More

    PWD ಇಂಜಿನಿಯರ್​ ಮನೆಯ ಬಕೆಟ್​ನಲ್ಲೂ ದುಡ್ದು, ನೀರಿನ ಪೈಪ್​ನಲ್ಲೂ ಹರಿಯುತ್ತಿದೆ ಕಂತೆ ಕಂತೆ ನೋಟು!

    ಕಲಬುರಗಿ: ಇಂದು ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳಿಂದ ನಡೆದ ಮಹಾಬೇಟೆಯಲ್ಲಿ ಭ್ರಷ್ಟ ಅಧಿಕಾರಿಗಳ ಅಕ್ರಮ ಆಸ್ತಿಗಳಿಕೆ ಬೆಳಕಿಗೆ ಬರುತ್ತಿದೆ. ಬೆಳಗ್ಗೆ ಆರಂಭವಾದ ದಾಳಿ ಮಧ್ಯಾಹ್ನವಾದರೂ ಮುಂದುವರಿದಿದ್ದು, ಝಣ ಝಣ ಕಾಂಚಾಣ ಅಧಿಕಾರಿಗಳ ಮನೆಯಲ್ಲಿ ಕುಣಿಯುತ್ತಿದೆ. ನೀರಿನ ಪೈಪ್​ನಲ್ಲಿ ನೀರಿನ ಬದಲು ಕಂತೆ ಕಂತೆ ಹಣ ಹರಿಯುತ್ತಿರುವುದನ್ನು ನೋಡಿ ಎಸಿಬಿ ಅಧಿಕಾರಿಗಳೇ ಶಾಕ್​ ಆಗಿದ್ದಾರೆ.

    ಕಲಬುರಗಿಯ ಪಿಡಬ್ಲೂಡಿ ಇಂಜಿನಿಯರ್​ (ಜೆಇ) ಶಾಂತಗೌಡ ಬಿರಾದರ್ ಮನೆ ಮೇಲೆ ಎಸಿಬಿ ದಾಳಿ ನಡೆಸಿದ್ದು, ಮನೆಯಲ್ಲಿ 25 ಲಕ್ಷ ಕ್ಕೂ ಅಧಿಕ ನಗದು ಹಾಗೂ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಕಲಬುರಗಿ ನಗರದ ಗುಬ್ಬಿ ಕಾಲೋನಿಯಲ್ಲಿರುವ ಶಾಂತಗೌಡ ಬಿರಾದರ್​ ಮನೆಯಲ್ಲಿ ಅಧಿಕಾರಿಗಳು ನಗದು ಎಣಿಕೆ ಮಾಡುತ್ತಿದ್ದಾರೆ.

    ಮುಂಜಾನೆ ಮನೆ ಬಾಗಿಲು ತರೆಯಲು ಸತಾಯಿಸಿದ ಶಾಂತಗೌಡ ಅವರ ಮನೆ ಹೊರಗೆ ಎಸಿಬಿ ಸಿಬ್ಬಂದಿ ಹದಿನೈದು ನಿಮಿಷಕ್ಕೂ ಹೆಚ್ಚು ಕಾದರು. ಬಾಗಿಲು ತೆರೆಯುವಂತೆ ಹೇಳಿದ್ರು ಬಾಗಿಲು ತೆರೆಯದೇ ಶಾಂತಗೌಡರ ಕುಟುಂಬ ಸತಾಯಿಸಿರುವ ಆರೋಪ ಕೇಳಿಬಂದಿದೆ.

    ಇನ್ನು ಶಾಂತಾಗೌಡರ ಮನೆಯ ನೀರಿನ ಪೈಪ್​ನಲ್ಲಿ ನೀರಿನಂತೆ ಕಂತೆ ಕಂತೆ ನೋಟು ಹರಿಯುತ್ತಿದೆ. ಅಧಿಕಾರಿಗಳು ಪೈಪ್ ಕಟ್ ಮಾಡಿ ಹಣವನ್ನು ಹೊರ ತೆಗೆಯುತ್ತಿದ್ದಾರೆ. 40 ಲಕ್ಷಕ್ಕೂ ಅಧಿಕ ನಗದು ಮನೆಯಲ್ಲಿ ಪತ್ತೆಯಾಗಿದೆ. ಚಿನ್ನಾಭರಣ ಕೂಡ ಸಿಕ್ಕಿದೆ.

    ಎಸಿಬಿ ದಾಳಿಯ ಹತ್ತು ನಿಮಿಷ ಮುಂಚೆ ಶಾಂತಗೌಡ ಹಣದ ಕಂತೆಯನ್ನು ನೀರಿನ ಪೈಪ್​ನಲ್ಲಿ ಬಿಸಾಡಿದ್ದಾರೆನ್ನಲಾಗಿದೆ. ಬಾಗಿಲು ತೆರೆಯೋದಕ್ಕೆ ಸತಾಯಿಸುವ ವೇಳೆ ಈ ಕೆಲಸ ಮಾಡಿದ್ದಾರೆನ್ನಲಾಗಿದೆ. ಬಳಿಕ ಫ್ಲಂಬರ್​ನನ್ನು ಕರೆಯಿಸಿ ಪೈಪ್ ಕಟ್ ಮಾಡಿಸಿ ಅಧಿಕಾರಿಗಳು ಹಣ ಹುಡುಕಿದ್ದಾರೆ. ಇನ್ನೂ ಎರಡು ಲಾಕರ್ ಕೀ ನಿಡದೆ ಶಾಂತಗೌಡ ಸತಾಯಿಸುತ್ತಿದ್ದಾರೆ. ಎಸಿಬಿ ಅಧಿಕಾರಿಗಳ ದಾಳಿ ಸಂದರ್ಭದಿಂದ ಇಲ್ಲಿಯವರೆಗೆ ಶಾಂತಾಗೌಡ ತುಂಬಾ ಸತಾಯಿಸುತ್ತಿರುವ ಆರೋಪ ಕೇಳಿಬಂದಿದೆ. (ದಿಗ್ವಿಜಯ ನ್ಯೂಸ್​)

    ಕೃಷಿ ಇಲಾಖೆ ಜಂಟಿ ನಿರ್ದೇಶಕನ ಮನೆಯಲ್ಲಿ 7 ಕೆಜಿ ಬಂಗಾರ, 15 ಲಕ್ಷ ರೂ. ನಗದು ಪತ್ತೆ

    ಎಸಿಬಿ ದಾಳಿ: ಹೆಸ್ಕಾಂ ನೌಕರನ ಐಷಾರಾಮಿ ಮನೆಯಲ್ಲಿ ಲಿಫ್ಟ್​ ಕೂಡ ಇದೆ!

    ಎಫ್​ಡಿಎ ಮಾಯಣ್ಣರ ಬಳಿ 50 ಕೋಟಿಗೂ ಅಧಿಕ ಮೌಲ್ಯದ ಆಸ್ತಿ? ಎಸಿಬಿ ಅಧಿಕಾರಿಗಳೇ ಶಾಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts