ತಿರುವನಂತಪುರಂ: ತಾನು ಕೆಲಸ ಮಾಡುವ ಸ್ಥಳದಲ್ಲಿ ಲಿಫ್ಟ್ ಬಾಗಿಲ ನಡುವೆ ತಲೆ ಸಿಲುಕಿ ಉದ್ಯೋಗಿಯೊಬ್ಬ ಮೃತಪಟ್ಟಿರುವ ದಾರುಣ ಘಟನೆ ಕೇರಳದ ತಿರುವನಂಪುರಂನಲ್ಲಿ ನಡೆದಿದೆ.
ನೆಮೊಮ್ ಮೂಲದ ಸತೀಶ್ ಕುಮಾರ್ (59) ಮೃತ ದುರ್ದೈವಿ. ಸತೀಶ್ ಅಂಬಾಲಮುಕ್ಕುವಿನಲ್ಲಿರುವ ಎಸ್ಕೆಪಿ ಸ್ಯಾನಿಟರಿ ಸ್ಟೋರ್ನಲ್ಲಿ ಉದ್ಯೋಗಿಯಾಗಿದ್ದ. ಲಿಫ್ಟ್ ಒಳಗೆ ಸರಕುಗಳನ್ನು ತುಂಬಿಕೊಂಡು ಶಾಪ್ಗೆ ತೆಗೆದುಕೊಂಡು ಹೋಗುವಾಗ ಎಲಿವೇಟರ್ನ ಬಾಗಿಲಿಗೆ ತಲೆ ಸಿಲುಕಿ ಮೃತಪಟ್ಟಿದ್ದಾನೆ.
ಅಗ್ನಿಶಾಮಕ ಸಿಬ್ಬಂದಿ ಬಹುಬೇಗನೇ ಸ್ಥಳಕ್ಕೆ ಧಾವಿಸಿ ಸತೀಶ್ನನ್ನು ಲಿಫ್ಟ್ನಿಂದ ಹೊರಗೆ ತೆಗೆಯುವ ಪ್ರಯತ್ನ ಮಾಡಿದಾದರೂ ಆತನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಸತೀಶ್ ಕೊನೆಯುಸಿರೆಳಿದಿದ್ದಾರೆ. (ಏಜೆನ್ಸೀಸ್)
ವಿಜಯ್ಗೂ ಚಮಕ್ ಕೊಟ್ರಾ ಚರಿಷ್ಮಾ ಸುಂದರಿ? ರಶ್ಮಿಕಾ ಬಗ್ಗೆ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆ!
ಸಂಬಂಧಿಯೊಬ್ಬ ಕಳುಹಿಸಿದ ವಿಡಿಯೋ ನೋಡಿದ ಬೆನ್ನಲ್ಲೇ ತಂಗಿಯನ್ನೇ ಗುಂಡಿಟ್ಟು ಹತ್ಯೆಗೈದ ಸಹೋದರ..!
ಮಗನಿಗೆ PSI ಹುದ್ದೆ ಕೊಡಿಸಲು ಅಕ್ರಮ ಹಾದಿ ಹಿಡಿದು ಲಕ್ಷ ಲಕ್ಷ ರೂ. ಕೊಟ್ಟ ಶಿಕ್ಷಕನ ಕತೆ ಇದೀಗ ಹೇಳತೀರದು!