ಬೆಂಗಳೂರು: ಪಿಎಸ್ಐ ಅಕ್ರಮ ನೇಮಕಾತಿ ಹಗರಣ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಪಿಎಸ್ಐ ನವೀನ್ ಪ್ರಸಾದ್ ಎಂಬಾತನನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಆಗಿದ್ದ ನವೀನ್ ಪ್ರಸಾದ್, ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಮತ್ತೊಬ್ಬ ಪಿಎಸ್ಐ ಹರೀಶ್ ಜೊತೆ ಸಂಪರ್ಕ ಹೊಂದಿದ್ದ. ಅಕ್ರಮ ಬಯಲಿಗೆ ಬರುತ್ತಿದ್ದಂತೆ ನವೀನ್ ಪ್ರಸಾದ್ ಮೊಬೈಲ್ ಸ್ವಿಚ್ ಆಫ್ ಮಾಡಿ ಕಳೆದ ಏಳೆಂಟು ತಿಂಗಳಿನಿಂದ ಪರಾರಿಯಾಗಿದ್ದ.
ಪ್ರಕರಣದಲ್ಲಿ ಬಂಧಿತನಾಗಿರುವ ನವೀನ್ ಮದುವೆಯಾಗಿದ್ರು ಸಹ ಗರ್ಲ್ ಫ್ರೆಂಡ್ ಜೊತೆ ವಾಸವಾಗಿದ್ದ. ಅಕ್ಟೋಬರ್ ನಿಂದಲು ಸಹ ತಲೆಮರೆಸಿಕೊಂಡಿದ್ದ ನವೀನ್ ಮಾಗಡಿ ಮೂಲದವನು. ಎಸ್ಐ ಷರೀಫ್ ಕಲ್ಲಿಮನಿ ಜೊತೆಗೆ ಸೇರಿಕೊಂಡು ಪಿಎಸ್ಐ ಅಭ್ಯರ್ಥಿಗಳನ್ನು ಕರೆತಂದು ಡೀಲ್ ಮಾಡುತ್ತಿದ್ದರು. ಇವರು ನೇಮಕಾತಿ ವಿಭಾಗದಲ್ಲಿನ ಎಫ್ಡಿಎ ಹರ್ಷ ಎಂಬಾತನ ಸಂಪರ್ಕ ಹೊಂದಿದ್ದರು. ಇದನ್ನೂ ಓದಿ: ಬಳ್ಳಾರಿ | 30 ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಶಾಲಾ ಬಸ್ಗೆ ಬೆಂಕಿ; ತಪ್ಪಿದ ಅನಾಹುತ
ನವೆಂಬರ್ನಲ್ಲಿ ಬಂಧಿತ ನವೀನ್ ಹೆಂಡತಿ ಮಕ್ಕಳನ್ನು ತವರಿಗೆ ಕಳಿಸಿದ್ದ. ಬಳಿಕ ಹಾಸನ ಮೂಲದ ಯುವತಿಯೊಬ್ಬಳೊಂದಿಗೆ ಸುತ್ತಾಟ ನಡೆಸುತ್ತಿದ್ದ. ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಅಪಾರ್ಟ್ಮೆಂಟ್ ಒಂದರಲ್ಲಿ ಇವರಿಬ್ಬರು ವಾಸವಿದ್ದರು. ಆ ಯುವತಿಯೇ ಈತನಿಗೆ ಶ್ರೀ ರಕ್ಷೆಯಾಗಿದ್ದಳು. ಅವಳು ಅಪಾರ್ಟ್ಮೆಂಟ್ನಲ್ಲಿ ಪ್ರತಿಯೊಂದು ಚಲನ ವಲನಗಳನ್ನು ಗಮನಿಸುತ್ತಿದ್ದಳು. ಆಕೆಯ ಸಹಾಯದಿಂದ ಸಿಸಿ ಕ್ಯಾಮಾರಗಳನ್ನು ಗಮನಿಸಿಕೊಂಡು ನವೀನ್ ಓಡಾಡುತ್ತಿದ್ದ.
ನವೀನ್ ಯಾರು ಒಳ ಬರ್ತಾರೆ, ಯಾರು ಹೊರ ಹೋಗ್ತಾರೆ ಎನ್ನುವ ಎಲ್ಲಾ ಮಾಹಿತಿ ಪಡೆಯಿತ್ತಿದ್ದ. ಮುಖ ಸೆರೆಯಾಗಬಾರದೆಂದು ಪ್ರತಿದಿನ ತಲೆಗೆ ಕ್ಯಾಪ್ ಧರಿಸಿ ಓಡಾಡುತ್ತಿದ್ದ. ಸ್ಥಳ ಬದಲಾಯಿಸಿದರೆ ಸಿಐಡಿ ಅಧಿಕಾರಿಗಳು ಪತ್ತೆ ಮಾಡುತ್ತಾರೆ ಎಂಬ ಕಾರಣಕ್ಕೆ ತಾನು ವಾಸವಿದ್ದ ಅಪಾರ್ಟ್ಮೆಂಟ್ ನಲ್ಲಿಯೇ ಬೀಡುಬಿಟ್ಟಿದ್ದ. ಇದನ್ನೂ ಓದಿ: ಬಿಸಿ ಕಾವಲಿಗೆಯ ಮೇಲೆ ಕುಳಿತೇ ಭಕ್ತರಿಗೆ ಆಶೀರ್ವಾದ ಮಾಡ್ತಾರೆ ಈ ಬಾಬಾ!
ಇದೀಗ ಸಿಐಡಿ ಡಿವೈಎಸ್ಪಿ ಅಂಜುಮಾಲಾ ಟಿ.ನಾಯಕ್, ಪತ್ತೆದಳ ವಿಭಾಗದ ಸಬ್ಇನ್ಸ್ಪೆಕ್ಟರ್ಗಳಾದ ಅಭಿಜಿತ್ ಆದಿತ್ಯ ಹಾಗೂ ಶ್ರೀಕಾಂತ್ ನೇತೃತ್ವದ ತಂಡ ತಲೆ ಮರೆಸಿಕೊಂಡಿದ್ದ ಆರೋಪಿ ನವೀನ್ನನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.