More

    ನೇತ್ರಾವತಿಗೆ ಕಸ ಎಸೆದ ಮಹಿಳೆಯ ಕಾರು ಪತ್ತೆ

    ಮಂಗಳೂರು: ನೇತ್ರಾವತಿ ನದಿಗೆ ಶಾಟ್‌ಪುಟ್ ಶೈಲಿಯಲ್ಲಿ ಬೇಲಿ ದಾಟಿಸಿ ಕಸ ಎಸೆದ ಕಾರನ್ನು ಪೊಲೀಸರು ಸಂಜೆಯೊಳಗೆ ಪತ್ತೆ ಮಾಡಿದ್ದಾರೆ.
    ಕಸ ಎಸೆದ ಮಹಿಳೆ ಮಂಗಳೂರು ಮೂಲದ, ಬೆಂಗಳೂರು ನಿವಾಸಿಯಾಗಿದ್ದು, ಊರಿಗೆ ಬಂದವರು ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಶನಿವಾರ ಬೆಳಗ್ಗೆ ಕೆಂಪು ಕಾರನ್ನು ನೇತ್ರಾವತಿ ಹೊಸ ಸೇತುವೆಯಲ್ಲಿ ನಿಲ್ಲಿಸಿ ಮಹಿಳೆ ಕಸದ ಪ್ಲಾಸ್ಟಿಕ್ ಕಟ್ಟನ್ನು ನೇತ್ರಾವತಿ ನದಿಗೆ ಎಸೆಯುವ ವಿಡಿಯೊ ವೈರಲ್ ಆಗಿತ್ತು.
    ಈ ಬಗ್ಗೆ ಸಾರ್ವತ್ರಿಕವಾಗಿ ನಾಗರಿಕರಿಂದ ಆಕ್ರೋಶ ವ್ಯಕ್ತವಾಗಿದ್ದು ಸಂಜೆಯೊಳಗೆ ಮಂಗಳೂರಿನ ಕಂಕನಾಡಿ ನಗರ ಪೊಲೀಸರು ಕಾರನ್ನು ಪತ್ತೆ ಮಾಡಿದ್ದಾರೆ. ಲಭ್ಯ ಮಾಹಿತಿ ಪ್ರಕಾರ ಕಾರನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು ಮಹಿಳೆಯಿಂದ ವಿವರಣೆ ಪಡೆದುಕೊಳ್ಳಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts