ಬೆಂಗಳೂರು: ರಾಜ್ಯ ರಾಜಧಾನಿಯನ್ನು ಬಹುದಿನಗಳಿಂದ ಕಾಡುತ್ತಿರುವ ಪ್ರಮುಖ ಸಮಸ್ಯೆಯೆಂದರೆ ಅದು ಟ್ರಾಫಿಕ್ ಜಾಮ್. ಹೇಳಿಕೊಳ್ಳಲು ಸಿಲಿಕಾನ್ ಸಿಟಿಯಾದರೂ, ರಸ್ತೆ ಗುಂಡಿಗಳಿಗೇನು ಇಲ್ಲಿ ಕಡಿಮೆ ಇಲ್ಲ. ಸಾವಿಲ್ಲದ ಮನೆಯಿಲ್ಲ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಅನುಭವಿಸದ ವ್ಯಕ್ತಿಯಿಲ್ಲ ಎಂಬ ಪರಿಸ್ಥಿತಿ ನಮ್ಮ ಬೆಂದಕಾಳೂರದ್ದು. ಬಹುತೇಕ ಎಲ್ಲರು ಟ್ರಾಫಿಕ್ ಕಿರಿಕಿರಿಯನ್ನು ಅನುಭವಿಸಿದ್ದಾರೆ. ಆದರೆ, ಅದೇ ಟ್ರಾಫಿಕ್ ಜಾಮ್ ಕೆಲವರಿಗೆ ಧನಾತ್ಮಕ ಪರಿಣಾಮವನ್ನು ಬೀರುತ್ತದೆ ಅಂದರೆ ನೀವು ನಂಬುತ್ತೀರಾ? ಈ ಸ್ಟೋರಿಯನ್ನು ಓದಿದ ಮೇಲೆ ನೀವು ನಂಬದೇ ಇರಲಾರಿರಿ.
ಇದು ಬೆಂಗಳೂರು ಟ್ರಾಫಿಕ್ ಜಾಮ್ನಿಂದ ಶುರುವಾದ ಲವ್ ಸ್ಟೋರಿ. ಈ ಸ್ಟೋರಿಯನ್ನು ಟ್ವಿಟರ್ನಲ್ಲಿ ಶೇರ್ ಮಾಡಲಾಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಎಲ್ಲ ನೆಗಿಟಿವ್ನಲ್ಲೂ ಒಂದು ಪಾಸಿಟಿವ್ ಇದ್ದೇ ಇರುತ್ತದೆ ಎಂಬುದಕ್ಕೆ ಈ ಘಟನೆ ಉದಾಹರಣೆ ಆಗಿದೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.
ರೆಡ್ಡಿಟ್ ಬಳಕೆದಾರನು ತನ್ನ ಪತ್ನಿಯನ್ನು ಮದುವೆಗೂ ಮುನ್ನಾ ಮೊದಲ ಬಾರಿಗೆ ಸೋನಿ ವರ್ಲ್ಡ್ ಸಿಗ್ನಲ್ನಲ್ಲಿ ಭೇಟಿಯಾದರಂತೆ. ಬಳಿಕ ಇಬ್ಬರು ಫ್ರೆಂಡ್ಸ್ ಆದರಂತೆ. ಒಮ್ಮೆ ಆಕೆಯನ್ನು ಡ್ರಾಪ್ ಮಾಡಲು ಹೋದಾಗ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಈಜಿಪುರ ಫ್ಲೈಓವರ್ನಲ್ಲಿ ಟ್ರಾಫಿಕ್ ಜಾಮ್ನಿಂದ ಸಿಲುಕಿಕೊಂಡರಂತೆ. ಆ ಕ್ಷಣದಲ್ಲಿ ಇಬ್ಬರಿಗೂ, ಒಂದೆಡೆ ಕಿರಿಕಿರಿ ಮತ್ತು ಹಸಿವು ಕೂಡ ಇತ್ತಂತೆ. ಜನನಿಬಿಡ ಏರಿಯಾದಿಂದ ಹೇಗಾದರೂ ಆಚೆ ಬರಬೇಕು ಅಂತಾ ಬೇರೆ ದಾರಿ ಆಯ್ದುಕೊಂಡ ಇಬ್ಬರು, ನಂತರ ಒಟ್ಟಿಗೆ ಹೋಟೆಲ್ ಒಂದಕ್ಕೆ ಊಟಕ್ಕೆ ಹೋದರಂತೆ. ಆ ಕ್ಷಣದಲ್ಲೇ ಇಬ್ಬರ ಲವ್ ಸ್ಟೋರಿ ಆರಂಭವಾಯಿತು ಎಂದು ಹೇಳಿಕೊಂಡಿದ್ದಾರೆ.
ಮೂರು ವರ್ಷಗಳ ಯಶಸ್ವಿ ಡೇಟಿಂಗ್ ಮತ್ತು ಮದುವೆ ಆಗಿ 2 ವರ್ಷಗಳು ಕಳೆದಿದ್ದರೂ ಈಜಿಪುರದ 2.5 ಕಿ.ಮೀ ಉದ್ದದ ಫ್ಲೈಓವರ್ ಕೆಲಸ ಮಾತ್ರ ಇನ್ನು ನಡೆಯುತ್ತಲೇ ಇದೆ ಎನ್ನುವ ಮೂಲಕ ತಮ್ಮ ವೈರಲ್ ಸ್ಟೋರಿಯ ಕೊನೆಯಲ್ಲಿ ರೋಚಕ ಟ್ವಿಸ್ಟ್ ನೀಡಿದ್ದಾರೆ. ಇದರು ಸರ್ಕಾರದ ಕಾರ್ಯವೈಖರಿಯನ್ನು ಅಣಕಿಸಿದಂತಿದೆ.
Top drawer stuff on Reddit today 😂😂@peakbengaluru pic.twitter.com/25H0wr526h
— Aj (@babablahblah_) September 18, 2022
ರೆಡ್ಡಿಟ್ನಲ್ಲಿ ಬರೆದಿರುವ ಪೋಸ್ಟ್ನ ಸ್ಕ್ರೀನ್ಶಾಟ್ ಅನ್ನು ಟ್ವಿಟರ್ನಲ್ಲಿ ಶೇರ್ ಮಾಡಲಾಗಿದ್ದು, 4 ಸಾವಿರಕ್ಕೂ ಅಧಿಕ ಮಂದಿ ಲೈಕ್ಸ್ ಮಾಡಿದ್ದಾರೆ. ನೆಟ್ಟಿಗರು ಭಿನ್ನ ಭಿನ್ನ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ಇದು ನಿಜಕ್ಕೂ ಟ್ರಾಫಿಕ್ ಲವ್ ಸ್ಟೋರಿ ಎಂದಿದ್ದಾರೆ.
ಅಂದಹಾಗೆ ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ಭೀಕರ ಸಮಸ್ಯೆಯಾಗಿದ್ದರೂ ಜನ ಅದಕ್ಕೆ ಹೊಂದಿಕೊಂಡಿದ್ದಾರೆ. ನಗರದ ಟ್ರಾಫಿಕ್ ಕುರಿತು ಹಲವಾರು ಆನ್ಲೈನ್ ಮೀಮ್ಗಳನ್ನು ಮಾಡಲಾಗಿದ್ದು, ಹಲವಾರು ಅವು ವೈರಲ್ ಸಹ ಆಗಿವೆ. (ಏಜೆನ್ಸೀಸ್)
ಅಶ್ಲೀಲ ವಿಡಿಯೋ ಸೋರಿಕೆ: ಖ್ಯಾತ ನಟಿ, ಬಿಗ್ಬಾಸ್ ಬ್ಯೂಟಿ ಅಕ್ಷರಾ ಕೊಟ್ಟ ಖಡಕ್ ಪ್ರತಿಕ್ರಿಯೆ ಹೀಗಿತ್ತು…
ಜೆಡಬ್ಲ್ಯು ಮ್ಯಾರಿಯೇಟ್ ವಿರುದ್ಧ ಎಫ್ಐಆರ್: SIIMA ಪ್ರಶಸ್ತಿ ಕಾರ್ಯಕ್ರಮಕ್ಕೆ ಬಂದಿದ್ದ ಕಲಾವಿದರ ಮೇಲೊಂದು ಕಣ್ಣು
ಪ್ರೀತಿಸಿ ಮದ್ವೆಯಾದ ಪತ್ನಿಯನ್ನೇ ಕೊಂದನಾ ಪತಿ? ಆರೋಪ-ಪ್ರತ್ಯಾರೋಪಗಳ ಮಧ್ಯೆ ಅನಾಥವಾದ ಕಂದಮ್ಮ