ಭೋಪಾಲ್: ರಷ್ಯಾ ದಾಳಿಗೆ ಒಳಗಾಗಿರುವ ಯೂಕ್ರೇನ್ನಲ್ಲಿ ಸಿಲುಕಿಕೊಂಡಿರುವ ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಪಾಲಕರು ಪರದಾಡುತ್ತಿರುವ ಸಮಯದಲ್ಲಿ ಇದನ್ನೇ ಬಂಡವಾಳ ಮಾಡಿಕೊಂಡ ದುರುಳರು ಹಣ ವಂಚನೆಯ ದುಷ್ಕೃತ್ಯಕ್ಕೆ ಕೈಹಾಕಿದ್ದಾರೆ.
ಯೂಕ್ರೇನ್ನಲ್ಲಿ ರಷ್ಯಾ ರಕ್ತ ಚರಿತ್ರೆ ಸೃಷ್ಟಿಸುತ್ತಿದೆ. ಇಡೀ ಯೂಕ್ರೇನ್ ರಷ್ಯಾ ಕಪಿಮುಷ್ಠಿಯಲ್ಲಿ ಸಿಲುಕಿಕೊಂಡಿದೆ. ಎತ್ತ ನೋಡಿದರೂ, ಕೇಳಿದರು ಮದ್ದು-ಗುಂಡಗಳ ಭೀಕರ ಶಬ್ದ, ಜನರ ಆರ್ತನಾದ ಕೇಳುತ್ತಿದೆ. ಯಾವಾಗ? ಏನಾಗುತ್ತದೋ? ಎಂಬ ಭಯದಲ್ಲಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಕಾಲ ಕಳೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಯೂಕ್ರೇನ್ನಲ್ಲಿ ಸಿಲುಕಿರುವ ಭಾರತೀಯರನ್ನು ತಾಯ್ನಾಡಿಗೆ ಕರೆತರಲು ಭಾರತ ಸರ್ಕಾರ ಅವಿರತ ಪ್ರಯತ್ನ ಮಾಡುತ್ತಿದೆ. ಮಕ್ಕಳಿಗೆ ಏನಾಗುತ್ತದೋ ಎಂಬ ಭಯದಲ್ಲಿ ಪಾಲಕರಿದ್ದರೆ, ದುಷ್ಟರು ಯೂಕ್ರೇನ್ನಲ್ಲಿ ಸಿಲುಕಿರುವ ಮಕ್ಕಳನ್ನು ಕರೆತರುತ್ತೇವೆ ಎಂದು ನಂಬಿಸಿ ವಂಚಿಸಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದಿದೆ.
ಭೋಪಾಲ್ ಮೂಲದ ವೈಶಾಲಿ ವಿಲ್ಸನ್ ಎಂಬುವವರೇ ಮೋಸ ಹೋದ ಮಹಿಳೆ. ಅವರ ಮಗಳು ಸೃಷ್ಟಿ ಯೂಕ್ರೇನ್ನಲ್ಲಿ ಎಂಬಿಬಿಎಸ್ ಓದುತ್ತಿದ್ದಾಳೆ. ಆಕೆಯನ್ನು ಸುರಕ್ಷಿತವಾಗಿ ಕರೆತರುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ವಿಚಾರ ತಿಳಿದ ವ್ಯಕ್ತಿಯೊಬ್ಬ ವೈಶಾಲಿ ಅವರಿಗೆ ಫೆ. 25ರಂದು ಕರೆ ಮಾಡಿದ್ದಾನೆ. ಬಳಿಕ ನಾನು ಪ್ರಧಾನ ಮಂತ್ರ ಕಚೇರಿಯಿಂದ ಕರೆ ಮಾಡುತ್ತಿದ್ದೇನೆ ನಿಮ್ಮ ಮಗಳನ್ನು ಯೂಕ್ರೇನ್ನಿಂದ ಕರೆತರಲು ವಿಮಾನದ ಟಿಕೆಟ್ ಬುಕ್ಕಿಂಗ್ಗಾಗಿ 42 ಸಾವಿರ ರೂಪಾಯಿ ಡೆಪಾಸಿಟ್ ಮಾಡಿ ಎಂದು ಕೇಳಿದ್ದಾನೆ.
ಮೊದಲೇ ಮಗಳ ಚಿಂತೆಯಲ್ಲಿದ್ದ ವೈಶಾಲಿ, ಹಣಕ್ಕಿಂತ ಮಗಳು ಸುರಕ್ಷಿತವಾಗಿ ಮನೆಗೆ ಮರಳಿದರೆ ಸಾಕು ಅಂದುಕೊಂಡು ಹಿಂದೆ-ಮುಂದೆ ಯೋಚಿಸದೇ ಕೇಳಿದಷ್ಟು ಹಣವನ್ನು ಕರೆ ಮಾಡಿದ ವ್ಯಕ್ತಿ ಕೊಟ್ಟ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಹಣ ವರ್ಗಾವಣೆಯಾದ ಬೆನ್ನಲ್ಲೇ ಆ ವ್ಯಕ್ತಿಯಿಂದ ಯಾವುದೇ ಪ್ರತಿಕ್ರಿಯೆ ಬರದಿರಲಿಲ್ಲ. ಇತ್ತ ಫೋನ್ ಮಾಡಿದರೂ ಸ್ವಿಚ್ ಆಫ್ ಬರುತ್ತಿತ್ತು. ಇದಾದ ಬಳಿಕ ತಾವು ಮೋಸ ಹೋಗಿರುವುದಾಗಿ ಗೊತ್ತಾಗಿದೆ. ತಕ್ಷಣ ವಿದಿಶಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಸದ್ಯ ಆರೋಪಿ ಯಾರೆಂಬುದು ಪತ್ತೆಯಾಗಿದ್ದು, ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಮತ್ತೊಂದೆಡೆ ವೈಶಾಲಿ ಮಗಳು ಸೃಷ್ಟಿಯನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ ಎಂದು ವಿದಿಶಾ ಪೊಲೀಸ್ ವರಿಷ್ಠಾಧಿಕಾರಿ ವಿವರಿಸಿದರು. (ಏಜೆನ್ಸೀಸ್)
ಬೋಲ್ಡ್ ಅಂಡ್ ಬ್ಯೂಟಿಫುಲ್ ಬೆಡಗಿ…ಇದುವರೆಗೂ ನೀವು ನೋಡಿರದ ನಟಿ ವೇದಿಕಾರ ಹಾಟ್ ಅವತಾರವಿದು!
VIDEO: ನಾನು ಹೆಲ್ಮೆಟ್ ಹಾಕಬೇಕು ಅಂದ್ರೆ ನೀವೇ ಕೊಡ್ಸಿ ಸರ್…. ಬೈಕ್ ಸವಾರ-ಪೊಲೀಸ್ ಜಟಾಪಟಿ
ಪಕ್ಕಾ ಲೆಕ್ಕ ಕೊಟ್ಟು ಪೆಟ್ರೋಲ್ ಬಂಕ್ ಮಾಲೀಕನಿಗೆ 44 ಲಕ್ಷ ರೂ. ಟೋಪಿ ಹಾಕಿದ ಖದೀಮ- ಇದ್ಹೇಗೆ ನೋಡಿ…