ಕೊಯಿಕ್ಕೋಡ್: ಕಾಡು ಹಂದಿಯೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಕೇರಳದ ಥೊಂಡಾಯಾಡ್ ಬೈಪಾಸ್ನಲ್ಲಿ ಗುರುವಾರ ನಡೆದಿದೆ.
ಮೃತ ವ್ಯಕ್ತಿಯನ್ನು ಸಿದ್ದಿಖ್ (33) ಎಂದು ಗುರುತಿಸಲಾಗಿದೆ. ಈ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಬೈಕ್ನಲ್ಲಿ ಹೋಗುವಾಗ ದಿಢೀರನೇ ಎದುರಾದ ಕಾಡು ಹಂದಿ ಡಿಕ್ಕಿ ಹೊಡೆದು ಅಲ್ಲಿಂದ ಪರಾರಿಯಾಯಿತು.
ಇತ್ತ ಡಿಕ್ಕಿಯ ರಭಸಕ್ಕೆ ಬೈಕ್ನಿಂದ ಕೆಳಗೆ ಬಿದ್ದ ಸಿದ್ದಿಖ್ ತಲೆಗೆ ಭಾರೀ ಪೆಟ್ಟಾಗಿತ್ತು. ತಕ್ಷಣ ಆತನನ್ನು ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿದಾದರೂ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾನೆ. ಈ ಸಂಬಂಧ ಥೊಂಡಾಯಾಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್)
ಕಣ್ಣೀರಿನ ಶಾಪ ತಟ್ಟದೇ ಬಿಡುತ್ತಾ? ಹೆತ್ತ ತಾಯಿ ಮೇಲೆ ಹಲ್ಲೆ ಮಾಡಿದ ಯೋಧನಿಗೆ ಎದುರಾಯ್ತು ಕಂಟಕ
ದೂರುದಾರನಿಗೆ ತನ್ನ ಕಾರನ್ನೇ ಕೊಟ್ಟ ತುಮಕೂರು ಎಸ್ಪಿ! ಠಾಣೆ ಮುಂದೆ ಕಾರು ಬರ್ತಿದ್ದಂತೆ ಪಿಎಸ್ಐ ಗಢಗಢ
ಚಂದನ್ ಶೆಟ್ಟಿ ಮರ್ಯಾದೆಯಾದ್ರೂ ಉಳಿಸು… ಪ್ರ್ಯಾಂಕ್ ವಿಡಿಯೋ ಹರಿಬಿಟ್ಟ ನಿವೇದಿತಾಗೆ ನೆಟ್ಟಿಗರ ಪಾಠ!