ಮುಂಬೈ: ಮರ್ಡರ್ ಸಿನಿಮಾ ಮೂಲಕ ಬಾಲಿವುಡ್ನಲ್ಲಿ ಸಂಚಲನ ಮೂಡಿಸಿದ ಬೋಲ್ಡ್ ಬ್ಯೂಟಿ ಮಲ್ಲಿಕಾ ಶೆರಾವತ್ ಸಾಕಷ್ಟು ವರ್ಷಗಳ ಬಳಿಕ ಮತ್ತೆ ಬಣ್ಣ ಹಚ್ಚಿದ್ದು, ಅವರ ನಟನೆಯ “ಆರ್ಕೆ” ಚಿತ್ರ ಜುಲೈ 22ರಂದು ಬಿಡುಗಡೆಗೊಂಡು ಜನರ ಗಮನ ಸೆಳೆದಿದೆ. ಇದರ ನಡುವೆ ಮಲ್ಲಿಕಾ, ಬಾಲಿವುಡ್ನ ಕೊಳಕು ಮನಸ್ಥಿತಿಗಳ ಬಗ್ಗೆ ಧೈರ್ಯದಿಂದ ಮಾತನಾಡಿದ್ದಾರೆ.
ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿರುವ ಮಲ್ಲಿಕಾ, ಸಂಧಾನಕ್ಕೆ ಒಪ್ಪಿಕೊಳ್ಳದಿದ್ದಕ್ಕೆ ಸಾಕಷ್ಟು ಸಿನಿಮಾಗಳಿಂದ ಅವರನ್ನು ಕೈಬಿಟ್ಟಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ. ನಾನು ಲೈಂಗಿಕ ಸಂಧಾನವನ್ನು ನಿರಾಕರಿಸಿದ್ದಕ್ಕೆ ಬಾಲಿವುಡ್ನ ಎ-ಪಟ್ಟಿಯಲ್ಲಿರುವ ಅಥವಾ ಮುಂಚೂಣಿಯಲ್ಲಿದ್ದ ಬಾಲಿವುಡ್ ನಟರು ನನ್ನೊಂದಿಗೆ ಕೆಲಸ ಮಾಡಲು ನಿರಾಕರಿಸಿದರು. ನಟರು ತಾವು ನಿಯಂತ್ರಿಸಬಹುದಾದ ಮತ್ತು ಅವರೊಂದಿಗೆ ರಾಜಿ ಮಾಡಿಕೊಳ್ಳುವ ನಟಿಯರನ್ನು ಇಷ್ಟಪಡುತ್ತಾರೆ. ಆದರೆ, ನಾನು ಹಾಗಲ್ಲ, ನನ್ನ ವ್ಯಕ್ತಿತ್ವ ಅದಲ್ಲ. ನಾನು ಯಾರೊಬ್ಬರ ಆಸೆ ಮತ್ತು ಅಭಿಮಾನಗಳಿಗೆ ಒಳಗಾಗಲು ಬಯಸುವುದಿಲ್ಲ ಎಂದರು.
ಮುಂಜಾನೆ 3 ಗಂಟೆಗೆ ನಟನೊಬ್ಬ ನಿಮಗೆ ಕರೆ ಮಾಡಿ, ನನ್ನ ಮನೆಗೆ ಬಾ ಎಂದು ಕರೆದರೆ, ಒಂದು ವೇಳೆ ನೀವು ಆ ವಲಯದಲ್ಲಿ ಇದ್ದರೆ ಮತ್ತು ನೀವು ಆ ಚಿತ್ರ ಮಾಡುತ್ತಿದ್ದರೆ ಹೋಗಲೇಬೇಕು. ನೀವೇನಾದರೂ ಹೋಗದಿದ್ದರೆ, ನಿಮ್ಮನ್ನು ಆ ಸಿನಿಮಾದಿಂದಲೇ ಹೊರ ಹಾಕುತ್ತಾರೆಂದು ಮಲ್ಲಿಕಾ ತಿಳಿಸಿದರು.
ಈ ಹಿಂದಿನ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಮಲ್ಲಿಕಾ, ಗೆಹ್ರಾಯಿಯಾಂ ಸಿನಿಮಾದಲ್ಲಿ ದೀಪಿಕಾ ಏನು ಮಾಡಿದ್ದಾರೋ ಅದನ್ನೇ ನಾನು 15 ವರ್ಷಗಳ ಹಿಂದೆಯೇ ಮರ್ಡರ್ ಸಿನಿಮಾದಲ್ಲಿ ಮಾಡಿದ್ದೆ. ಆದರೆ, ಅಂದು ಜನರು ಒಂದೇ ಚೌಕಟ್ಟಿನಲ್ಲಿ ಯೋಚಿಸುತ್ತಿದ್ದರು. ಕಿಸ್ಸಿಂಗ್ ಮತ್ತು ಬಿಕಿನಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಕ್ಕೆ ನನ್ನ ವಿರುದ್ಧ ಮುಗಿಬಿದ್ದರು. ಸಿನಿಮಾ ಇಂಡಸ್ಟ್ರಿಯಲ್ಲೇ ಇರುವ ಕೆಲವು ಮಂದಿ ನನಗೆ ಕಿರುಕುಳ ನೀಡಿದರು. ನಟನೆ ಎಂದರೆ ಕೇವಲ ಗ್ಲಾಮರ್ ಅಲ್ಲ ಎಂದು ಬಹಳಷ್ಟು ಜನ ಕಿಡಿಕಾರಿದರು. ದಶಾವತಾರಂ, ಪ್ಯಾರ್ಕಿ ಸೈಡ್ ಎಫೆಕ್ಟ್ಸ್ ಮತ್ತು ವೆಲ್ಕಮ್ ಚಿತ್ರಗಳನ್ನು ಮಾಡಿದರೂ ಯಾರೊಬ್ಬರು ನನ್ನ ನಟನೆಯನ್ನು ಗುರುತಿಸಲಿಲ್ಲ ಎಂದು ಮಲ್ಲಿಕಾ ಹೇಳಿಕೊಂಡಿದ್ದರು.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಆರ್ಕೆ ಸಿನಿಮಾ ಜುಲೈ 22 ರಂದು ತೆರೆಗೆ ಅಪ್ಪಳಿಸಿ, ಜನರ ಗಮನ ಸೆಳೆದಿದೆ. ಈ ಚಿತ್ರದಲ್ಲಿ ಮಲ್ಲಿಕಾ ಶೆರಾವತ್ ಜತೆಗೆ ಕಬ್ರಾ ಸೇಠ್, ರಣವೀರ್ ಶೋರೆ, ಮನು ರಿಶಿಖಾದ್ದ, ಚಂದ್ರಚೂರ್ ರಾಯ್ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. (ಏಜೆನ್ಸೀಸ್)
ದೀಪಿಕಾ ಈಗ ಏನು ಮಾಡಿದ್ದಾರೋ ಅದನ್ನು 15 ವರ್ಷದ ಹಿಂದೆಯೇ ನಾನು ಮಾಡಿದ್ದೆ: ಮಲ್ಲಿಕಾರ ನೋವಿನ ಮಾತಿದು
ಭೀಕರ ಕಾರು ಅಪಘಾತದಲ್ಲಿ ಕಾಂಗ್ರೆಸ್ ನಾಯಕನ ಮಗಳು, ಬ್ಯೂಟಿಷಿಯನ್ ದುರಂತ ಸಾವು
ಕಾಬೂಲ್ನಲ್ಲಿ ಅಮೆರಿಕ ನಡೆಸಿದ ವಾಯುದಾಳಿಗೆ ಅಲ್ಖೈದಾ ನಾಯಕ ಐಮನ್ ಅಲ್-ಜವಾಹಿರಿ ಬಲಿ