ಹೈದರಾಬಾದ್: ಕಡಿಮೆ ಅವಧಿಯವರೆಗೆ ಕೆಲಸ ಮಾಡಿ, ಉದ್ಯೋಗವನ್ನು ಬಿಟ್ಟ ಮಹಿಳೆಯೊಬ್ಬಳ ಅಧಿಕೃತ ಶಾಲಾ ಪ್ರಮಾಣ ಪತ್ರಗಳನ್ನು ನೀಡುವಲ್ಲಿ ವಿಫಲವಾದ ಐಸಿಐಸಿಐ ಬ್ಯಾಂಕ್ ಮಹಿಳೆಗೆ ಪರಿಹಾರವಾಗಿ 1.15 ಲಕ್ಷ ರೂಪಾಯಿಗಳನ್ನು ನೀಡಿದೆ.
ಶ್ರೀನಿಜಾ ಎಂಬುವರು ಹೈದರಾಬಾದ್ನ ಐಸಿಐಸಿಐ ಬ್ಯಾಂಕ್ ಒಂದರಲ್ಲಿ ಕಡಿಮೆ ಅವಧಿಗೆ ಕೆಲಸ ಮಾಡಿ ಕೆಲ ಕಾರಣಗಳಿಂದಾಗಿ ಉದ್ಯೋಗ ಬಿಟ್ಟಿದ್ದರು. ಬಳಿಕ ತನ್ನ ಅಧಿಕೃತ ಶಾಲಾ ಪ್ರಮಾಣ ಪತ್ರಗಳು ಬೇಕೆಂದು ಬ್ಯಾಂಕ್ನಲ್ಲಿ ಕೇಳಿದ್ದರು. ಆದರೆ, ಕಳೆದುಹೋಗಿವೆ ಎಂದು ಬ್ಯಾಂಕ್ ಸಿಬ್ಬಂದಿ ಉಡಾಫೆ ಉತ್ತರ ನೀಡಿದ ಬೆನ್ನಲ್ಲೇ ಶ್ರೀನಿಜಾ ಲೋಕ್ ಅದಾಲತ್ ಮೆಟ್ಟಿಲು ಏರಿದ್ದರು.
ಪ್ರಕರಣ ಸಂಬಂಧ ಶನಿವಾರ ಲೋಕ್ ಅದಾಲತ್ ವಿಚಾರಣೆ ನಡೆಸಿ ಶ್ರೀನಿಜಾ ಅವರಿಗೆ 1.15 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ. ಅದರಂತೆ ಬ್ಯಾಂಕ್ ಕೂಡ ಪರಿಹಾರವನ್ನು ನೀಡಿ ಪ್ರಕರಣಕ್ಕೆ ತೆರೆ ಎಳೆದಿದೆ.
ಮತ್ತೊಂದು ಪ್ರಕರಣದಲ್ಲಿ ಜೊಮ್ಯಾಟೋ ಡೆಲಿವರಿ ಬಾಯ್ನಿಂದ ಅಪಘಾತಕ್ಕೆ ಒಳಗಾದ ಮಹಿಳೆ ಗಾಯಗೊಂಡು ಪರಿಹಾರಕ್ಕಾಗಿ ಸಿಕಂದರಾಬಾದ್ ಸಿವಿಲ್ ಕೋರ್ಟ್ಗೆ ಅರ್ಜಿ ಹಾಕಿದ್ದಳು. ನ್ಯಾಯಾಲಯವು 30,000 ರೂ. ಪಾವತಿಸುವಂತೆ ಆದೇಶಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಡೆಲಿವರಿ ಬಾಯ್, ನನ್ನ ಆರ್ಥಿಕ ಪರಿಸ್ಥಿತಿಯು ದೊಡ್ಡ ಮೊತ್ತವನ್ನು ಪಾವತಿಸುವಷ್ಟು ಉತ್ತಮವಾಗಿಲ್ಲ. ಹೀಗಾಗಿ ಕಂತುಗಳಲ್ಲಿ ಪಾವತಿಸುಸುತ್ತೇನೆಂದು ಕೇಳಿಕೊಂಡಿದ್ದಾರೆ. (ಏಜೆನ್ಸೀಸ್)
ಪದವೀಧರರಿಗೆ ಗುಡ್ನ್ಯೂಸ್- 6100 ಮಂದಿ ಅಪ್ರೆಂಟಿಸ್ಗೆ ಆಹ್ವಾನಿಸಿದ ಎಸ್ಬಿಐ
ತಮ್ಮನ ಸ್ಕೂಟರ್ ರಗಳೆ ಕೇಳಲಾಗದೆ ಅಣ್ಣ ಮಾಡಿದ ಕೆಲಸಕ್ಕೆ ಪೂರ್ತಿ ದೇಶದ ಮೆಚ್ಚುಗೆ