ದಾವಣಗೆರೆ: ನಕಲಿ ಬಂಗಾರ ನೀಡಿ 2.50 ಲಕ್ಷ ರೂ. ವಂಚಿಸಿದ ಆರೋಪಿಯನ್ನು ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.
ಹರಪನಹಳ್ಳಿ ತಾಲೂಕು ಎರಡೆತ್ತಿನಹಳ್ಳಿಯ ದುರುಗಪ್ಪ ಬಂಧಿತ ಆರೋಪಿ. ಮಂಗಳೂರು ಮೂಲದ ಸೆಕ್ಯುರಿಟಿ ಕೆಲಸ ಮಾಡುವ ವಿಜಯಕುಮಾರ್ ವಂಚನೆಗೆ ಒಳಗಾದವರು.
ಆರೋಪಿಯು ತನ್ನ ಹೆಸರು ವೆಂಕಟೇಶ್ ಎಂದು ಪರಿಚಯಿಸಿಕೊಂಡಿದ್ದ. ತಮ್ಮ ಪಕ್ಕದ ಮನೆಯ ಅಜ್ಜನಿಗೆ ಹೊಲದಲ್ಲಿ ಬಂಗಾರದ ನಾಣ್ಯಗಳ ನಿಧಿ ಸಿಕ್ಕಿದೆ. ನಿಮಗೆ ಕಡಿಮೆ ಬೆಲೆಗೆ ಕೊಡಿಸುತ್ತೇನೆ ಎಂದು ತಿಳಿಸಿದ್ದ.
ಮೊದಲು 2 ಅಸಲಿ ಚಿನ್ನದ ನಾಣ್ಯಗಳನ್ನು ನೀಡಿ ನಂಬಿಕೆ ಬರುವಂತೆ ಮಾಡಿದ್ದ. ನಂತರ ಅರ್ಧ ಕೆಜಿಯಷ್ಟು ನಕಲಿ ಚಿನ್ನದ ನಾಣ್ಯಗಳನ್ನು ನೀಡಿ 2.50 ಲಕ್ಷ ರೂ. ಲಪಟಾಯಿಸಿದ್ದ. ಈ ಬಗ್ಗೆ ಜನವರಿ ತಿಂಗಳಲ್ಲಿ ನಗರದ ಆರ್.ಎಂ.ಸಿ. ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ನಿಮ್ಮ ಅಹಂಕಾರ ಇನ್ನು 4 ದಿನಗಳಷ್ಟೇ: ಸಂಜಯ್ ರಾವತ್ ನಿವಾಸದ ಎದುರೇ ಕುತೂಹಲ ಮೂಡಿಸಿದ ಬ್ಯಾನರ್
ಅತ್ತ 40 ಶಾಸಕರು ನನ್ನೊಂದಿಗಿದ್ದಾರೆ ಎಂದ ಶಿಂಧೆ: ಇತ್ತ ಸಿಎಂ ಠಾಕ್ರೆಗೆ ಕಾಣಿಸಿಕೊಂಡಿತು ಕರೊನಾ!
ದೇವಸ್ಥಾನ ಸ್ವಚ್ಛಗೊಳಿಸುವ ಮೂಲಕ ವಿಶೇಷ ಪೂಜೆ ಸಲ್ಲಿಸಿದ ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು