More

    ಪ್ರೀತಿಸಿ ಮದ್ವೆಯಾದ ಯುವತಿಗೆ ಇದೆಂಥಾ ಅನ್ಯಾಯ? ಗಂಡನ ಜತೆ ಬಾಡಿಗೆ ಮನೆಗೆ ಹೋದ ಬೆನ್ನಲ್ಲೇ ಬಿಗ್​ ಶಾಕ್​!

    ಚಿತ್ತೂರು: ಮೂರು ದಿನಗಳಿಂದ ನನ್ನ ಪತಿ ಕಾಣುತ್ತಿಲ್ಲ ಎಂದು ಯುವತಿಯೊಬ್ಬಳು ಪೊಲೀಸ್​ ಠಾಣೆಯ ಮೆಟ್ಟಿಲೇರಿರುವ ಘಟನೆ ಆಂಧ್ರ ಪ್ರದೇಶದ ಮದನಪಲ್ಲಿಯಲ್ಲಿ ನಡೆದಿದ್ದು, ಅತ್ತೆ ಮನೆಯ ವಿರುದ್ಧ ಆರೋಪ ಮಾಡಿದ್ದಾಳೆ.

    ಆಂಧ್ರದ ನಲ್ಗೊಂಡ ಜಿಲ್ಲೆಯ ಚಿಂತಪಲ್ಲಿ ಮಂಡಲದ ಮೊಹಮ್ಮೆದ್​ ಸನಾ, ಮದನಪಲ್ಲಿ ಗ್ರಾಮೀಣ ವಲಯದ ವಂದ್ಲಪಲ್ಲಿ ಮೂಲದ ರಮೇಶ್​ ಕುಮಾರ್​ ಎಂಬಾತನ್ನು ಮದುವೆ ಆಗಿದ್ದಾಳೆ. ಇಬ್ಬರು ಪ್ರೀತಿಸಿ ಕಳೆದ ಜನವರಿ 4ರಂದು ಮದನಪಲ್ಲಿಯ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದಾರೆ.

    ಮದುವೆಯಾದ ಮರು ದಿನದಿಂದಲೇ ಅತ್ತೆ ಮನೆಯವರು ಕಿರುಕುಳ ನೀಡಲು ಆರಂಭಿಸಿದರು ಎಂದು ಸನಾ ಆರೋಪಿಸಿದ್ದಾರೆ. ಮದನಪಲ್ಲಿಯಲ್ಲಿ ಬಾಡಿಗೆ ಮನೆಯೊಂದಕ್ಕೆ ಇತ್ತೀಚೆಗಷ್ಟೇ ಸ್ಥಳಾಂತರವಾದೆವು. ಮೂರು ದಿನಗಳ ಹಿಂದೆ ಹೊರ ಹೋಗಿ ಬರುವುದಾಗಿ ಹೇಳಿ ಹೋದ ರಮೇಶ್​ ಮತ್ತೆ ಮರಳಿ ಬಂದಿಲ್ಲ. ನನ್ನ ಪತಿಯನ್ನು ನನ್ನ ಅತ್ತೆಯೇ ಬಚ್ಚಿಟ್ಟಿದ್ದಾರೆಂದು ಸನಾ ಆರೋಪಿಸಿದ್ದಾರೆ.

    ಈ ಸಂಬಂಧ ಸನಾ ಪೊಲೀಸ್​ ಠಾಣೆಯಲ್ಲಿ ದೂರು ಸಹ ಸಲ್ಲಿಸಿದ್ದಾರೆ. ರಮೇಶ್​ನನ್ನು ಬಿಟ್ಟುಬಿಡುವಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಸನಾ ಹೇಳಿದ್ದಾರೆ. ಇತ್ತ ಸನಾ ವಿರುದ್ಧ ರಮೇಶ್​ ಕುಟುಂಬ ಕೂಡ ದೂರು ದಾಖಲಿಸಿದೆ. ಸನಾ ಕುಟುಂಬವೂ ರಮೇಶ್​ ಕುಟುಂಬದ ವಿರುದ್ಧ ದೂರು ದಾಖಲಿಸಿದೆ. ಎರಡು ದೂರನ್ನು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

    VIDEO: ಆರು ಮಂದಿ ಸೇಮ್​ ಸೇಮ್​, ನನ್ನಮ್ಮ ಯಾರು? ಕೊನೆಗೂ ಕಂದಮ್ಮ ಸಕ್ಸಸ್​: ಕ್ಯೂಟ್​ ವಿಡಿಯೋಗೆ ನೆಟ್ಟಿಗರು ಫಿದಾ

    ಶಾಲಾ ಸಮವಸ್ತ್ರದಲ್ಲಿ ಬಂದ ಹುಡುಗಿಯಿಂದ ನೀಚ ಕೃತ್ಯ: ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ!

    ಚಿಕನ್​ ಪ್ರಿಯರಿಗೆ ಶಾಕಿಂಗ್​ ನ್ಯೂಸ್​! ಈ ಒಂದು ಕಾರಣದಿಂದ ಕೋಳಿ ಮಾಂಸದ ಬೆಲೆ ಇನ್ನಷ್ಟು ಹೆಚ್ಚಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts