More

    ಸತ್ಯಧರ್ಮರ ಗ್ರಂಥಗಳಲ್ಲಿ ಜ್ಞಾನದ ಪರಿಶುದ್ಧತೆ

    ಶಿವಮೊಗ್ಗ: ನಮ್ಮ ಪರಂಪರೆಯ ಪೂರ್ವ ಯತಿಗಳಾದ ಶ್ರೀ ಸತ್ಯಧರ್ಮ ತೀರ್ಥ ಶ್ರೀಪಾದಂಗಳು ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ಅವರ ಗ್ರಂಥಗಳಲ್ಲಿ ಜ್ಞಾನದ ಪರಿಶುದ್ಧತೆ ಕಾಣಬಹುದಾಗಿದೆ ಎಂದು ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳು ತಿಳಿಸಿದರು.

    ಹೊಳೆಹೊನ್ನೂರಿನಲ್ಲಿ ನಡೆಯುತ್ತಿರುವ ಚಾತುರ್ಮಾಸ್ಯದ ಅಂಗವಾಗಿ ಬುಧವಾರ ಸಂಜೆ ಏರ್ಪಡಿಸಿದ್ದ ವಿದ್ವತ್ ಸಭೆಯಲ್ಲಿ ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದ ಶ್ರೀಗಳು, ಪುರಾಣ, ವೇದಗಳಿಗೆ ಅನೇಕರು ವ್ಯಾಖ್ಯಾನಗಳನ್ನು ರಚಿಸಿದ್ದಾರೆ. ಆದರೆ ಶ್ರೀ ಸತ್ಯಧರ್ಮರ ಶೈಲಿಯೇ ಅಪರೂಪ. ಒಂದೊAದು ಶಬ್ದಕ್ಕೆ ಅನೇಕಾರ್ಥ ನೀಡುವ, ಮೂಲ ಸಿದ್ಧಾಂತಕ್ಕೆ ಅಬಾಽತವಾಗಿ, ಸಂದರ್ಭಕ್ಕೆ ಅನುಸಾರವಾಗಿ ಎದುರಾಗುವ ಆಕ್ಷೇಪಗಳಿಗೆ ಉತ್ತರ, ವಿರೋಧ ಪರಿಹಾರ ಹೀಗೆ ಅವರ ವ್ಯಾಖ್ಯಾನ ಅತ್ಯದ್ಭುತವಾಗಿದೆ. ಅವರ ಶೈಲಿ ಕವಿ ಮನಸ್ಸಿನವರಿಗೆ ಆಹ್ಲಾದ ನೀಡುವಂತಿದೆ ಎಂದರು.
    ಶ್ರೀಮದ್ ಭಾಗವತವು ಪುರಾಣಗಳ ರಾಜನಿದ್ದಂತೆ. ಅದರ ಒಂದೊAದು ಸ್ಕಂದಗಳೂ ಭಾಗವತವೆಂಬ ಮರದ ಟೊಂಗೆಗಳು. ಎಲ್ಲ ಸ್ಕಂದಕ್ಕಿAತಲೂ ದಶಮ ಸ್ಕಂದ ಅತಿ ವಿಸ್ತÈತವಾಗಿದೆ. ಅದರ ಅರ್ಥ ಗಾಂಭೀರ್ಯವೂ ಅಷ್ಟೇ ವಿಸ್ತಾರವಾಗಿದೆ. ಅಂತಹ ದಶಮ ಸ್ಕಂದಕ್ಕೆ ಶ್ರೀ ಸತ್ಯಧರ್ಮರು ವ್ಯಾಖ್ಯಾನ ಬರೆದಿದ್ದಾರೆ. ಅದೂ ಶಾಸ್ತçವೆಂಬ ನೌಕೆಯನ್ನೇರಿ ವೇದವ್ಯಾಸರನ್ನೇ ನಾವಿಕನನ್ನಾಗಿಸಿಕೊಂಡರೆ ಮಾತ್ರ ಇದರ ಬೆಳಕು ಕಾಣಲು ಸಾಧ್ಯ ಎಂದು ಸತ್ಯಧರ್ಮರು ಅತ್ಯಂತ ಚಮತ್ಕಾರಿಕವಾಗಿ ಹೇಳಿದ್ದಾರೆ ಎಂದು ತಿಳಿಸಿದರು.
    ವಿದ್ವತ್ ಸಭೆಯ ಆರಂಭದಲ್ಲಿ ದಾವಣಗೆರೆಯ ವೆಂಕಟಗಿರೀಶಾಚಾರ್ಯ ಮತ್ತು ಸಂಸ್ಥಾನ ಪೂಜಾ ಕಾಲದಲ್ಲಿ ಸಮೀರಾಚಾರ್ಯ ದೇಶಪಾಂಡೆ ಪ್ರವಚನ ಮಾಡಿದರು. ಬೆಂಗಳೂರಿನ ಜಯತೀರ್ಥ ವಿದ್ಯಾಪೀಠದ ಕುಲಪತಿ ಗುತ್ತಲ ರಂಗಾಚಾರ್ಯ, ಉತ್ತರಾದಿ ಮಠದ ದಿವಾನರಾದ ಶಶಿ ಆಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ರಘೂತ್ತಮಾಚಾರ್ಯ ಸಂಡೂರು ಮುಂತಾದವರಿದ್ದರು.

    ತಪ್ತಮುದ್ರಾ ಧಾರಣೆ
    ಗುರುವಾರ ಏಕಾದಶಿಯ ನಿಮಿತ್ತ ನೂರಾರು ಭಕ್ತರು ಶ್ರೀಪಾದಂಗಳವರಿAದ ತಪ್ತಮುದ್ರಾಧಾರಣೆ ಪಡೆದುಕೊಂಡರು. ಇದಕ್ಕಾಗಿ ದೂರದ ಊರುಗಳಿಂದ ಮಠದ ಶಿಷ್ಯರು ಆಗಮಿಸಿದ್ದರು. ನಂತರ ಶ್ರೀ ಮೂಲರಾಮ ದೇವರ ಪೂಜೆ ನೆರವೇರಿಸಿದ ಶ್ರೀಪಾದರು ಕಾಮಿಕಾ ಏಕಾದಶಿಯಂದು ಹರಿವಾಣ ಸೇವೆಯನ್ನು ದೇವರಿಗೆ ಸಮರ್ಪಿಸಿದರು. ಜು.೧೪ರ ದ್ವಾದಶಿಯಂದು ಬೆಳಗ್ಗೆ ೫.೩೦ರಿಂದಲೇ ಸಂಸ್ಥಾನ ದೇವರ ಪೂಜೆ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts