More

    ಮಂಜು ಪಾವಗಡ ವಿರುದ್ಧ ಕಲರ್ಸ್​ ಕನ್ನಡಕ್ಕೆ ಓಪನ್​ ಲೆಟರ್​ ಬರೆದ ಅರವಿಂದ್​-ದಿವ್ಯಾ ಅಭಿಮಾನಿಗಳು!

    ಬೆಂಗಳೂರು: ಕರೊನಾದಿಂದಾಗಿ ಬಿಗ್​ಬಾಸ್​ ಸೀಸನ್​​ 8ನೇ ಆವೃತ್ತಿ ಅರ್ಧಕ್ಕೆ ಮೊಟಕುಗೊಂಡು ಮತ್ತೆ ಪ್ರಸಾರ ಆಗುತ್ತಿದೆ. ಸ್ಪರ್ಧಿಗಳೆಲ್ಲರು ದೊಡ್ಮನೆಯಿಂದ ಹೊರಗೆ ಹೋಗಿ ಮತ್ತೆ ಮರಳಿದ್ದಾರೆ. ಮೊದಲನೇ ಇನ್ನಿಂಗ್ಸ್​ಗಿಂತ ಎರಡನೇ ಇನ್ನಿಂಗ್ಸ್​ ಕೊಂಚ ವಿಭಿನ್ನವಾಗಿದ್ದು, ಸ್ಪರ್ಧಿಗಳ ಗೇಮ್​ ಪ್ಲಾನ್​ ಕೂಡ ಬದಲಾಗಿದೆ.

    ಎರಡನೇ ಇನ್ನಿಂಗ್ಸ್​ ಆರಂಭವಾಗಿ ಕೆಲವೇ ದಿನಗಳು ಕಳೆದಿದೆ. ಅಷ್ಟರಲ್ಲೇ ಮಂಜು ಪಾವಗಡ ವಿರುದ್ಧ ಅರವಿಂದ್​ ಮತ್ತು ದಿವ್ಯಾ ಉರುಡುಗ ಅಭಿಮಾನಿಗಳು ಕಲರ್ಸ್​ ಕನ್ನಡಕ್ಕೆ ಓಪನ್​ ಲೆಟರ್​ ಬರೆದಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.

    ಇದುವರೆಗಿನ ಬಿಗ್​ಬಾಸ್​ ಆವೃತ್ತಿಗಿಂತ ಪ್ರಸ್ತುತ 8ನೇ ಆವೃತ್ತಿಯು ಹೆಚ್ಚು ಪ್ರಸಿದ್ದಿ ಪಡೆದಿದೆ. ಮೊದಲ ಇನ್ನಿಂಗ್ಸ್​ನಲ್ಲಿ ಅರವಿಯಾ (ಅರವಿಂದ್​-ದಿವ್ಯಾ) ಜೋಡಿ ಹೆಚ್ಚು ಸುದ್ದು ಮಾಡಿದ್ದೇ, ಶೋ ಮೇಲೆ ವೀಕ್ಷಕರ ಸಂಖ್ಯೆ ಹೆಚ್ಚಾಗಲು ಕಾರಣ. ಅಲ್ಲದೆ, ಅನೇಕ ಬಾರಿ ಸಾಮಾಜಿಕ ಜಾಲತಾಣದಲ್ಲಿ ಅರವಿಯಾ ಟ್ರೆಂಡ್​ ಕೂಡ ಆಗಿದೆ. ಸಾಕಷ್ಟು ಚರ್ಚೆಗಳು ಆಗಿದೆ. ಈ ಕಾರಣದಿಂದಲೇ ಶೋ ಅರ್ಧಕ್ಕೆ ಮೊಟಕುಗೊಂಡರು ಮತ್ತೆ ಆರಂಭಿಸಿದ್ದು.

    ಒಂದೆಡೆ ಅರವಿಯಾ ಜೋಡಿ ಮತ್ತೊಂದೆಡೆ ಸುದೀಪ್​ ನಿರೂಪಣೆ 8ನೇ ಆವೃತ್ತಿಗೆ ಪ್ಲಸ್​ ಪಾಯಿಂಟ್​​ ಆಯಿತು. ಎಷ್ಟರಮಟ್ಟಿಗೆ ಅಂದರೆ, ವಾರದ ದಿನಗಳಲ್ಲಿ ಅರವಿಯಾ ಜೋಡಿಯ ಲವ್​ ಕಹಾನಿ ಮತ್ತು ವಾರಾಂತ್ಯದಲ್ಲಿ ಸುದೀಪ್​ ನಿರೂಪಣೆ ಟಿಆರ್​ಪಿ ಹೆಚ್ಚಾಗಲು ಕಾರಣವಾಯಿತು.

    ಆದರೆ, ಕಲರ್ಸ್​ ಕನ್ನಡ ಎರಡನೇ ಇನ್ನಿಂಗ್ಸ್​ನಲ್ಲಿ ತನ್ನ ಗೇಮ್​ ಪ್ಲಾನ್​ ಬದಲಾಯಿಸಿಕೊಂಡಿದ್ದು, ಕೇವಲ ವೈಷ್ಣವಿ ಮತ್ತು ಮಂಜು ಪಾವಗಡ ಮೇಲೆ ಹೆಚ್ಚು ಗಮನಹರಿಸುತ್ತಿದೆ ಎಂದು ಅರವಿಯಾ ಅಭಿಮಾನಿಗಳು ಹೇಳುತ್ತಿದ್ದಾರೆ. ಇಡೀ ಶೋನಲ್ಲಿ ಅರವಿಯಾ ಜೋಡಿ ಎಲ್ಲಿಯೂ ನಕಲಿ ಅನಿಸಲೇ ಇಲ್ಲ. ಮುಖವಾಡವನ್ನು ಧರಿಸಿಲ್ಲ. ಆದರೆ, ಮಂಜು ವೋಟ್​ಗಾಗಿ ಮುಖವಾಡ ಧರಿಸಿದಂತೆ ಅನೇಕ ಬಾರಿ ಕಂಡಿದ್ದಾರೆ.

    ಮೊದಲ ಇನ್ನಿಂಗ್ಸ್​ನಲ್ಲಿ ದಿವ್ಯಾ ಸುರೇಶ್​ ಜತೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ಮಂಜು, ಇದೀಗ ವೈಷ್ಣವಿ ಜತೆಗಿದ್ದಾರೆ. ಆಗಾಗ ಅವರ ಗೇಮ್​ ಪ್ಲಾನ್​ ಬದಲಾಗುತ್ತಿರುತ್ತದೆ. ಎರಡನೇ ಇನ್ನಿಂಗ್ಸ್​ನಲ್ಲಿ ಮಂಜು ಅವರು ಮುಖವಾಡ ಧರಿಸಿಕೊಂಡು ಎಲ್ಲರನ್ನು ಯಾಮಾರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮುಂಜು ಮತ್ತು ವೈಷ್ಣವಿ ಅವರು ಹೆಚ್ಚು ಫುಟೇಜ್​ಗಳನ್ನು ಕಲರ್ಸ್​ ಕನ್ನಡ ತೋರಿಸುತ್ತಿದೆ ಎಂದು ಕಲರ್ಸ್​ ಕನ್ನಡಕ್ಕೆ ಅರವಿಯಾ ಅಭಿಮಾನಿಗಳು ಓಪನ್​ ಲೆಟರ್​ ಬರೆದಿದ್ದಾರೆ.

    #BBK8: ಪ್ರಶಾಂತ್​ ಸಂಬರಗಿ ವಿರುದ್ಧ ಗಂಭೀರ ಆರೋಪ ಮಾಡಿದ ದಿವ್ಯಾ ಸುರೇಶ್​..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts