More

    ನಿಜವಾಯ್ತು ಬಬಲಾದಿ ಮಠದ 2021ರ ಭವಿಷ್ಯ: ಆಂಧ್ರ, ಪುನೀತ್, ರಾಜಕೀಯ ಭವಿಷ್ಯದ ವಿಡಿಯೋ ವೈರಲ್​​!

    ವಿಜಯಪುರ: ಬಬಲಾದಿ ಮಠದ 2021ರ ಭವಿಷ್ಯವು ನಿಜವಾಗಿದೆ. ತಿರುಪತಿಯಲ್ಲಿ ಉಂಟಾದ ಜಲಪ್ರಳಯದ ಬಗ್ಗೆ 9 ತಿಂಗಳ ಮುಂಚೆಯೇ ಬಬಲಾದಿ ಮಠ ಭವಿಷ್ಯ ನುಡಿದಿತ್ತು. ಅದರಂತೆಯೇ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ತಿರುಪತಿಯಲ್ಲಿ ಉಂಟಾದ ಭಾರೀ ಸುದ್ದಿಯಾಯಿತು.

    ತೆಲಗು ಮಾತನಾಡುವ ರಾಜ್ಯಕ್ಕೆ ಜಲ‌ಕಂಟಕ ಎಂದು 9 ತಿಂಗಳ ಹಿಂದೆಯೇ ಬಬಲಾದಿ ಮಠದ ಸಿದ್ರಾಮಯ್ಯ ಹೊಳಿಮಠ ಅವರು ಭವಿಷ್ಯ ನುಡಿದಿದ್ದರು. ವಾಯುಭಾರ ಕುಸಿತದಿಂದ ತಿರುಪತಿಯಲ್ಲಿ ಜಲಪ್ರಳಯವಾಗಿ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿದ್ದು, ಇನ್ನು ನಮ್ಮ ಕಣ್ಣ ಮುಂದೆಯೇ ಇದ್ದು, ಬಬಲಾದಿ ಮಠದ ಭವಿಷ್ಯ ನಿಜವಾದಂತಿದೆ. ಹೀಗಾಗಿ 2021ರ ಶಿವರಾತ್ರಿಯ ದಿನ ಸಿದ್ರಾಮಯ್ಯ ಹೊಳಿಮಠ ನುಡಿದ ಭವಿಷ್ಯದ ವಿಡಿಯೋ ತುಣುಕು ಎಲ್ಲೆಡೆ ವೈರಲ್ ಆಗಿದೆ.

    500 ವರ್ಷಗಳ ಹಿಂದೆ ಚಿಕ್ಕಯ್ಯಪ್ಪನವರು ಬರೆದಿಟ್ಟಿರುವ ಕಾಲಜ್ಞಾನದಂತೆ ಭವಿಷ್ಯ ನುಡಿಯಲಾಗಿದೆಯಂತೆ. ಪ್ರತಿ ವರ್ಷ ಶಿವರಾತ್ರಿಯಂದು ಈ ಕಾಲಜ್ಞಾನವನ್ನು ಓದಲಾಗುತ್ತದೆ. ಕರ್ನಾಟಕ ರತ್ನ ಪುನೀತ್ ಸಾವಿನ ಬಗ್ಗೆಯು ಬಬಲಾದಿ ಮಠ ಭವಿಷ್ಯ ನುಡಿದಿತ್ತಾ ಎಂಬ ಅನುಮಾನ ವ್ಯಕ್ತವಾಗಿದೆ. ಓರ್ವ ಗಣ್ಯ ವ್ಯಕ್ತಿಯ ಏರಿಳಿತವಾಗುತ್ತೆ ಎಂದು ಬಬಲಾದಿ ಮಠ ಭವಿಷ್ಯ ನುಡಿದಿತ್ತು.

    ರಾಜಕೀಯ ವ್ಯಕ್ತಿಯ ಏರಿಳಿತವೂ ಆಗಲಿದೆ ಎಂದು ಬಬಲಾದಿ ಮಠ ಹೇಳಿತ್ತು. ಅದರಂತೆ ಬಿಎಸ್ವೈ ಸಿಎಂ ಸ್ಥಾನದಿಂದ ಬದಲಾವಣೆಯಾದರಂತೆ. ರಾಜಕೀಯ ಪಕ್ಷಗಳಲ್ಲಿ ದ್ವೇಷ ಅಸೂಯೆ ಹೆಚ್ಚಾಗುತ್ತೆ ಎಂದಿದ್ದರು. ರಾಜಕೀಯದಲ್ಲಿ ಒಂದೇ ಪಕ್ಷದ ನಾಯಕರಗಳ ನಡುವೆ ದ್ವೇಷ ಅಸೂಯೆ ಹೆಚ್ಚಾಗುತ್ತೆ ಎಂದಿದ್ದು ನಿಜವಾಗಿದೆ. ಅಮೆರಿಕ, ಇರಾನ್-ಇರಾಕ್ ದೇಶಗಳಿಗೆ ಕೇಡು ಎಂದು ಬಬಲಾದಿ ಶ್ರೀಗಳು ಹೇಳಿದ್ದು, ಈಗಾಗಲೇ ಅಪಘಾನಿಸ್ತಾನದಿಂದ ಅಮೆರಿಕ ಕಾಲ್ಕಿತ್ತಿದ್ದು, ತಾಲಿಬಾನ್​ ಆಫ್ಘಾನ್ ವಶಪಡಿಸಿಕೊಂಡಿದೆ. (ದಿಗ್ವಿಜಯ ನ್ಯೂಸ್​)

    ವಿಶ್ವಪ್ರಸಿದ್ಧ ಆಫ್ಘಾನ್​ನ ಹಸಿರು ಕಣ್ಣಿನ ಹುಡುಗಿ ಈಗ ಎಲ್ಲಿದ್ದಾಳೆ? ತಾಲಿಬಾನಿಗಳಿಂದ ಈಕೆ ಸೆಫ್​ ಆಗಿದ್ಹೇಗೆ?

    ಪ್ರಖ್ಯಾತ ವಿದ್ವಾಂಸ, ವಿಜಯವಾಣಿ ಅಂಕಣಕಾರ ಪ್ರೊ. ಕೆ.ಎಸ್. ನಾರಾಯಣಾಚಾರ್ಯರು ಇನ್ನಿಲ್ಲ

    ಕಷ್ಟದ ಸಮಯದಲ್ಲಿ ಬಹುಬೇಗನೇ ಸ್ಪಂದಿಸಿ ನೆರವು ನೀಡಿದ ಕಿಚ್ಚ ಸುದೀಪ್​ ಬಗ್ಗೆ ವಿದ್ಯಾರ್ಥಿ ಹೇಳಿದ್ದು ಹೀಗೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts