ಬೆಂಗಳೂರು: ತಾನೋರ್ವ ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ಎಂದು ಹೇಳಿಕೊಂಡು, ವ್ಯಕ್ತಿಯೊಬ್ಬರನ್ನು ನಂಬಿಸಿ, ಅವರಿಂದ ಲಕ್ಷಾಂತರ ರೂಪಾಯಿ ವಂಚಿಸಿದ ಖತರ್ನಾಕ್ ಅಸಾಮಿಗಾಗಿ ಕೆಂಗೇರಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.
ನವೀನ್, ಬಂಧಿತ ಆರೋಪಿ. ಶಂಕರಪ್ಪ ಎಂಬುವರಿಗೆ ಸುಮಾರು 20 ಲಕ್ಷ ರೂಪಾಯಿ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಹುಂಡೈ ಶೋ ರೂಂನಲ್ಲಿ ಕಾರ್ ಸರ್ವೀಸ್ಗೆ ಬಂದಿದ್ದ ನವೀನ್, ತಾನೊರ್ವ ಜಯನಗರ ಎಸಿಪಿ ಎಂದು ಹೇಳಿಕೊಂಡು ಶಂಕರಪ್ಪನನ್ನು ಪರಿಚಯಿಸಿಕೊಂಡಿದ್ದ.
ಪರಿಚಯದ ಬಳಿಕ ಶಂಕರಪ್ಪನಿಗೆ ಕಾರು ನೀಡುವುದಾಗಿ ನಂಬಿಸಿ, ಬೇರೆ ಬೇರೆ ಅವಶ್ಯಕತೆಗಳಿಗೆ ಹಣ ತೆಗೆದುಕೊಂಡು ಇದೀಗ ವಂಚನೆ ಮಾಡಿದ್ದಾನೆ. ಆರೋಪಿ ನವೀನ್, ಹಾವೇರಿ ಜಿಲ್ಲೆಯ ಇನ್ಸ್ಪೆಕ್ಟರ್ ಒಬ್ಬರ ಮಗನೆಂದು ತಿಳಿದುಬಂದಿದೆ.
ಸದ್ಯ ಶಂಕರಪ್ಪ ಅವರು ನವೀನ್ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ನಕಲಿ ಎಸಿಪಿ ನವೀನ್ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)
ಬಿಬಿಎಂಪಿ ಕಸದ ಲಾರಿಗೆ ಮತ್ತೊಂದು ಬಲಿ: ಬೈಕ್ ಸವಾರ ದುರಂತ ಸಾವು, ಸ್ಥಳೀಯರ ಆಕ್ರೋಶ
ತನ್ನ 10 ತಿಂಗಳ ಮಗುವನ್ನು ಕೆಳಗಿಟ್ಟು ಕಾಲುವೆಗೆ ಜಿಗಿದು ಮುಳುಗುತ್ತಿದ್ದ ಯುವಕನನ್ನು ರಕ್ಷಿಸಿದ ದಿಟ್ಟ ಮಹಿಳೆ!
ಬೆಂಗಳೂರಲ್ಲಿ ಗಂಡನ ಕೊಂದು ಮಂಡ್ಯದಲ್ಲಿ ಸಿಕ್ಕಿಬಿದ್ದ ಪತ್ನಿ: ಪೊಲೀಸ್ ತನಿಖೆಯಲ್ಲಿ ಕೊಲೆ ರಹಸ್ಯ ಬಯಲು