿಸಿ ಕಾಮಾಂಧರು ಕೊಲೆ ಮಾಡಿದ್ದರು.
ಜಾರ್ಖಂಡ ಮೂಲದ ಮೃತ ಬಾಲಕಿಯ ಕುಟುಂಬ ಕಳೆದ ಎರಡು ವರ್ಷಗಳಿಂದ ಟೈಲ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿತ್ತು. ನವೆಂಬರ್ 21ರಂದು ಇದ್ದಕ್ಕಿದ್ದಂತೆ ಕಾರ್ಮಿಕನ ಪುತ್ರಿ ನಾಪತ್ತೆಯಾಗಿದ್ದಳು. ಬಳಿಕ ಆಕೆಯ ಮೃತದೇಹ ಫ್ಯಾಕ್ಟರಿಯ ಚರಂಡಿಯಲ್ಲಿ ಪತ್ತೆಯಾಗಿದೆ. ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಆರೋಪಿಗಳು ಕೊಲೆ ಮಾಡಿ ಟೈಲ್ಸ್ ಫ್ಯಾಕ್ಟರಿಯ ಡ್ರೈನೇಜ್ ನಲ್ಲಿ ಹಾಕಿದ್ದರು.
ಈ ಪ್ರಕರಣವನ್ನು ಮಂಗಳೂರು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರು. ಪೊಲೀಸ್ ಆಯುಕ್ತ ಶಶಿಕುಮಾರ್ ಅವರು 4 ಪೊಲೀಸ್ ಅಧಿಕಾರಿಗಳ ತಂಡ ರಚಿಸಿ, ತನಿಖೆ ನಿರ್ದೇಶನ ನೀಡಿದ್ದರು. ಇದಾದ ಬಳಿಕ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತಿದ್ದ 20 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ನಾಲ್ವರು ಆರೋಪಿಗಳ ಕೃತ್ಯ ಬಯಲಾಗಿದ್ದು ಆರೋಪಿಗಳನ್ನು ಬಂಧಿಸಲಾಗಿದೆ. (ದಿಗ್ವಿಜಯ ನ್ಯೂಸ್)
ಬೆಂಗಳೂರಿನಿಂದ ಸಹಸ್ರಕೋಟ್ಯಧೀಶ್ವರ ‘ಕೆಜಿಎಫ್ ಬಾಬು’ ಕಣಕ್ಕೆ- ಇವರ ಆಸ್ತಿಯ ಮೊತ್ತಕ್ಕೆ ಎಂಟಿಬಿ, ಡಿಕೆಶಿಯೂ ಸುಸ್ತು!
PWD ಇಂಜಿನಿಯರ್ ಮನೆಯ ಬಕೆಟ್ನಲ್ಲೂ ದುಡ್ದು, ನೀರಿನ ಪೈಪ್ನಲ್ಲೂ ಹರಿಯುತ್ತಿದೆ ಕಂತೆ ಕಂತೆ ನೋಟು!
ವಿವಾದಿತ ಮೂರು ಕೃಷಿ ಕಾಯ್ದೆ ರದ್ದು ಮಾಡುವ ಸರ್ಕಾರದ ಪ್ರಸ್ತಾವನೆಗೆ ಸಚಿವ ಸಂಪುಟ ಅನುಮೋದನೆ