ಬೆಂಗಳೂರು: ಪ್ರಜ್ವಲ್ಗೆ ತಮ್ಮ ಚಿತ್ರಗಳ ಬಿಡುಗಡೆ ದಿನಾಂಕ ಹತ್ತಿರ ಬರುತ್ತಿದ್ದಂತೆಯೇ ಎಕ್ಸೈಟ್ಮೆಂಟ್ ಜಾಸ್ತಿ ಆಗುತ್ತದಂತೆ. ಆದರೆ, ‘ಅಬ್ಬರ’ ಚಿತ್ರ ಬಿಡುಗಡೆಗೆ ಇನ್ನೊಂದೇ ಒಂದು ವಾರ ಇದೆ. ಎಕ್ಸೈಟ್ಮೆಂಟ್ ಬದಲು ನೆಮ್ಮದಿ ಇದೆಯಂತೆ. ಅದಕ್ಕೆ ಕಾರಣ, ಚಿತ್ರ ಮೂಡಿಬಂದಿರುವ ರೀತಿ ಎನ್ನುತ್ತಾರೆ ಅವರು.
ಇದನ್ನೂ ಓದಿ: ಬ್ಯಾಂಕಾಕ್ಗೆ ಪುಷ್ಪ 2 ತಂಡ; ಮೊದಲ ಶೆಡ್ಯುಲ್ನಲ್ಲಿ ಆ್ಯಕ್ಷನ್ ಸನ್ನಿವೇಶಗಳ ಚಿತ್ರೀಕರಣ
ಪ್ರಜ್ವಲ್ ಅಭಿನಯದ ‘ಅಬ್ಬರ’ ಚಿತ್ರವು ನ.18ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಬಗ್ಗೆ ಪ್ರಜ್ವಲ್ಗೆ ಸಾಕಷ್ಟು ನಿರೀಕ್ಷೆಗಳಿವೆಯಂತೆ. ‘ಚಿತ್ರದಲ್ಲಿ ನನಗೆ ಮೂರು ವಿಭಿನ್ನವಾದ ಪಾತ್ರಗಳಿದ್ದು, ೫ ರೀತಿಯಲ್ಲಿ ಕಾಣಿಸಿಕೊಳ್ಳುತ್ತೇನೆ. ಒಂದೇ ದಿನ ಮೂರು ಪಾತ್ರಗಳನ್ನು ಮಾಡಬೇಕಿತ್ತು. ಕಾಮಿಡಿ ಜತೆಗೆ ಚಿತ್ರದಲ್ಲೊಂದು ಸಢಡು ಇದೆ. ಅದು ಚಿತ್ರದ ಕೊನೆಯವರೆಗೂ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸುತ್ತಲೇ ಇರುತ್ತದೆ. ನಾನು ನಡೆಯುವ ದಾರಿ ಹೀಗೇ ಇರಬೇಕು ಅಂದುಕೊಂಡಿರುತ್ತೇವೆ. ಆದರೆ, ಕ್ರಮೇಣ ಕಳೆದು ಹೋಗುತ್ತದೆ. ಮನುಷ್ಯ ಯಾವಾಗಲೂ ಜಾಗೃತನಾಗಿರಬೇಕು ಎನ್ನುವುದೇ ಈ ಚಿತ್ರದ ಸಂದೇಶ’ ಎನ್ನುತ್ತಾರೆ ಪ್ರಜ್ವಲ್.
ಪ್ರಜ್ವಲ್ಗೆ ಈ ಚಿತ್ರದಲ್ಲಿ ಮೂವರು ನಾಯಕಿಯರಿದ್ದಾರೆ. ನಿಮಿಕಾ ರತ್ನಾಕರ್, ಲೇಖಾಚಂದ್ರ ಹಾಗೂ ರಾಜಶ್ರೀ ಪೊನ್ನಪ್ಪ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ರವಿಶಂಕರ್ ಸಹ ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಭಾಷಣೆಕಾರ ಕೆ. ರಾಮ್ನಾರಾಯಣ್ ಚಿತ್ರದ ನಿರ್ದೇಶನ ಮಾಡಿದರೆ, ಬಸವರಾಜ ಮಂಚಯ್ಯ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಚಿತ್ರದ ಕುರಿತು ಮಾತನಾಡುವ ರಾಮ್ನಾರಾಯಣ್, ‘ಸಿನಿಮಾ ಗೆದ್ದೇಗೆಲ್ಲುತ್ತೆ ಎಂಬ ಭರವಸೆಯಿದೆ. ‘ಅಬ್ಬರ’ ಚಿತ್ರವು ಮೊದಲ ದಿನದಿಂದ ಅಬ್ಬರಿಸುತ್ತಲೇ ಇದೆ. ಆರಂಭದಲ್ಲಿ ಚಿತ್ರದ ಶೀರ್ಷಿಕೆಯನ್ನು ಎಸ್. ಗೋವಿಂದು ಅವರು ನಮಗೆ ಬಿಟ್ಟುಕೊಟ್ಟರು. ಚಿತ್ರದ ಶೀರ್ಷಿಕೆಯನ್ನು ಶಿವಣ್ಣ ಬಿಡುಗಡೆ ಮಾಡಿದರು. ದೇವರಾಜ್ ಅವರು ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಹೀಗೆ ಆರಂಭದಿಂದ ಎಲ್ಲವೂ ಒಳ್ಳೆಯದೇ ಆಗುತ್ತಿದೆ’ ಎನ್ನುತ್ತಾರೆ.
ಇದನ್ನೂ ಓದಿ: ಟ್ರೋಲ್ ಕುರಿತು ಬೇಸರ ಹೊರಹಾಕಿದ್ದ ರಶ್ಮಿಕಾ ಬೆಂಬಲಕ್ಕೆ ನಿಂತ ರಮ್ಯಾ…
‘ಅಬ್ಬರ’ ಚಿತ್ರದಲ್ಲಿ ಪ್ರಜ್ವಲ್ ಮತ್ತು ಮೂವರು ನಾಯಕಿಯರ ಜತೆಗೆ ಶೋಭರಾಜ್, ಶಂಕರ್ ಅಶ್ವಥ್, ವಿಕ್ಟರಿವಾಸು, ಕೋಟೆ ಪ್ರಭಾಕರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರವಿ ಬಸ್ರೂರು ಅವರ ಸಂಗೀತ ಮತ್ತು ಜೆ.ಕೆ. ಗಣೇಶ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಈ ಚಿತ್ರದ ಟ್ರೇಲರ್ನ್ನು ಇತ್ತೀಚೆಗೆ ಹಿರಿಯ ನಟ ಮತ್ತು ಪ್ರಜ್ವಲ್ ಅವರ ತಂದೆ ದೇವರಾಜ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಸುನೀಲ್ ಶೆಟ್ಟಿ ಜತೆ ಹಿಂದಿ ವೆಬ್ ಸೀರಿಸ್ನಲ್ಲಿ ‘ಗಾಳಿಪಟ’ದ ಭಾವನಾ..