More

    ಲಾಟರಿ ಮೂಲಕ ಇಬ್ಬರು ಯುವತಿಯರಲ್ಲಿ ಒಬ್ಬಳ ಆಯ್ಕೆ! ಹಾಸನದ ವಿಚಿತ್ರ ಪ್ರೇಮ ಪ್ರಕರಣಕ್ಕೆ ಸ್ಫೋಟಕ ತಿರುವು

    ಹಾಸನ: ಹಾಸನದಲ್ಲೊಂದು ವಿಚಿತ್ರ ಪ್ರೇಮ ಪ್ರಕರಣ ಬೆಳಕಿಗೆ ಬಂದಿದೆ. ಇಬ್ಬರು ಯುವತಿಯರನ್ನು ಪ್ರೀತಿಸಿದ್ದ ಯುವಕ ಕೊನೆಗೆ ಇಬ್ಬರ ಕೈಗೂ ಸಿಕ್ಕಿಬಿದ್ದು ಪೆಚಾಟಕ್ಕೆ ಸಿಲುಕಿದ್ದಲ್ಲದೆ, ಲಾಟರಿ ಮೂಲಕ ಮದುವೆಯಾಗಲು ಪ್ರೇಯಸಿಯನ್ನು ಆಯ್ಕೆ ಮಾಡಿಕೊಳ್ಳಲು ಮುಂದಾಗಿ ಕೊನೆ ಇನ್ನೇನೋ ಆಗಿ, ಅಂತೂ-ಇಂತೂ ಒಬ್ಬಳ ಜತೆ ಸಪ್ತಪದಿ ತುಳಿದಿರುವ ವಿಚಿತ್ರ ಘಟನೆ ಸಕಲೇಶಪುರ ತಾಲ್ಲೂಕಿನಲ್ಲಿ ನಡೆದಿದೆ ಎನ್ನಲಾಗಿದೆ.

    ಸಕಲೇಶಪುರ ಮೂಲದ ಯುವಕ ಇಬ್ಬರು ಯುವತಿಯರನ್ನು ಪ್ರೀತಿಸುತ್ತಿದ್ದ. ಆಕೆಗೆ ತಿಳಿಯದಂತೆ ಈಕೆ ಜತೆ ಹಾಗೂ ಈಕೆಗೆ ತಿಳಿಯದಂತೆ ಆಕೆಯ ಜತೆ ಲವ್ವಿಡವ್ವಿ ಶುರುವಿಟ್ಟುಕೊಂಡಿದ್ದ. ಆದರೆ, ಎಷ್ಟು ದಿನ ಅಂತಾ ಕಳ್ಳಾಟವಾಡಲು ಸಾಧ್ಯ? ಎಲ್ಲದಕ್ಕೂ ಒಂದು ಕೊನೆ ಇದೆ ಅನ್ನುವಂತೆ ಕೊನೆಗೂ ಯುವಕ ಇಬ್ಬರ ಕೈಯಲ್ಲೂ ಸರಿಯಾಗಿ ಸಿಕ್ಕಿಬಿದ್ದ.

    ಇತ್ತ ಆತನನ್ನು ಬಿಟ್ಟು ಕೊಡಲು ಒಪ್ಪದ ಯುವತಿಯರಿಬ್ಬರು ತನ್ನನ್ನೇ ಮದುವೆಯಾಗುವಂತೆ ದುಂಬಾಲು ಬಿದ್ದಿದರು. ಇದರ ನಡುವೆ ಓರ್ವ ಯುವತಿ ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಕೊನೆಗೆ ಕಗ್ಗಾಂಟಾಗಿದ್ದ ತ್ರಿಕೋನ ಪ್ರೇಮ ಕಥೆಯನ್ನು ಬಗೆಹರಿಸಲು ಕುಟುಂಬಸ್ಥರು ಹಾಗೂ ಪರಿಚಯಸ್ಥರು ಮುಂದಾದರು.

    ಮಾತುಕತೆ ಮೂಲಕ ಪರಿಹಾರ ಸಿಗದಿದ್ದಾಗ ಲಾಟರಿ ಎತ್ತುವ ಮೂಲಕ ಯುವತಿ ಆಯ್ಕೆಗೆ ಮುಂದಾದರು. ಇಬ್ಬರು ಹುಡುಗಿಯರಲ್ಲಿ ಯಾರ ಹೆಸರು ಬರುತ್ತದೋ ಅವರ ಜತೆ ಮದುವೆ ಎಂದು ನಿರ್ಧಾರ ಮಾಡಿದರು. ಲಾಟರಿ ಎತ್ತಲು ಮುಂದಾಗುತ್ತಿದ್ದಂತೆ ಅದನ್ನು ತಡೆದ ಯುವಕ ವಿಷ ಸೇವಿಸಿದ್ದ ಯುವತಿಯನ್ನೇ ಮದುವೆಯಾಗುವುದಾಗಿ ಹೇಳಿದ.

    ಯುವಕನ ಹೇಳಿಕೆಯಿಂದ ಸಿಟ್ಟಿಗೆದ್ದ ಮತ್ತೊರ್ವ ಯುವತಿ, ಆತನ ಕೆನ್ನೆಗೆ ಒಂದು ಬಾರಿಸಿ, ಮುಖಕ್ಕೆ ಹೋದ ಪ್ರಸಂಗ ನಡೆದಿದೆ. ಅಚ್ಚರಿಯೆಂದರೆ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಆದರೆ ಈಗ ಹಾಸನ ಜಿಲ್ಲೆಯಾದ್ಯಂತ ವಿಚಿತ್ರ ಪ್ರೇಮ ಕಥೆಯದ್ದೇ ಚರ್ಚೆಯಾಗುತ್ತಿದೆ. (ದಿಗ್ವಿಜಯ ನ್ಯೂಸ್​)

    ಹೊಸ ಕಾರು ಖರೀದಿಸಿ ವಿರೋಧಿಗಳಿಗೆ ಮಾತಿನಲ್ಲೇ ಚಾಟಿ ಬೀಸಿದ ಬಿಗ್​ಬಾಸ್​ ಖ್ಯಾತಿಯ ನಟಿ ಧನುಶ್ರೀ..!

    ಒಳಉಡುಪಿನ ಬಗ್ಗೆ ಪ್ರಶ್ನಿಸಿದ ನೆಟ್ಟಿಗನಿಗೆ ನಟಿ ಅನಿಕಾ ಸುರೇಂದ್ರನ್​ ಕೊಟ್ಟ ಉತ್ತರ ಹೀಗಿದೆ…

    ಪಕ್ಕದಲ್ಲಿ ಖಾಲಿ ಇದೆ ಯಾರಾದ್ರೂ ಬರ್ತೀರಾ? ನೆಟ್ಟಿಗರಿಗೆ ಮಾಜಿ ನೀಲಿ ತಾರೆಯ ಬಿಗ್​ ಆಫರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts