More

    ಕಾಶ್ಮೀರದಲ್ಲಿ ಉಗ್ರರ ಗುಂಡೇಟಿಗೆ ಬ್ಯಾಂಕ್​ ಮ್ಯಾನೇಜರ್ ಬಲಿ​: ಹಿಂದುಗಳೇ ಟಾರ್ಗೆಟ್​, ಆತಂಕದಲ್ಲಿ ಜನರು

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದುಗಳನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ನಡೆಸುತ್ತಿರುವ ಗುಂಡಿನ ದಾಳಿ ಮುಂದುವರಿದಿದ್ದು, ಉಗ್ರರ ಗುಂಡೇಟಿಗೆ ರಾಜಸ್ಥಾನ ಮೂಲದ ಬ್ಯಾಂಕ್​ ಮ್ಯಾನೇಜರ್​ ಮೃತಪಟ್ಟಿರುವ ಘಟನೆ ಕಣಿವೆ ನಾಡಿನ ಕುಲ್ಗಾಮ್​ ಜಿಲ್ಲೆಯಲ್ಲಿ ಗುರುವಾರ (ಜೂನ್​. 2) ನಡೆದಿದೆ.

    ಹತ್ಯೆಯಾದ ಬ್ಯಾಂಕ್​ ಮ್ಯಾನೇಜರ್​ನನ್ನು ವಿಜಯ್​ ಕುಮಾರ್​ ಎಂದು ಗುರುತಿಸಲಾಗಿದೆ. ದಕ್ಷಿಣ ಕಾಶ್ಮೀರದ ಕುಲ್ಗಾಮ್​ ಜಿಲ್ಲೆಯ ಮೊಹನ್​ ಪೊರಾ ಏರಿಯದಲ್ಲಿರುವ ಎಲ್ಲಕ್ವೈ ದೇಹತಿ ಬ್ಯಾಂಕ್​ನಲ್ಲಿ ಮ್ಯಾನೇಜರ್​ ಆಗಿ ಸೇವೆ ಸಲ್ಲಿಸುತ್ತಿದ್ದರು. ವಿಜಯ್​ ಕುಮಾರ್​ ರಾಜಸ್ಥಾನದ ಹನುಮಗಢ ಮೂಲದವರು. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

    ಇಂದು ಬೆಳಗ್ಗೆ ಬಾಂಬ್​ ಸ್ಫೋಟದಿಂದ ಮೂವರು ಯೋಧರು ಹುತಾತ್ಮರಾದ ಶೋಪಿಯಾನ ಪ್ರದೇಶದಿಂದ ಕೇವಲ 13 ಕಿ.ಮೀ ದೂರದಲ್ಲೇ ಈ ಘಟನೆ ನಡೆದಿದೆ. ಕುಲ್ಗಾಮ್​ ಜಿಲ್ಲೆಯ ಗೋಪಾಲ್ಪೋರಾ ಪ್ರದೇಶದಲ್ಲಿ ಹಿಂದು ಮಹಿಳೆ ಹತ್ಯೆಯಾದ ಎರಡೇ ದಿನದಲ್ಲಿ ಇದೀಗ ಬ್ಯಾಂಕ್​ ಮ್ಯಾನೇಜರ್​ ಹತ್ಯೆಯಾಗಿದೆ. ಉಗ್ರರ ಗುಂಡೇಟಿಗೆ ಹತ್ಯೆಯಾದ ಮಹಿಳೆಯನ್ನು ರಜನಿ ಬಾಲಾ ಎಂದು ಗುರುತಿಸಲಾಗಿದೆ. ಈಕೆ ಶಾಲಾ ಶಿಕ್ಷಕಿಯಾಗಿದ್ದರು. ಗಂಡ ಮತ್ತು ಮಗಳ ಜತೆ ಜಮ್ಮು ವಿಭಾಗದ ಸಾಂಬಾದಲ್ಲಿ ವಾಸಿಸುತ್ತಿದ್ದರು.

    ಶಿಕ್ಷಕಿ ಹತ್ಯೆಯಾದ ಕೇವಲ ಎರಡೇ ದಿನದಲ್ಲಿ ಬ್ಯಾಂಕ್​ ಮ್ಯಾನೇಜರ್​ ವಿಜಯ್​ ಕುಮಾರ್​ ಕೊಲೆಯಾಗಿದೆ. ಕಳೆದ ವಾರ ಟಿವಿ ಕಲಾವಿದೆ ಅಮ್ರೀನ್​ ಭಟ್​ ಅವರನ್ನು ಲಷ್ಕರ್​ ಇ ತೊಯ್ಬಾ ಸಂಘಟನೆಯ ಉಗ್ರರು ಬದ್ಗಾಮ್​ ಜಿಲ್ಲೆಯ ಛಡೂರಾ ಏರಿಯಾದಲ್ಲಿ ಗುಂಡಿಟ್ಟು ಹತ್ಯೆಗೈದಿದ್ದರು. ಮೇ 12ರಂದು ಕಂದಾಯ ಇಲಾಖೆ ಉದ್ಯೋಗಿ ರಾಹುಲ್​ ಭಟ್​ ಎಂಬುವರನ್ನು ಬದ್ಗಾಮ್​ ಜಿಲ್ಲೆಯಲ್ಲೇ ಉಗ್ರರು ಹತ್ಯೆ ಮಾಡಿದ್ದರು. ಹಿಂದುಗಳನ್ನೇ ಉಗ್ರರು ಟಾರ್ಗೆಟ್​ ಮಾಡಿದ್ದು, ಸದ್ಯ ಆತಂಕದ ವಾತಾವರಣದಲ್ಲಿ ಬದುಕುವಂತಾಗಿದೆ. (ಏಜೆನ್ಸೀಸ್​)

    SSLC ಪರೀಕ್ಷೇಲಿ ಡಿಸ್ಟಿಂಕ್ಷನ್​ ಬಂದಾಕೆ ಪ್ರಥಮ ಪಿಯು ಎಕ್ಸಾಂ​ನಲ್ಲಿ ಫೇಲಾಗ್ತೀನಿ ಅಂತಾ ಹೆದರಿ ಆತ್ಮಹತ್ಯೆ

    VIDEO: ಯುವತಿ ಜತೆ ಮಾಜಿ ಸಚಿವ ಲವ್ವಿಡವ್ವಿ: ಪತ್ನಿ ಕೈಲಿ ರೆಡ್​ಹ್ಯಾಂಡ್​ ಸಿಕ್ಕಿಬಿದ್ದು ಪೇಚಾಟ- ವಿಡಿಯೋ ವೈರಲ್

    ತಮಿಳುನಾಡಿನಿಂದ ಉತ್ತರ ಭಾರತೀಯರಿಗೆ ಗೇಟ್​ ಪಾಸ್​! ಡಿಜಿಪಿ ಶೈಲೆಂದ್ರ ಬಾಬು ಕೊಟ್ಟ ಸ್ಪಷ್ಟನೆ ಹೀಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts