More

    ಮತದಾನದ ಮಹತ್ವ ಸಾರುವ ಸಿನಿಮಾ ‘ಪ್ರಭುತ್ವ’; ಟ್ರೇಲರ್​ ಬಿಡುಗಡೆ

    ಬೆಂಗಳೂರು: ಕಳೆದ ವರ್ಷ ಬಿಡುಗಡೆಯಾದ ‘ಶಾರ್ದೂಲ’ ನಂತರ ಚೇತನ್​ ಚಂದ್ರ ಅಭಿನಯದ ಯಾವೊಂದು ಚಿತ್ರ ಸಹ ಬಿಡುಗಡೆಯಾಗಿರಲಿಲ್ಲ. ಈಗ ಅವರು ‘ಪ್ರಭುತ್ವ’ ಎಂಬ ಚಿತ್ರದಲ್ಲಿ ನಟಿಸಿದ್ದು, ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಅದಕ್ಕೂ ಮೊದಲು ಇತ್ತೀಚೆಗೆ ಯೂಟ್ಯಬ್​ನ ಜಂಕಾರ್​ ಮ್ಯೂಸಿಕ್​ ಚಾನಲ್​ನಲ್ಲಿ ಬಿಡುಗಡೆಯಾಗಿದೆ.

    ಇದನ್ನೂ ಓದಿ: ಧರ್ಮಣ್ಣಂಗೆ ‘ರಾಜಯೋಗ’; ನಂಬಿಕೆ-ಮೂಢನಂಬಿಕೆಗಳ ಕುರಿತಾದ ಚಿತ್ರದಲ್ಲಿ ಹೀರೋ …

    ಮತದಾನದ ಮಹತ್ವ ಸಾರುವ ಸಿನಿಮಾ 'ಪ್ರಭುತ್ವ'; ಟ್ರೇಲರ್​ ಬಿಡುಗಡೆಹೆಸರೇ ಹೇಳುವಂತೆ ಇದೊಂದು ರಾಜಕೀಯದ ಕುರಿತಾದ ಸಿನಿಮಾ. ಅದರಲ್ಲೂ ಪ್ರಜಾಪ್ರಭುತ್ವ ಮತ್ತು ಮತದಾನದ ಮಹತ್ವ ಸಾರುವ ಸಿನಿಮಾ. ಈ ಚಿತ್ರಕ್ಕೆ ನಿರ್ಮಾಪಕ ಮೇಘಡಹಳ್ಳಿ ಶಿವಕುಮಾರ್​ ಅವರೇ ಕಥೆ ರಚಿಸಿದ್ದಾರೆ. ಪ್ರತಿಯೊಬ್ಬರೂ ಈ ಚಿತ್ರವನ್ನು ನೋಡಬೇಕು ಎನ್ನುವ ಅವರು, ‘ಮತದಾನ ಅಮೂಲ್ಯವಾದ್ದದ್ದು. ಹಾಗಾಗಿ ಮತಗಳನ್ನು ಮಾರಾಟ ಮಾಡಿಕೊಳ್ಳಬಾರದು. ಇದೊಂದು ಮತದಾನದ ಮಹತ್ವ ಸಾರುವ ಸಿನಿಮಾ. ಚುನಾವಣೆ ಮೊದಲೇ ಚಿತ್ರವನ್ನು ಬಿಡುಗಡೆ ‌ಮಾಡುವ ಪ್ರಯತ್ನ ನಡೆಯುತ್ತಿದೆ’ ಎನ್ನುತ್ತಾರೆ ಅವರು.

    ಚೇತನ್​ಗೆ ನಾಯಕನಾಗಿ ಇದು 12ನೇ ಚಿತ್ರವಂತೆ. ಈ ಕುರಿತು ಮಾತನಾಡುವ ಅವರು, ‘ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಒಳ್ಳೆಯ ಕಥೆ ಈ ಚಿತ್ರದಲ್ಲಿದೆ. ರಂಗನಾಥ್ ಅಷ್ಟೇ ಚೆನ್ನಾಗಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ದೊಡ್ಡ ಕಲಾವಿದರ ಬಳಗವೇ ಇದ್ದು, ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ’ ಎನ್ನುತ್ತಾರೆ ಚೇತನ್ ಚಂದ್ರ. ಅವರಿಗೆ ನಾಯಕಿಯಾಗಿ ಪಾವನಾ ಗೌಡ ಅಭಿನಯಿಸಿದ್ದಾರೆ.

    ಇದನ್ನೂ ಓದಿ: ಅನೂಪ್​ ರೇವಣ್ಣ ರೀ-ಎಂಟ್ರಿ; ‘ಕಬ್ಜ’ದಲ್ಲಿ ಉಪ್ಪಿಗೆ ಬಲಗೈ ಬಂಟ …

    ‘ಪ್ರಭುತ್ವ’ ಚಿತ್ರದಲ್ಲಿ ನಾಸರ್, ಶರತ್ ಲೋಹಿತಾಶ್ವ, ಆದಿ ಲೋಕೇಶ್, ಅರವಿಂದ್ ರಾವ್, ಹರೀಶ್ ರಾಯ್, ವಿಜಯ್ ಚೆಂಡೂರ್, ವೀಣಾ ಸುಂದರ್, ರಾಜೇಶ್ ನಟರಂಗ, ಅನಿತಾ ಭಟ್ ಮುಂತಾದವರು ನಟಿಸಿದ್ದು, ಚಿತ್ರಕ್ಕೆ ಎಮಿಲ್​ ಸಂಗೀತ ಮತ್ತು ಕೆ.ಎಸ್​. ಚಂದ್ರಶೇಖರ್​ ಅವರ ಛಾಯಾಗ್ರಹಣವಿದೆ.

    ಪ್ರತಿಷ್ಠಿತ ವಿದೇಶಿ ಬ್ರ್ಯಾಂಡ್‍ಗೆ ಭಾರತದ ಮೊದಲ ರಾಯಭಾರಿಯಾಗಿ ರಶ್ಮಿಕಾ ಆಯ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts