More

    ತಾನೋರ್ವ ACP ಎಂದು ನಂಬಿಸಿ 20 ಲಕ್ಷ ರೂ. ವಂಚಿಸಿದ ಇನ್ಸ್​ಪೆಕ್ಟರ್​ ಪುತ್ರನಿಗಾಗಿ ಕೆಂಗೇರಿ ಪೊಲೀಸರ ಹುಡುಕಾಟ

    ಬೆಂಗಳೂರು: ತಾನೋರ್ವ ಸಹಾಯಕ ಪೊಲೀಸ್​ ಕಮಿಷನರ್​ (ಎಸಿಪಿ) ಎಂದು ಹೇಳಿಕೊಂಡು, ವ್ಯಕ್ತಿಯೊಬ್ಬರನ್ನು ನಂಬಿಸಿ, ಅವರಿಂದ ಲಕ್ಷಾಂತರ ರೂಪಾಯಿ ವಂಚಿಸಿದ ಖತರ್ನಾಕ್​ ಅಸಾಮಿಗಾಗಿ ಕೆಂಗೇರಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.

    ನವೀನ್, ಬಂಧಿತ ಆರೋಪಿ. ಶಂಕರಪ್ಪ ಎಂಬುವರಿಗೆ ಸುಮಾರು 20 ಲಕ್ಷ ರೂಪಾಯಿ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಹುಂಡೈ ಶೋ ರೂಂನಲ್ಲಿ ಕಾರ್ ಸರ್ವೀಸ್​ಗೆ ಬಂದಿದ್ದ ನವೀನ್, ತಾನೊರ್ವ ಜಯನಗರ ಎಸಿಪಿ ಎಂದು ಹೇಳಿಕೊಂಡು ಶಂಕರಪ್ಪನನ್ನು ಪರಿಚಯಿಸಿಕೊಂಡಿದ್ದ.

    ಪರಿಚಯದ ಬಳಿಕ ಶಂಕರಪ್ಪನಿಗೆ ಕಾರು ನೀಡುವುದಾಗಿ ನಂಬಿಸಿ, ಬೇರೆ ಬೇರೆ ಅವಶ್ಯಕತೆಗಳಿಗೆ ಹಣ ತೆಗೆದುಕೊಂಡು ಇದೀಗ ವಂಚನೆ ಮಾಡಿದ್ದಾನೆ. ಆರೋಪಿ ನವೀನ್​, ಹಾವೇರಿ ಜಿಲ್ಲೆಯ ಇನ್ಸ್​ಪೆಕ್ಟರ್ ಒಬ್ಬರ ಮಗನೆಂದು ತಿಳಿದುಬಂದಿದೆ.

    ಸದ್ಯ ಶಂಕರಪ್ಪ ಅವರು ನವೀನ್​ ವಿರುದ್ಧ ಕೆಂಗೇರಿ ಪೊಲೀಸ್​ ಠಾಣೆಗೆ ದೂರು ನೀಡಿದ್ದು, ನಕಲಿ ಎಸಿಪಿ ನವೀನ್​ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

    ಬಿಬಿಎಂಪಿ ಕಸದ ಲಾರಿಗೆ ಮತ್ತೊಂದು ಬಲಿ: ಬೈಕ್​ ಸವಾರ ದುರಂತ ಸಾವು, ಸ್ಥಳೀಯರ ಆಕ್ರೋಶ

    ತನ್ನ 10 ತಿಂಗಳ ಮಗುವನ್ನು ಕೆಳಗಿಟ್ಟು ಕಾಲುವೆಗೆ ಜಿಗಿದು ಮುಳುಗುತ್ತಿದ್ದ ಯುವಕನನ್ನು ರಕ್ಷಿಸಿದ ದಿಟ್ಟ ಮಹಿಳೆ!

    ಬೆಂಗಳೂರಲ್ಲಿ ಗಂಡನ ಕೊಂದು ಮಂಡ್ಯದಲ್ಲಿ ಸಿಕ್ಕಿಬಿದ್ದ ಪತ್ನಿ: ಪೊಲೀಸ್​ ತನಿಖೆಯಲ್ಲಿ ಕೊಲೆ ರಹಸ್ಯ ಬಯಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts