ಮಥುರಾ (ಉತ್ತರ ಪ್ರದೇಶ): ಬೇರೊಬ್ಬನ ಜತೆ ಮದುವೆಯಾಗುತ್ತಿದ್ದ ಪ್ರೇಯಸಿಗೆ ಕಲ್ಯಾಣ ಮಂಟಪದಲ್ಲೇ ಮಾಜಿ ಪ್ರಿಯಕರ ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಮಥುರಾದ ಮುಬರಿಕಪುರ ಗ್ರಾಮದ ನೌಜಹೀಲ್ ಏರಿಯಾದಲ್ಲಿ ಶುಕ್ರವಾರ ನಡೆದಿದೆ.
ಮೃತ ವಧುವಿನ ಹೆಸರು ಕಾಜಲ್ (20). ಕೊರಳಿಗೆ ಹೂವಿನ ಹಾರ ಹಾಕುವ ಪದ್ಧತಿ ಮುಗಿಯುತ್ತಿದ್ದಂತೆ ಮಂಟಪದಲ್ಲೇ ಇದ್ದ ಮಾಜಿ ಪ್ರಿಯಕರ, ವಧು ಕಾಜಲ್ಗೆ ಗುಂಡಿಕ್ಕಿದ್ದಾನೆ. ಗುಂಡಿನ ಶಬ್ದ ಕೇಳಿ ವಧುವಿನ ಕುಟುಂಬಸ್ಥರು ಸ್ಥಳಕ್ಕೆ ಧಾವಿಸಿ ಬಂದು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗಳನ್ನು ನೋಡಿ ಆಘಾತಕ್ಕೆ ಒಳಗಾದರು.
ಘಟನೆ ಬಗ್ಗೆ ಮಾತನಾಡಿರುವ ವಧುವಿನ ತಂದೆ ಖುಬಿ ರಾಮ್ ಪ್ರಜಾಪತಿ, ಹೂವಿನ ಹಾರ ಹಾಕುವ ಸಂಪ್ರದಾಯ ಮುಗಿಯುತ್ತಿದ್ದಂತೆ ಮಗಳು ಮತ್ತೆ ರೆಡಿಯಾಗಿ ಬರಲೆಂದು ತನ್ನ ಕೋಣೆಗೆ ತೆರಳಿದಳು. ಈ ವೇಳೆ ಕೋಣೆಗೆ ನುಗ್ಗಿದ ಅಪರಿಚಿತ ಗುಂಡಿಟ್ಟು ಪರಾರಿಯಾದನು ಎಂದು ಹೇಳಿದ್ದಾರೆ.
ಘಟನೆಯ ಬಳಿಕ ವಧುವಿನ ತಂದೆ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಮಥುರಾ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಶಿರೀಶ್ ಚಂದ್ರ, ಘಟನೆಯ ಬಗ್ಗೆ ನಮಗೆ ಮಾಹಿತಿ ತಿಳಿದಿದೆ. ದೂರು ದಾಖಲಿಸಿಕೊಂಡಿದ್ದೇವೆ. ಎಲ್ಲ ಆಯಾಮಗಳಲ್ಲೂ ನಮ್ಮ ತಂಡ ತನಿಖೆ ನಡೆಸಲಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)
ಬೆತ್ತಲೆಯಾಗಿ ಕಾಣಿಸಿಕೊಂಡರಾ ಆಂಡ್ರಿಯಾ ಜರೆಮಿಯ? ಟೀಸರ್ ಬಿಡುಗಡೆ ಬೆನ್ನಲ್ಲೇ ಬಿಸಿ ಬಿಸಿ ಚರ್ಚೆ ಶುರು!
ವರದಕ್ಷಿಣೆಗಾಗಿ ಪತ್ನಿಯ ಮೇಲೆ ಸಂಬಂಧಿಕರಿಂದ ಗ್ಯಾಂಗ್ರೇಪ್ ಮಾಡಿಸಿ ಯೂಟ್ಯೂಬ್ಗೆ ವಿಡಿಯೋ ಹರಿಬಿಟ್ಟ ಪತಿ
ಹಿಂದು ಎಂಬ ಕಾರಣಕ್ಕೆ ಅಫ್ರಿದಿ ಕೊಟ್ಟ ಕಿರುಕುಳದ ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಪಾಕ್ ಮಾಜಿ ಆಟಗಾರ ಕನೇರಿಯಾ!