More

    ಪೊಸ್ರಾಲು ಒಳರಸ್ತೆ ಅಗೆದು ಸಂಪರ್ಕ ಕಡಿತ, ಒಳ ಬರುವ ದಕ ಜಿಲ್ಲೆಯ ವಾಹನಗಳಿಗೆ ತಡೆ

    ಬೆಳ್ಮಣ್: ಕಾರ್ಕಳ ತಾಲೂಕಿನ ಸಚ್ಚೆರಿಪೇಟೆ ಹಾಗೂ ಜಾರಿಗೆಕಟ್ಟೆ ಚೆಕ್‌ಪೋಸ್ಟ್ ತಪ್ಪಿಸಿ ಕಡಂದಲೆ ಮುಕ್ಕಡಪ್ಪು ರಸ್ತೆ ಮೂಲಕ ವಾಹನಗಳು ಉಡುಪಿ ಜಿಲ್ಲೆಯ ಗಡಿ ಪ್ರವೇಶಿಸುತ್ತಿವೆ. ಈ ಹಿನ್ನೆಲೆ ಸ್ಥಳೀಯ ಮುಂಡ್ಕೂರು ಗ್ರಾಪಂ ಪೊಸ್ರಾಲು ಎಂಬಲ್ಲಿ ರಸ್ತೆ ಅಗೆದು ಸಂಪರ್ಕ ಕಡಿತಗೊಳಿಸಿದೆ.

    ಜಿಲ್ಲೆಯ ಎಲ್ಲ ಗಡಿ ಭಾಗ ಬಂದ್ ಮಾಡಲಾಗಿದ್ದರೂ ಕೆಲ ವಾಹನಗಳು ದ.ಕ.ಜಿಲ್ಲೆಯಿಂದ ಒಳ ರಸ್ತೆಯ ಮೂಲಕ ಉಡುಪಿ ಜಿಲ್ಲೆ ಪ್ರವೇಶಿಸುತ್ತಿತ್ತು. ಕೆಳ ದಿನಗಳ ಹಿಂದೆ ದಕ ಜಿಲ್ಲೆಯಿಂದ ಬಂದ ಏಳು ಮಂದಿಯನ್ನು ಕಾರ್ಕಳ ತಾಲೂಕಿನ ಸಚ್ಚೆರಿಪೇಟೆಯಲ್ಲಿ ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದ್ದು, ಈ ಬಗ್ಗೆ ‘ವಿಜಯವಾಣಿ’ ವರದಿ ಮಾಡಿತ್ತು. ಕೂಡಲೇ ಎಚ್ಚೆತ್ತ ಸ್ಥಳೀಯ ಮುಂಡ್ಕೂರು ಗ್ರಾಪಂ ಒಳ ರಸ್ತೆಯನ್ನು ಪೊಸ್ರಾಲು ದೇವಳದ ಬಳಿ ಅಗೆದು ಹಾಕಿ ದಕ ಜಿಲ್ಲೆಯಿಂದ ಯಾವುದೇ ವಾಹನ ಒಳ ಬರದಂತೆ ಸಂಪರ್ಕ ಕಡಿತಗೊಳಿಸಿದೆ.

    ತೊಂದರೆಗೆ ಸಿಲುಕಿದ ಸ್ಥಳೀಯರು: ಪೊಸ್ರಾಲು ದೇವಳದ ಬಳಿಯ ಸೇತುವೆ ಪಕ್ಕ ರಸ್ತೆ ಕಡಿತಗೊಳಿಸಿದ್ದು, ಇದರಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗಿದೆ. ನಿತ್ಯ ಹಾಲು ಕೊಡುವವರಿಗೆ ಹಾಗೂ ಅಗತ್ಯ ವಸ್ತುಗಳಿಗೆ ಪೇಟೆ ಪ್ರದೇಶ ಸಂಪರ್ಕಿಸಲು ಹಾಗೂ ತುರ್ತು ಸಂದರ್ಭ ಸಾಗಲು ಈಗ ರಸ್ತೆಯೇ ಇಲ್ಲದಂತಾಗಿದ್ದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts