ಹೈದರಾಬಾದ್: ಮಧಪುರ್ ಕಾರು ಸರ್ವೀಸ್ ಕೇಂದ್ರದಿಂದ ಬರೋಬ್ಬರಿ 55 ಲಕ್ಷ ರೂಪಾಯಿ ನಗದ ಹಣವನ್ನು ಕದ್ದು ಪರಾರಿಯಾಗಿದ್ದ ಮೂವರು ಖದೀಮರನ್ನು ವಿಶೇಷ ಕಾರ್ಯಾಚರಣೆ ತಂಡದ ಸಹಾಯದಿಂದ ಮಧಪುರ್ ಪೊಲೀಸರು ಬಂಧಿಸಿದ್ದು, ಬಂಧಿತರಿಂದ ಕದ್ದ ಎಲ್ಲ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತರನ್ನು ಮೆಕಾನಿಕ್ ಮೊಹಮ್ಮದ್ ತಾಹೆರ್ (20) ಮತ್ತು 19 ವರ್ಷದ ಇಬ್ಬರು ವಿದ್ಯಾರ್ಥಿಗಳಾದ ಸೈಯೆದ್ ಜಾವೇದ್ ಮತ್ತು ಸೈಫ್ ಮೊಹಿದ್ದೀನ್ ಎಂದು ಗುರುತಿಸಲಾಗಿದೆ. ಎಲ್ಲರೂ ಕೂಡ ನಗರದ ಆಸೀಫ್ ನಗರದ ನಿವಾಸಿಗಳು.
ಆಗಿದ್ದೇನು?
ಡಿಸೆಂಬರ್ 10ರಂದು ಮಧಪುರ್ನ ನೂರು ಅಡಿ ರಸ್ತೆಯ ಬಳಿಯಿರುವ ಮಲ್ಟಿ ಬ್ರ್ಯಾಂಡ್ ಲಕ್ಷುರಿ ಕಾರ್ ಸರ್ವೀಸ್ ಶ್ರೀ ಮೋಟರ್ಸ್ ಮಾಲೀಕ ಅಲ್ಲಾಂ ಶ್ರೀಕಾಂತ್ರಿಂದ ಪೊಲೀಸರು ದೂರು ಒಂದನ್ನು ಸ್ವೀಕರಿಸುತ್ತಾರೆ. ಡಿ.9ರಂದು ತನ್ನ ಕಚೇರಿಯಲ್ಲಿ ಲಾಕರ್ನಲ್ಲಿ 55 ಲಕ್ಷ ರೂ. ನಗದು ಇಟ್ಟಿದೆ. ಅಂದು ವಾಚ್ಮನ್ ಬಾಲರಾಜು ಎಂಬುವರು ರಾತ್ರಿ ಪಾಳಿ ಕೆಲಸದಲ್ಲಿದ್ದರು. ಡಿ.10ರ ಬೆಳಗ್ಗೆ ಕಚೇರಿಗೆ ಬಂದು ನೋಡಿದಾಗ ಲಾಕರ್ ಮುರಿದಿರುವುದು ಕಣ್ಣಿಗೆ ಬಿತ್ತು. ಅದರಲ್ಲಿ ಹಣವೂ ಕೂಡ ಇರಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ವ್ಯಕ್ತಿಯೊಬ್ಬ ಹಿಂಬಾಗಿಲಿನ ಸ್ಕ್ರೀವ್ ಬಿಚ್ಚಿ, ರೂಮಿನೊಳಗೆ ಪ್ರವೇಶಿಸಿ, ಲಾಕರ್ ಹೊಡೆದು, ಹಣ ಕಳ್ಳತನ ಮಾಡಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ತಕ್ಷಣ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಮಧಪುರ್ ಪೊಲೀಸರು ಮೊದಲು ಕಾರು ಸರ್ವೀಸ್ ಕೇಂದ್ರದಲ್ಲಿದ್ದ 35 ಕೆಲಸಗಾರರನ್ನು ವಿಚಾರಣೆ ನಡೆಸಿದ್ದಾರೆ. ತೀವ್ರ ವಿಚಾರಣೆ ನಡೆಸಿದ ಬಳಿಕ ತಾಹೇರ್ ಎಂಬಾತ ತನ್ನ ಇಬ್ಬರು ಸ್ನೇಹಿತರಾದ ಸೈಯೆದ್ ಜಾವೇದ್ ಮತ್ತು ಸೈಫ್ ಮೊಹಿದ್ದೀನ್ ನೆರವಿನಿಂದ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಆರೋಪಿಗಳಾದ ತಾಹೇರ್ ಮತ್ತು ಜಾವೇದ್ ಬಳಿಯಿಂದ ಪೊಲೀಸರು ತಲಾ 20 ಲಕ್ಷ ರೂ. ವಶಕ್ಕೆ ಪಡೆದುಕೊಂಡರೆ, ಮೊಹಿದ್ದೀನ್ ಮನೆಯಲ್ಲಿ 15 ಲಕ್ಷ ಹಣವನ್ನು ವಶಕ್ಕೆ ಪಡೆಯಲಾಗಿದೆ. (ಏಜೆನ್ಸೀಸ್)
VIDEO| ಬಟ್ಟೆ ಜಾರಿ ಕೆಳಗೆ ಬೀಳ್ತಿದ್ರು ಗಮನಿಸದ ನಟಿ ಪಾಯಲ್: ಮತ್ತೊಮ್ಮೆ ಟ್ರೋಲ್ ಆದ ಹಾಟ್ ಬ್ಯೂಟಿ
ಗ್ಯಾಂಗ್ರೇಪ್ ಆಯ್ತೆಂದು ಯುವತಿ ದೂರು: ಇದ್ದ ಕೆಲಸವೆಲ್ಲಾ ಬಿಟ್ಟು ತನಿಖೆ ಮಾಡಿದ ಪೊಲೀಸರಿಗೆ ಕಾದಿತ್ತು ಭಾರಿ ಶಾಕ್
ಈ ವರ್ಷ ಹುಟ್ಟುಹಬ್ಬ ಆಚರಣೆ ಬೇಡವೆಂದ ಮಾಜಿ ಸಿಎಂ ಎಚ್ಡಿಕೆ ಕೊಟ್ಟ ಕಾರಣ ಹೇಗಿದೆ..