More

    ಆಸ್ತಿಗಾಗಿ ಸುಪಾರಿ ಕೊಟ್ಟು ತಂದೆಯನ್ನೇ ಕೊಲ್ಲಿಸಿದ ಮಕ್ಕಳು !

    ಶಿವಮೊಗ್ಗ: ಮಲತಾಯಿ ಮತ್ತು ಆತನ ಮಗನಿಗೂ ಆಸ್ತಿಯಲ್ಲಿ ಪಾಲು ನೀಡಬೇಕಾಗುತ್ತದೆಂದು ಮೊದಲ ಪತ್ನಿ ಮಕ್ಕಳಿಬ್ಬರು ತಂದೆಯನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು ಮಕ್ಕಳಿಬ್ಬರು ಸೇರಿದಂತೆ ಐವರನ್ನು ಶಿರಾಳಕೊಪ್ಪ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಲಾರಿಯನ್ನು ಜಪ್ತಿ ಮಾಡಿದ್ದಾರೆ.
    ಪುತ್ರರಾದ ಶಿಕಾರಿಪುರದ ವಿನಾಯಕ ನಗರದ ಎನ್.ಮಂಜುನಾಥ (42), ಬೆಂಗಳೂರಿನ ವೆಂಕಟಾಪುರದ ನಿವಾಸಿ, ಕೆಎಸ್‌ಆರ್‌ಪಿ ಮುಖ್ಯ ಪೇದೆ ಎನ್.ಉಮೇಶ್ ಹಾಗೂ ಶಿಕಾರಿಪುರ ತಾಲೂಕಿನ ಭೋಗಿ ಗ್ರಾಮದ ರಿಜ್ವಾನ್ ಅಹಮ್ಮದ್ (24), ಶಿಕಾರಿಪುರ ವಿನಾಯಕನಗರದ ಹಬೀಬುಲ್ಲಾ ಅಲಿಯಾಸ್ ಹಬೀಬ್ (28) ಮತ್ತು ಸುಹೇಲ್ ಬಾಷಾ ಅಲಿಯಾಸ್ ಸುನಿ (30) ಬಂಧಿತರು. ಬೋಗಿ ಗ್ರಾಮದ ನಿವಾಸಿ, ಕೆಎಸ್‌ಆರ್‌ಪಿ ನಿವೃತ್ತ ಎಸ್‌ಐ ನಾಗೇಂದ್ರಪ್ಪ ಅವರು ಕೊಲೆಯಾದವರು.
    ನ.29ರಂದು ಬೋಗಿ ಗ್ರಾಮದ ನಾಗೇಂದ್ರಪ್ಪ ಅವರನ್ನು ರಿಜ್ವಾನ್, ಹಬೀಬುಲ್ಲಾ ಮತ್ತು ಸುಹೇಲ್ ಕೊಲೆ ಮಾಡಿ ಉಡುಗಣಿಯಿಂದ ಕುಸ್ಕೂರು ಗ್ರಾಮಕ್ಕೆ ಹೋಗುವ ನಿರ್ಮಾಣ ಹಂತದ ರಸ್ತೆ ಪಕ್ಕದ ಕಾಲುವೆಗೆ ಬಿಸಾಡಿದ್ದರು. ಈ ಬಗ್ಗೆ ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
    5 ಲಕ್ಷ ರೂ.ಗೆ ಸುಪಾರಿ: ಎನ್.ಮಂಜುನಾಥ ಮತ್ತು ಎನ್.ಉಮೇಶ್ ಅವರು ತಂದೆ ನಾಗೇಂದ್ರಪ್ಪ ಅವರನ್ನು ಕೊಲೆ ಮಾಡಲು ರಿಜ್ವಾನ್, ಹಬೀಬುಲ್ಲಾ ಮತ್ತು ಸುಹೈಲ್‌ಗೆ 5 ಲಕ್ಷ ರೂ.ಗೆ ಸುಪಾರಿ ಕೊಟ್ಟದ್ದರು. ಅದರಂತೆ ನ.29ರಂದು ಭದ್ರಾವತಿ ನ್ಯಾಯಾಲಯಕ್ಕೆ ತೆರಳಿ ವಾಪಸ್ ಶಿಕಾರಿಪುರಕ್ಕೆ ಬಂದಿದ್ದ ನಾಗೇಂದ್ರಪ್ಪ ಅವರನ್ನು ರಿಜ್ವಾನ್, ಹಬೀಬುಲ್ಲಾ ಮತ್ತು ಸುಹೈಲ್ ಲಾರಿಯಲ್ಲಿ ಕೂರಿಸಿಕೊಂಡು ಪುನೇದಹಳ್ಳಿ ಗ್ರಾಮದ ಹತ್ತಿರ ಕರೆದೊಯ್ದಿದ್ದರು. ಬಲವಂತವಾಗಿ ವಿಷ ಬೆರೆಸಿದ ನೀರನ್ನು ಕುಡಿಸಿ ಲಾರಿಯಲ್ಲಿದ್ದ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಅದೇ ವಾಹನದಲ್ಲಿ ಮೃತದೇಹವನ್ನು ಪುನೇದಹಳ್ಳಿ ಮಾರ್ಗವಾಗಿ ಕೊಂಡೊಯ್ದು ಕುಸ್ಕೂರು ಬಳಿ ಕಾಲುವೆಗೆ ಎಸೆದು ಪರಾರಿಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts