More

    ನಾಡಿನ ಮನೆ ಮನದ ಮಾನಸಪುತ್ರ ಡಾ.ಪುನೀತ್‌ರಾಜ್‌ಕುಮಾರ್:ಕರವೇ ಉಪಾಧ್ಯಕ್ಷ ಎಂ.ಎಸ್.ಚಿದಂಬರ್ ಬಣ್ಣನೆ

    ಮಂಡ್ಯ: ನಾಡಿನ ಮನೆ ಮನದ ಮಾನಸಪುತ್ರ ಡಾ.ಪುನೀತ್‌ರಾಜ್‌ಕುಮಾರ್ ಎಂದು ಕರಾವೇ ರಾಜ್ಯ ಉಪಾಧ್ಯಕ್ಷ ಎಂ.ಎಸ್.ಚಿದಂಬರ್ ಹೇಳಿದರು.
    ನಗರದ ಜೆಸಿ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ, ಡಾ ರಾಜಕುಮಾರ್ ಹೋರಾಟ ಸಮಿತಿ ಆಯೋಜಿಸಿದ್ದ ಪವರ್ ಸ್ಟಾರ್ ಡಾ. ಪುನೀತ್ ರಾಜಕುಮಾರ್  ಅವರ ಜನ್ಮದಿನ ಆಚರಣೆ ಮತ್ತು ಸಿಹಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
    ವಿಶ್ವಕಂಡಂತಹ ಅಭಿಮಾನಿಗಳ ದೇವರು ಡಾ.ಪುನೀತ್‌ರಾಜ್‌ಕುಮಾರ್ ಅವರ ಆದರ್ಶಗಳು ಮತ್ತು ಸಮಾಜಸೇವಾ ಕಾರ್ಯಗಳು ಜೀವಂತವಾಗಿರುತ್ತವೆ.  ಪುನೀತ್ ಅವರ ನಟನೆ ಮತ್ತು ಹಾಡುಗಾರಿಕೆ ಕನ್ನಡಿಗರ ಹೃದಯವನ್ನು ಸಂಪನ್ನಗೊಳಿಸಿದೆ, ಸಮಾಜಸೇವೆ ಮೂಲಕ ಸಿನಿಮಾ ನಟರು ಹೀಗಿರಬೇಕೆಂದು ತೋರಿಸಿಕೊಟ್ಟಿದ್ದಾರೆ ಎಂದು ನುಡಿದರು.
    ಜಿಲ್ಲಾ ಘಟಕ ಅಧ್ಯಕ್ಷ ಕೆ.ಟಿ.ಶಂಕರೇಗೌಡ, ಡಿ.ಅಶೋಕ್,  ಅನುರಾಧ,  ನಾಗರಾಜು, ಮುದ್ದೇಗೌಡ, ದೇವರಾಜು, ಆಟೋ ಚಂದ್ರು,  ಸುನಿಲ್,  ಚಂದ್ರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts