ನವದೆಹಲಿ: ‘ಏನೇ ಆಗಲಿ.. ನಾನು ಹತ್ರಾಸ್ಗೆ ಭೇಟಿ ಕೊಟ್ಟು, ಸಂತ್ರಸ್ತೆಯ ಕುಟುಂಬದ ಜತೆ ಮಾತನಾಡಿಯೇ ಬಿಡುತ್ತೇನೆ. ಪೊಲೀಸರು ತಡೆದರೂ ಸಂತ್ರಸ್ತೆಯ ಕುಟುಂಬವನ್ನು ನಾನು ಭೇಟಿಯಾಗುವುದು ಖಚಿತ’ ಎಂಬುದಾಗಿ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸವಾಲೆಸೆದಿದ್ದಾರೆ.
ಗುರುವಾರ ರಾಹುಲ್ ಗಾಂಧಿ ಜತೆ ಹತ್ರಾಸ್ಗೆ ಭೇಟಿ ಕೊಡುವ ಯತ್ನವನ್ನು ಉತ್ತರ ಪ್ರದೇಶದ ಪೊಲೀಸರು ವಿಫಲಗೊಳಿಸಿದ್ದರೂ, ಪ್ರಿಯಾಂಕಾ ಇದೀಗ ಮತ್ತೊಮ್ಮೆ ರಾಹುಲ್ ಜತೆ ಅಲ್ಲಿಗೆ ಹೊರಟಿದ್ದಾರೆ. ಅವರೊಂದಿಗೆ ಸಂಸದ ಶಶಿ ತರೂರ್ ಸೇರಿ ಹತ್ತಾರು ನಾಯಕರೂ ಜತೆಯಾಗಿದ್ದಾರೆ.
ಅದೊಂದು ಭೀಕರ ಘಟನೆ. ಇಂಥ ಸಂದರ್ಭದಲ್ಲಿ ನಾವು ಆ ಯುವತಿಗೆ ಗೌರವ ಸಲ್ಲಿಸಬೇಕಾಗಿದೆ. ಈಗ ಸಂಭವಿಸಿದ್ದಕ್ಕಿಂತ ಕೆಟ್ಟದ್ದು ಇನ್ನೇನೂ ಸಂಭವಿಸಲು ಸಾಧ್ಯವಿಲ್ಲ. ಅಷ್ಟೊಂದು ಬರ್ಬರ ಘಟನೆ ಅದು ಎಂಬುದಾಗಿ ಶಶಿ ತರೂರ್ ಅಭಿಪ್ರಾಯ ಪಟ್ಟಿದ್ದಾರೆ.
ಕಾಂಗ್ರೆಸ್ ನಾಯಕರ ಪ್ರಯಾಣದ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಪೊಲೀಸರು ಚುರುಕಾಗಿದ್ದು, ದೆಹಲಿ-ನೋಯ್ಡಾ-ಡೈರೆಕ್ಟ್ವೇನಲ್ಲಿ ಸೂಕ್ತ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ನಾಯಕರನ್ನು ತಡೆಯಲು ಬೆಳಗಿನಿಂದಲೇ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಕಳೆದೆರಡು ದಿನಗಳಿಂದ ಮಾಧ್ಯಮದವರು ಹತ್ರಾಸ್ಗೆ ಪ್ರವೇಶಿಸದಂತೆ ಉತ್ತರ ಪ್ರದೇಶ ಸರ್ಕಾರ ನಿರ್ಬಂಧ ಹೇರಿದ್ದು, ಈಗ ಪ್ರಿಯಾಂಕಾ-ರಾಹುಲ್ ಅಲ್ಲಿಗೆ ಭೇಟಿ ಕೊಡಲಿರುವ ಕಾರಣ ಮತ್ತಷ್ಟು ಕುತೂಹಲ ಮೂಡಿದೆ. (ಏಜೆನ್ಸೀಸ್)
ಹತ್ರಾಸ್ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗುವ ಪಣತೊಟ್ಟು ಸ್ವತಃ ಟಾಟಾ ಸಫಾರಿ ವಾಹನ ಚಲಾಯಿಸಿಕೊಂಡು…
Posted by Vijayavani on Saturday, October 3, 2020