More

    ಸಂಕಟದ ಭವಿಷ್ಯ ಕೇಳಿದ ಬೆನ್ನಲ್ಲೇ ದೊಡ್ಮನೆಯಲ್ಲಿ ಡ್ರೋನ್​ ಪ್ರತಾಪ್​ ನಾಪತ್ತೆ! ಫ್ಯಾನ್ಸ್​ ಪ್ರಶ್ನಗೆ ಇಲ್ಲಿದೆ ಉತ್ತರ…

    ಬೆಂಗಳೂರು: ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10 ಮುಗಿಯುವ ಹಂತಕ್ಕೆ ಬಂದಿದೆ. ಇನ್ನು ಕೆಲವೇ ವಾರಗಳಲ್ಲಿ ಶೋ ಮುಕ್ತಾಯಗೊಳ್ಳಲಿದೆ. ಸದ್ಯ ಮನೆಯಲ್ಲಿ 9 ಮಂದಿ ಸ್ಪರ್ಧಿಗಳಿದ್ದಾರೆ. ಜನರ ಪ್ರಕಾರ ಬಿಗ್​ಬಾಸ್​ ಸೀಸನ್​​ 10ರ ಫೈನಲಿಸ್ಟ್​ಗಳಲ್ಲಿ ಡ್ರೋನ್​ ಪ್ರತಾಪ್​ ಕೂಡ ಒಬ್ಬರಾಗಿದ್ದಾರೆ.

    ಡ್ರೋನ್​ ಪ್ರತಾಪ್​ ಅವರು ಬಿಗ್​ಬಾಸ್​ಗೆ ಹೋದ ಮೇಲಂತೂ ಅವರ ಮೇಲೆ ಜನರಿಗಿದ್ದ ಅಭಿಪ್ರಾಯ ಸಂಪೂರ್ಣ ಬದಲಾಗಿದೆ. ಈ ಮೊದಲು ಪ್ರತಾಪ್​ ಬಗ್ಗೆ ಬರೀ ನೆಗಿಟಿವ್​ ಅಭಿಪ್ರಾಯಗಳೇ ಕೇಳಿಬರುತ್ತಿತ್ತು. ಆದರೆ, ಈಗ ಪ್ರತಾಪ್​ ಎಲ್ಲರ ನೆಚ್ಚಿನ ಸ್ಪರ್ಧಿಯಾಗಿದ್ದಾರೆ. ಅದಕ್ಕೆ ಕಾರಣ ದೊಡ್ಮನೆಯೊಳಗೆ ಪ್ರತಾಪ್​ ಆಡುತ್ತಿರುವ ರೀತಿ. ಎಲ್ಲ ಟಾಸ್ಕ್​ಗಳಲ್ಲೂ ಚೆನ್ನಾಗಿ ಆಡುತ್ತಿರುವ ಪ್ರತಾಪ್​ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಜನರಿಗೆ ತಮ್ಮ ಮೇಲಿದ್ದ ಕೆಟ್ಟ ಅಭಿಪ್ರಾಯವನ್ನು ತೊಡೆದು ಹಾಕಿದ್ದಾರೆ. ಹೀಗಾಗಿ ಜಾಲತಾಣದಲ್ಲಿ ಪ್ರತಾಪ್​ ಸಾಕಷ್ಟು ಬೆಂಬಲ ವ್ಯಕ್ತವಾಗುತ್ತಿದೆ.

    ತಾಜಾ ಸಂಗತಿ ಏನೆಂದರೆ, ಡ್ರೋನ್​ ಪ್ರತಾಪ್​ ಬಿಗ್​ಬಾಸ್​ ಮನೆಯಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ. ಬಿಗ್​ಬಾಸ್​ ಮೂಲಗಳ ಪ್ರಕಾರ ಪ್ರತಾಪ್​ ​​ಆರೋಗ್ಯ ದಿಢೀರ್ ಹದಗೆಟ್ಟಿದೆಯಂತೆ. ಜ್ವರ ಹಿನ್ನೆಲೆಯಲ್ಲಿ ಬಿಗ್​ಬಾಸ್ ಮನೆಯ ವೈದ್ಯರಿಂದಲೇ ಡ್ರೋನ್​ ಪ್ರತಾಪ್​ಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ. ಅಷ್ಟಕ್ಕೂ ಈ ಸುದ್ದಿ ಹರಡಲು ಕಾರಣ ಏನೆಂದರೆ, ಬಿಗ್​ಬಾಸ್​ ಲೈವ್​ನಲ್ಲಿ ಪ್ರತಾಪ್​ ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ ಪ್ರತಾಪ್​ಗೆ ಏನಾಯಿತು ಎಂದು ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ. ಅನಾರೋಗ್ಯ ಹಿನ್ನೆಲೆ ಪ್ರತಾಪ್​​ಗೆ ರೆಸ್ಟ್ ಮಾಡಲು ವೈದ್ಯರು ಸೂಚಿಸಿರುವ ಹಿನ್ನೆಲೆಯಲ್ಲಿ ಬಿಗ್​​ಬಾಸ್ ಲೈವ್​​ನಲ್ಲಿ ಡ್ರೋನ್​ ಪ್ರತಾಪ್​​ ಕಾಣಿಸಿಕೊಂಡಿಲ್ಲ.

    ಪ್ರತಾಪ್​ಗೆ ಇದ್ದಕ್ಕಿದ್ದಂತೆ ಏಕೆ ಹೀಗಾಯಿತು? ಬಿಗ್​ಬಾಸ್​ ಮನೆಗೆ ಹೊಸ ವರ್ಷದ ಮೊದಲ ದಿನದಂದು ವಿದ್ಯಾಶಂಕರಾನಂದ ಸರಸ್ವತಿ ಸ್ವಾಮೀಜಿ ಭೇಟಿ ನೀಡಿ ಡ್ರೋನ್​ ಪ್ರತಾಪ್​ ಸಂಕಟ ಪಡುವಂತಹ ಭವಿಷ್ಯ ಹೇಳಿದ್ದರು. ಈ ವಿಚಾರ ಹೇಳುವುದಕ್ಕೆ ನನಗೆ ಸಂಕಟವಾಗುತ್ತಿದೆ. ಕುಟುಂಬದಿಂದ ದೂರವೇ ಇರಬೇಕಾಗುತ್ತದೆ. ಕುಟುಂಬದ ಜೀವನ ಅಷ್ಟು ಸರಿ ಇಲ್ಲ. ದೂರ ಇದ್ದು ದೂಪವಾಗ್ತೀಯೋ ಹತ್ತಿರ ಹೋಗಿ ಹೇಸಿಗೆ ಆಗ್ತೀಯೋ ನಿನಗೆ ಬಿಟ್ಟಿದ್ದು ಎಂದು ಸ್ವಾಮೀಜಿ ನೇರವಾಗಿ ಹೇಳಿದರು. ಅವರ ಮಾತುಗಳನ್ನು ಕೇಳಿ ಪ್ರತಾಪ್ ಕಣ್ಣುಗಳಲ್ಲಿ ಕಣ್ಣೀರು ತುಂಬಿ ಹರಿದಿತ್ತು.

    ಇದೀಗ ಪ್ರತಾಪ್​ಗೆ ಅನಾರೋಗ್ಯ ಕಾಡುತ್ತಿರುವುದನ್ನು ನೋಡಿದರೆ, ಸ್ವಾಮೀಜಿ ಹೇಳಿದ ಮಾತುಗಳಿಂದ ತುಂಬಾ ಯೋಚನೆ ಮಾಡಿ ಹೀಗಾಗಿರಬಹುದು ಎಂದು ಹೇಳಲಾಗುತ್ತಿದೆ. ಕಳೆದ ವಾರವಷ್ಟೇ ಬಿಗ್​ಬಾಸ್​ ಮನೆಗೆ ಪ್ರತಾಪ್​ ಅವರ ತಂದೆ-ತಾಯಿ ಬಂದು ಹೋಗಿದ್ದರು. ಬಹಳ ಖುಷಿಪಟ್ಟಿದ್ದ ಪ್ರತಾಪ್​, ಸ್ವಾಮೀಜಿ ಭವಿಷ್ಯದಿಂದ ತುಂಬಾ ಕುಗ್ಗಿದ್ದರು. ಇದೀಗ ಅನಾರೋಗ್ಯ ಬಂದಿರುವುದು ಪ್ರತಾಪ್​ ಅಭಿಮಾನಿಗಳಿಗೆ ಬೇಸರದ ಸಂಗತಿಯಾಗಿದೆ. ಆದಷ್ಟು ಬೇಗ ಗುಣಮುಖರಾಗಲಿ ಎಂದು ಬಯಸುತ್ತಿದ್ದಾರೆ.

    ಸದ್ಯ ಬಿಗ್​ಬಾಸ್​ ಮನೆಯಲ್ಲಿ ಸಂಗೀತಾ ಶೃಂಗೇರಿ, ಡ್ರೋನ್​ ಪ್ರತಾಪ್​, ಕಾರ್ತಿಕ್​, ವರ್ತೂರ್​ ಸಂತೋಷ್​, ತುಕಾಲಿ ಸಂತೋಷ್​, ನಮ್ರತಾ, ವಿನಯ್​ ಗೌಡ, ತನಿಷಾ ಮತ್ತು ಮೈಕಲ್​ ಉಳಿದುಕೊಂಡಿದ್ದಾರೆ. (ಏಜೆನ್ಸೀಸ್​)

    BBKS10: ಪ್ರತಾಪ್‌ ಸಂಕಟ ಪಡುವಂತ ಭವಿಷ್ಯ ಹೇಳಿದ ವಿದ್ಯಾಶಂಕರಾನಂದ ಸ್ವಾಮೀಜಿ! ಅಷ್ಟಕ್ಕೂ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts