ಬೆಂಗಳೂರು: ಕೆಜಿಎಫ್ ಚಾಪ್ಟರ್ 1 ಮತ್ತು 2 ಭರ್ಜರಿ ಯಶಸ್ಸಿನ ಬಳಿಕ ನಟ ಯಶ್ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ಯಶ್ ಅವರ ಮುಂದಿನ ಸಿನಿಮಾ ಬಗ್ಗೆ ತೀವ್ರ ಕೂತೂಹಲ ಮೂಡಿದೆ. ಇದರ ಬೆನ್ನಲ್ಲೇ ಕೆಜಿಎಫ್ ಸಿನಿಮಾ ನಿರ್ಮಾಪಕ ವಿಜಯ್ ಕಿರಗಂದೂರು ಯಶ್ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಇತ್ತೀಚೆಗೆ ಬಾಲಿವುಡ್ ಹಂಗಾಮ ನಡೆಸಿದ ಸಂದರ್ಶನದಲ್ಲಿ ವಿಜಯ್ ಕಿರಗಂದೂರು ಯಶ್ ಖ್ಯಾತಿಯ ಬಗ್ಗೆ ಮಾತನಾಡಿದರು. ಕೆಜಿಎಫ್ 2 ಗೆಲುವಿನ ಬಳಿಕ ನಟ ಯಶ್ ಕನ್ನಡ ಅಥವಾ ದಕ್ಷಿಣ ಭಾರತದ ನಟನಾಗಿ ಉಳಿದಿಲ್ಲ. ಅವರು ಇನ್ಮುಂದೆ ಭಾರತೀಯ ಸಿನಿಮಾ ರಂಗದ ಸೂಪರ್ ಸ್ಟಾರ್ ಆಗಿದ್ದಾರೆ ಎಂದರು.
ಕೆಜಿಎಫ್ ಚಿತ್ರದಲ್ಲಿ ತಮ್ಮ ಮ್ಯಾನರಿಸಂನಿಂದ ವಿಶ್ವದಾದ್ಯಂತ ಸಾಕಷ್ಟು ಅಭಿಮಾನಿಗಳನ್ನು ಯಶ್ ಸಂಪಾದಿಸಿದ್ದಾರೆ. ಇನ್ಮುಂದೆ ಅವರು ಸಣ್ಣ ಸಿನಿಮಾಗಳಲ್ಲಿ ನಟಿಸುವುದಿಲ್ಲ. ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಮಾತ್ರ ನಟಿಸಲಿದ್ದಾರೆ. ಆ ಮಟ್ಟಕ್ಕೆ ಯಶ್ ತಲುಪಿದ್ದಾರೆ. ಭವಿಷ್ಯದಲ್ಲಿ ಯಾವುದೇ ಕಾರಣಕ್ಕೂ ಸಣ್ಣ ಸಿನಿಮಾಗಳನ್ನು ಯಶ್ ಮಾಡುವುದಿಲ್ಲ. ಯಶ್ ಬಹುದೊಡ್ಡ ಗುರಿ ಇಟ್ಟುಕೊಂಡಿದ್ದಾರೆ ಎಂದು ವಿಜಯ್ ಕಿರಗಂದೂರು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ವಿಜಯ್ ಕಿರಗಂದೂರು ಅವರಿಗೆ ಕೆಜಿಎಫ್ ಚಾಪ್ಟರ್-3 ಬಗ್ಗೆ ಕೇಳಲಾಯಿತು. ಮುಂದಿನ ಭಾಗದ ಕೆಲವು ವಿವರಗಳನ್ನು ಬಹಿರಂಗಪಡಿಸಿದ ವಿಜಯ್, ಮುಂಬರುವ ಎರಡು-ಮೂರು ವರ್ಷಗಳಲ್ಲಿ ಜನರು ಕೆಜಿಎಫ್ 3 ಅನ್ನು ಚಿತ್ರಮಂದಿರಗಳಲ್ಲಿ ನಿರೀಕ್ಷಿಸಬಹುದು ಎಂದರು. ಕೆಜಿಎಫ್-3 ಪ್ರಶಾಂತ್ ನೀಲ್ ಮತ್ತು ಯಶ್ ಇಬ್ಬರ ಮೇಲೆ ಅವಲಂಬಿತವಾಗಿರುತ್ತದೆ. ಸದ್ಯ ಪ್ರಶಾಂತ್, ಸಲಾರ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಯಶ್ ಹೊಸ ಯೋಜನೆಯನ್ನು ಪ್ರಾರಂಭಿಸಬಹುದು. ಇಬ್ಬರು ಯಾವಾಗ ಬಿಡುವು ಮಾಡಿಕೊಳ್ಳುತ್ತಾರೆ ಎಂಬುದು ಗೊತ್ತಿಲ್ಲ. ಆದ್ದರಿಂದ, ನಮಗೆ ಕೆಜಿಎಫ್-3 ಬಗ್ಗೆ ನಿಗದಿತ ಟೈಮ್ಲೈನ್ ಇಲ್ಲ ಎಂದರು.
ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಅವರ ಮುಂದಿನ ಚಿತ್ರ ಸಲಾರ್. ಇದು ಕೂಡ ದೊಡ್ಡ ಬಜೆಟ್ನ ಪ್ಯಾನ್ ಇಂಡಿಯಾ ಸಿನಿಮಾ. ಚಿತ್ರದಲ್ಲಿ ಪ್ರಭಾಸ್ ಮತ್ತು ಶ್ರುತಿ ಹಾಸನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 2023ರಲ್ಲಿ ಎರಡನೇ ಅಥವಾ ಮೂರನೇ ತ್ರೈಮಾಸಿಕದಲ್ಲಿ ಬಿಡುಗಡೆಯಾಗಲಿದೆ ಎಂದು ಕಿರಗಂದೂರು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. (ಏಜೆನ್ಸೀಸ್)
ಈ ಬಗ್ಗೆ ಸ್ವಲ್ಪ ಕಾಳಜಿ ವಹಿಸಿ ನೀಲ್! ಕೆಜಿಎಫ್ ನಿರ್ದೇಶಕರ ವಿರುದ್ಧ ಅಭಿಮಾನಿಗಳ ಅಸಮಾಧಾನ
ಆಟೋದಲ್ಲಿ ಹೋಗುವಾಗ ಅಡ್ಡಗಟ್ಟಿದ ಪೊಲೀಸ್ ಪೇದೆ ಆಡಿದ ಕೆಟ್ಟ ಮಾತು ಕೇಳಿ ನಟಿ ಅರ್ಚನಾ ಆಕ್ರೋಶ!
ಬರೋಬ್ಬರಿ 12 ಲಕ್ಷ ರೂ. ಖರ್ಚು ಮಾಡಿ ನಾಯಿಯಂತೆ ಬದಲಾದ ವ್ಯಕ್ತಿ! ಕಾರಣ ಕೇಳಿದ್ರೆ ಹುಬ್ಬೇರಿಸುತ್ತೀರಾ!