ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ್ದ ಕಾರುಗಳ ಗ್ಲಾಸ್ ಒಡೆದು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ವಿದ್ಯಾರ್ಥಿಗಳನ್ನು ಆರ್ಆರ್ ನಗರ ಠಾಣೆಯ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಬಂಧಿತ ಐವರು ಕೂಡ ಉತ್ತರ ಭಾರತ ಮೂಲದ ವಿದ್ಯಾರ್ಥಿಗಳು. ನಗರದಲ್ಲಿ ಇಂಜಿನಿಯರಿಂಗ್ ಓದುತ್ತಿದ್ದರು. ಕಂಠಪೂರ್ತಿ ಕುಡಿದು ಕಾರುಗಳ ಗ್ಲಾಸ್ಗಳನ್ನು ಆರೋಪಿಗಳು ಪುಡಿ ಪುಡಿ ಮಾಡಿದ್ದರು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಆರ್ಆರ್ ನಗರ ಠಾಣಾ ಪೊಲೀಸರು ಇದೀಗ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಐದು ಜನ ವಿದ್ಯಾರ್ಥಿಗಳು ಕಂಪ್ಯೂಟರ್ ಸೈನ್ಸ್ ಓದುತ್ತಿದ್ದರು. ಏಳನೇ ಸಮಿಸ್ಟರ್ ವಿದ್ಯಾರ್ಥಿಗಳಾಗಿದ್ದಾರೆ. ಕೆಲವೇ ದಿನಗಳ ಹಿಂದೆ ಆರ್ ಆರ್ ನಗರದ ಕಾಲೇಜು ಹಾಸ್ಟೆಲ್ನಿಂದ ಮೂರು ಜನ ಕೆಂಗೇರಿಗೆ ತೆರಳಿದ್ದರು. ಕೆಂಗೇರಿಯಲ್ಲಿ ಇನ್ನಿಬ್ಬರು ಆರೋಪಿಗಳು ವಾಸವಿದ್ರು. ಒಟ್ಟು ಐದು ಜನ ಬರ್ತಡೇ ಪಾರ್ಟಿ ಮಾಡಿದ್ದರು.
ಪಾರ್ಟಿಯಲ್ಲಿ ಫುಲ್ ಟೈಟ್ ಆಗಿದ್ದ ಆರೋಪಿಗಳು ಬಳಿಕ ಬ್ಯಾಟ್ ತೆಗೆದುಕೊಂಡು ಬಂದು ಕಾರಿನ ಗ್ಲಾಸ್ ಪುಡಿ ಪುಡಿ ಮಾಡಿದ್ದರು. ಕುಡಿದ ಅಮಲಿನಲ್ಲಿ ಆರ್ ಆರ್ ನಗರದಲ್ಲಿ 6 ಕಾರು ಮತ್ತು ಕೆಂಗೇರಿಯಲ್ಲಿ 8 ಕಾರುಗಳ ಗ್ಲಾಸ್ ಅನ್ನು ಆರೋಪಿಗಳು ಪುಡಿ ಪುಡಿ ಮಾಡಿದ್ದರು. ಸದ್ಯ ಆರೋಪಿಗಳ ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)
ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಇತ್ತ ಉದ್ಯೋಗವೂ ಇಲ್ಲ: ಸಾವಿಗೆ ಶರಣಾದ ಅಣ್ಣ-ತಮ್ಮ
ಅಮೆರಿಕಕ್ಕೆ ಮೋದಿ ಭೇಟಿ ಇಂಪ್ಯಾಕ್ಟ್- ಭಾರತಕ್ಕೆ ಮರಳಿತು 157 ಪುರಾತನ ಐತಿಹಾಸಿಕ ಕಲಾಕೃತಿಗಳು…
ನೀವು ಯಾವಾಗಲೂ ಖುಷಿಯಿಂದ ಇರಬೇಕಾ? ಹಾಗಾದ್ರೆ ಅಮಲಾ ಪೌಲ್ ಹೇಳೋ ಮಾತನೊಮ್ಮೆ ಕೇಳಿ..!