More

    ಹೊಲದಲ್ಲಿ ಬಂಗಾರದ ನಾಣ್ಯಗಳ ನಿಧಿ ಸಿಕ್ಕಿದೆ: ಮಾತು ನಂಬಿ 2.50 ಲಕ್ಷ ರೂ. ಕಳೆದುಕೊಂಡ ಸೆಕ್ಯುರಿಟಿ

    ದಾವಣಗೆರೆ: ನಕಲಿ ಬಂಗಾರ ನೀಡಿ 2.50 ಲಕ್ಷ ರೂ. ವಂಚಿಸಿದ ಆರೋಪಿಯನ್ನು ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.

    ಹರಪನಹಳ್ಳಿ ತಾಲೂಕು ಎರಡೆತ್ತಿನಹಳ್ಳಿಯ ದುರುಗಪ್ಪ ಬಂಧಿತ ಆರೋಪಿ. ಮಂಗಳೂರು ಮೂಲದ ಸೆಕ್ಯುರಿಟಿ ಕೆಲಸ ಮಾಡುವ ವಿಜಯಕುಮಾರ್​ ವಂಚನೆಗೆ ಒಳಗಾದವರು.

    ಆರೋಪಿಯು ತನ್ನ ಹೆಸರು ವೆಂಕಟೇಶ್​ ಎಂದು ಪರಿಚಯಿಸಿಕೊಂಡಿದ್ದ. ತಮ್ಮ ಪಕ್ಕದ ಮನೆಯ ಅಜ್ಜನಿಗೆ ಹೊಲದಲ್ಲಿ ಬಂಗಾರದ ನಾಣ್ಯಗಳ ನಿಧಿ ಸಿಕ್ಕಿದೆ. ನಿಮಗೆ ಕಡಿಮೆ ಬೆಲೆಗೆ ಕೊಡಿಸುತ್ತೇನೆ ಎಂದು ತಿಳಿಸಿದ್ದ.

    ಮೊದಲು 2 ಅಸಲಿ ಚಿನ್ನದ ನಾಣ್ಯಗಳನ್ನು ನೀಡಿ ನಂಬಿಕೆ ಬರುವಂತೆ ಮಾಡಿದ್ದ. ನಂತರ ಅರ್ಧ ಕೆಜಿಯಷ್ಟು ನಕಲಿ ಚಿನ್ನದ ನಾಣ್ಯಗಳನ್ನು ನೀಡಿ 2.50 ಲಕ್ಷ ರೂ. ಲಪಟಾಯಿಸಿದ್ದ. ಈ ಬಗ್ಗೆ ಜನವರಿ ತಿಂಗಳಲ್ಲಿ ನಗರದ ಆರ್​.ಎಂ.ಸಿ. ಯಾರ್ಡ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿತ್ತು.

    ನಿಮ್ಮ ಅಹಂಕಾರ ಇನ್ನು 4 ದಿನಗಳಷ್ಟೇ: ಸಂಜಯ್​ ರಾವತ್​ ನಿವಾಸದ ಎದುರೇ ಕುತೂಹಲ ಮೂಡಿಸಿದ ಬ್ಯಾನರ್​

    ಅತ್ತ 40 ಶಾಸಕರು ನನ್ನೊಂದಿಗಿದ್ದಾರೆ ಎಂದ ಶಿಂಧೆ: ಇತ್ತ ಸಿಎಂ ಠಾಕ್ರೆಗೆ ಕಾಣಿಸಿಕೊಂಡಿತು ಕರೊನಾ!

    ದೇವಸ್ಥಾನ ಸ್ವಚ್ಛಗೊಳಿಸುವ ಮೂಲಕ ವಿಶೇಷ ಪೂಜೆ ಸಲ್ಲಿಸಿದ ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts