ಕೋಲ್ಕತ: ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಬಿಜೆಪಿ ಬಲ 77 ರಿಂದ 75ಕ್ಕೆ ಕುಸಿದಿದೆ. ಬಂಗಾಳದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ದಾಖಲಿಸಿರುವ ಬಿಜೆಪಿ ಸಂಸದರಿಬ್ಬರು ತಮ್ಮ ಶಾಸಕ ಸ್ಥಾನಕ್ಕೆ ಬುಧವಾರ ರಾಜೀನಾಮೆ ಸಲ್ಲಿಸಿದ್ದಾರೆ.
ಬಿಜೆಪಿ ಹೈಕಮಾಂಡ್ ಆದೇಶದ ಮೇರೆಗೆ ಇಬ್ಬರು ರಾಜೀನಾಮೆ ನೀಡಿದ್ದಾರೆ. ಇದನ್ನು ಗೇಲಿ ಮಾಡಿರುವ ತೃಣಮೂಲ ಕಾಂಗ್ರೆಸ್, ಲೋಕಸಭೆಯಲ್ಲಿ ಸೇಫ್ ಆಗಿರಲು ಬಿಜೆಪಿ ಈ ಆಟವಾಡುತ್ತಿದೆ ಎಂದಿದೆ. ಅಲ್ಲದೆ, ಬಂಗಾಳದ ಎಲ್ಲಾ ಬಿಜೆಪಿ ಶಾಸಕರಿಗೆ ಸೆಕ್ಯುರಿಟಿ ನೀಡುವ ಮೂಲಕ ಬಿಜೆಪಿ ತೆರಿಗೆ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದೆ.
ಬಂಗಾಳದಲ್ಲಿ ಸರ್ಕಾರ ರಚಿಸುವ ಭರವಸೆಯೊಂದಿಗೆ ಪಕ್ಷದ ಆದೇಶದಂತೆ ಬಂಗಾಳ ಚುನಾವಣೆಯಲ್ಲಿ ಸ್ಪರ್ಧಿಸಿದ ಐವರು ಸಂಸದರಲ್ಲಿ ನಿಶಿತ್ ಪ್ರಾಮಾಣಿಕ್ ಮತ್ತು ಜಗನ್ನಾಥ್ ಸರ್ಕಾರ ಸಹ ಒಳಗೊಂಡಿದ್ದರು. ನಿಶಿತ್ ಮತ್ತು ಜಗನ್ನಾಥ್ ವಿಜಯಶಾಲಿ ಸಹ ಆದರು. ಆದರೆ, ಕೇವಲ 77 ಸ್ಥಾನಗಳು ಬಂದಿದ್ದರಿಂದ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ನಿಶಿತ್ ಮತ್ತು ಜಗನ್ನಾತ್ ಸಂಸತ್ತಿಗೆ ಹೆಚ್ಚು ಉಪಯುಕ್ತ ಎಂದು ಹೇಳಿ ಬಿಜೆಪಿ ಹೈಕಮಾಂಡ್ ರಾಜೀನಾಮೆ ಕೊಡಿಸಿದೆ.
ಸಂಸದರಾಗಿ ನಿಶಿತ್ ಮತ್ತು ಸರ್ಕಾರ್ ಇಬ್ಬರೂ ಕೇಂದ್ರ ಭದ್ರತಾ ವ್ಯಾಪ್ತಿಯನ್ನು ಹೊಂದಿದ್ದಾರೆ. ಬಿಜೆಪಿಯ ನಂದಿಗ್ರಾಮ ಶಾಸಕ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿಗೆ ಝಡ್ ಪ್ಲಸ್ ಭದ್ರತೆ ಕೊಡಲಾಗಿದೆ.
ಚುನಾವಣಾ ಫಲಿತಾಂಶ ಬಂದಾಗಿನಿಂದ ಬಂಗಾಳದಲ್ಲಿ ಹಿಂಸಾಚಾರ ನಡೆಯುತ್ತಲೇ ಇದೆ. ಹೀಗಾಗಿ ಬಿಜೆಪಿ ಶಾಸಕರಿಗೆ ಭದ್ರತೆಯನ್ನು ನೀಡಲಾಗಿದೆ. ಹಿಂಸಾಚಾರದ ಹಿಂದೆ ಟಿಎಂಸಿ ಕೈವಾಡ ಇದೆ ಎಂದು ಬಿಜೆಪಿ ಆರೋಪ ಮಾಡಿದೆ. (ಏಜೆನ್ಸೀಸ್)
ವೈರಲ್ ಆಗ್ತಿದೆ ಪಾಕ್ ಪ್ರಧಾನಿ ಇಮ್ರಾನ್ ಖಾನ್-ನಟಿ ರೇಖಾ ಕುರಿತ ಸ್ವಾರಸ್ಯಕರ ಸುದ್ದಿ!
ಇದನ್ನು ನೋಡಿ ಅಳಬೇಕೋ ಅಥವಾ ನಗಬೇಕೋ ಎಂದು ಗೊತ್ತಾಗ್ತಿಲ್ಲ ಎಂದ ಯುಪಿ ಮಾಜಿ ಸಿಎಂ!
ಹಳ್ಳಿಗಳಿಗೆ ಕರೊನಾ ಕಾಳ್ಗಿಚ್ಚು! ಸೋಂಕು ವ್ಯಾಪಿಸುವ ಬಗ್ಗೆ ಕೇಂದ್ರದಿಂದ ರಾಜ್ಯಗಳಿಗೆ ಎಚ್ಚರಿಕೆ