More

    ಪೂರ್ವ ಜಗದ್ಗುರುಗಳ ಕತೃ ಗದ್ದುಗೆಗಳ ಜೀರ್ಣೋದ್ಧಾರ

    ಉಜ್ಜಿನಿ: ಇಲ್ಲಿನ ಪೂರ್ವ ಜಗದ್ಗುರುಗಳ ಕತೃ ಗದ್ದುಗೆಗಳ ಜೀರ್ಣೋದ್ಧಾರ ಮಾಡುವುದಾಗಿ ಉಜ್ಜಿನಿ ಪೀಠದ ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ತಿಳಿಸಿದರು.

    ಪೀಠದಲ್ಲಿ ಪೂರ್ವ ಉಜ್ಜಿನಿ ಪೀಠಾಚಾರ್ಯರಾದ ಶ್ರೀ ಚನ್ನಬಸವೇಶ್ವರ ಭಗವತ್ಪಾದರು ಹಾಗೂ ಕೇದಾರ ಪೀಠದ ವಿಶ್ವೇಶ್ವರಲಿಂಗ ಭಗವತ್ಪಾದರ ಕತೃ ಗದ್ದುಗೆಗಳಿಗೆ ಶಿಲಾಮಂಟಪದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಭಕ್ತರ ಆಶಯದಂತೆ ಪೀಠದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯ ಕೈಗೊಳ್ಳುವುದಾಗಿ ಹೇಳಿದರು.

    ಈ ಸಂದರ್ಭದಲ್ಲಿ ಪೀಠದ ಪುರೋಹಿತರಾದ ಯು.ಎಂ. ಸಿದ್ಧಲಿಂಗಯ್ಯ, ಬೆಳ್ಳಕಟ್ಟೆ ಲೋಕೇಶ್, ವ್ಯವಸ್ಥಾಪಕ ವೀರೇಶ್, ಮುಖಂಡರಾದ ಎ.ಎಂ. ಚನ್ನವೀರಸ್ವಾಮಿ, ಕಮ್ಮಾರ ಎರಿಸ್ವಾಮಿ, ರಾಚೋಟಪ್ಪ, ಬಂಗಾರಿ ಶಿವಣ್ಣ ಹಾಗೂ ಭಕ್ತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts