ಆಂಧ್ರಪ್ರದೇಶ: ವಿಜಯ ದೇವರಕೊಂಡ ಸಹೋದರ ನಟಿಸಿರುವ ‘ಬೇಬಿ’ ಚಿತ್ರದ ಸಕ್ಸಸ್ ಸಮಾರಂಭವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮೆಗಾಸ್ಟಾರ್ ಚಿರಂಜೀವಿ ಅವರೊಟ್ಟಿಗೆ ವೇದಿಕೆಯ ಮೇಲೆ ಮಾತನಾಡುವಾಗ ನಟ ಅಲ್ಲು ಅರ್ಜುನ್ ‘ಪುಷ್ಪಾ-2’ ಚಿತ್ರದ ಡೈಲಾಗ್ ಹೇಳುವ ಮುಖೇನ ಇದೀಗ ಸಿನಿಮಾದ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ.
ಇದನ್ನೂ ಓದಿ: ಸೌಜನ್ಯಾ ಪ್ರಕರಣ ಬಳಸಿಕೊಂಡು ಶ್ರೀಕ್ಷೇತ್ರದ ಪಾವಿತ್ರ್ಯತೆ ಹಾಳುಗೆಡವಲು ಪ್ರಯತ್ನಿಸುತ್ತಿದ್ದಾರೆ: ಡಾ| ವೀರೇಂದ್ರ ಹೆಗ್ಗಡೆ
ಚಿರಂಜೀವಿ ಜತೆ ವೇದಿಕೆಯ ಮೇಲೆ ಮಾತನಾಡುತ್ತಿದ್ದ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್, ಸಿನಿಮಾದ ಬಗ್ಗೆ ಉತ್ಸಾಹದಿಂದ ಕೆಲವು ಸಂಗತಿಗಳನ್ನು ಹೇಳುವ ಮಧ್ಯೆ ಪುಷ್ಪಾ-2 ಚಿತ್ರದ ಡೈಲಾಗ್ ಹರಿಬಿಟ್ಟಿದ್ದಾರೆ. ಈ ದೃಶ್ಯದ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಅಭಿಮಾನಿಗಳು ಇಷ್ಟು ಬೇಗ ಯಾಕೆ ಸಿನಿಮಾದ ಡೈಲಾಗ್ ಅನ್ನು ಸೋರಿಕೆ ಮಾಡಿದ್ದೀರಾ? ಎಂದು ಕಾಮೆಂಟ್ ಮಾಡುವ ಮುಖೇನ ಪ್ರಶ್ನಿಸಿದ್ದಾರೆ. ಸದ್ಯ ಅಲ್ಲು ಅರ್ಜುನ್ ಅವರ ಮುಂಬರುವ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಪುಷ್ಪ 2 ಪ್ರಮುಖವಾಗಿದೆ,(ಏಜೆನ್ಸೀಸ್).