ಗೊರೇಬಾಳ: ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯಲಿರುವ ಜ.22ರಂದು ಪ್ರತಿ ಮನೆಯಲ್ಲಿ ರಾಮನ ಪೂಜೆ ಮಾಡಿ ಸಂಜೆ ಐದು ದೀಪಗಳನ್ನು ಮನೆ ಮುಂದೆ ಹಚ್ಚಬೇಕೆಂದು ರೌಡಕುಂದ ಸಂಸ್ಥಾನ ಹಿರೇಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ: ಶ್ರೀರಾಮನ ಮಂತ್ರಾಕ್ಷತೆಗೆ ಅದ್ದೂರಿ ಸ್ವಾಗತ
ಗ್ರಾಮದ ಶರಣಬಸವೇಶ್ವರ ದೇವಸ್ಥಾನದಲ್ಲಿ ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ ಹಾಗೂ ಆಹ್ವಾನ ಪತ್ರಿಕೆಗೆ ವಿಶೇಷ ಪೂಜೆ ನೆರವೇರಿಸಿ ಭಕ್ತರಿಗೆ ವಿತರಿಸಿ ಸೋಮವಾರ ಮಾತನಾಡಿದರು. ಪ್ರಮುಖರಾದ ಬಸವರಾಜ ಸಾಲಗುಂದ, ಸುನಿಲ್, ವಿಶ್ವನಾಥ, ಸೂರಿಬಾಬು, ದೊಡ್ಡಮನಿ ಶರಣೇಗೌಡ, ಯಲ್ಲಪ್ಪ ಹಿರೇಕುರಬರ, ಎನ್.ಚನ್ನಬಸವಗೌಡ ಇತರರಿದ್ದರು.