ನವದೆಹಲಿ : ಕೊಲೆ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಒಲಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು ನಿನ್ನೆ ಬೆಳಿಗ್ಗೆ ದೆಹಲಿಯ ಮಾಂಡೋಲಿ ಜೈಲಿನಿಂದ ತಿಹಾರ್ ಜೈಲಿಗೆ ಸ್ಥಳಾಂತರಿಸಲಾಯಿತು. ಈ ಸಂದರ್ಭದಲ್ಲಿ ಕೆಲವು ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಗಳು ಕುಮಾರ್ರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ಪ್ರಸಂಗ ನಡೆದಿದೆ.
ಸ್ಪೆಷಲ್ ಸೆಲ್ ಪೊಲೀಸರು ಮತ್ತು ದೆಹಲಿ ಆರ್ಮಡ್ ಪೊಲೀಸ್ನ ಥರ್ಡ್ ಬಟಾಲಿಯನ್ ಸಿಬ್ಬಂದಿಯನ್ನು ಸ್ಥಳಾಂತರದ ಸಮಯದಲ್ಲಿ ನಿಯುಕ್ತಿಗೊಳಿಸಲಾಗಿತ್ತು. ಈ ಸಂದರ್ಭದಲ್ಲಿ ಹೈ ರಿಸ್ಕ್ ಖೈದಿಗಳೊಂದಿಗೆ ತಮ್ಮ ಹಿರಿಯ ಅಧಿಕಾರಿಗಳಿಗೆ ಕಳುಹಿಸುವ ಸಲುವಾಗಿ ಕೆಲವು ಸಿಬ್ಬಂದಿ ಫೋಟೋಗಳನ್ನು ತೆಗೆದುಕೊಂಡರು. ನಂತರ ಈ ಸಿಬ್ಬಂದಿಗಳು ಆ ಫೋಟೋಗಳನ್ನು ತಮ್ಮ ವಾಟ್ಸಾಪ್ ಗ್ರೂಪ್ಗಳಿಗೆ ಮತ್ತು ಸಂಬಂಧಿಕರಿಗೆ ಕಳುಹಿಸಲು ಆರಂಭಿಸಿದ್ದು, ಫೋಟೋಗಳು ವೈರಲ್ ಆದವು ಎನ್ನಲಾಗಿದೆ.
ಇದನ್ನೂ ಓದಿ: ತವರಿಗೆ ಬಂದ ಮಗಳು ಮಾಡಿದ ಕೆಲಸಕ್ಕೆ ಕುಟುಂಬವೇ ಶಾಕ್! ಮದುವೆಯಾಗಿ 9 ದಿನಕ್ಕೆ ನಡೆದೇಹೋಯಿತು ಘೋರ ದುರಂತ
ಹೀಗೆ ಆರೋಪಿ ಸುಶೀಲ್ ಕುಮಾರ್ರೊಂದಿಗೆ ಹಲವು ಪೊಲೀಸರು ಸೆಲ್ಫಿ ಮತ್ತು ಫೋಟೋ ಸೆಷನ್ ನಡೆಸಿದ್ದಾರೆ ಎಂಬುದು ಬೆಳಕಿಗೆ ಬಂದಿದ್ದು, ಇದೀಗ ಹಿರಿಯ ಅಧಿಕಾರಿಗಳು ಈ ಬಗ್ಗೆ ತನಿಖೆ ಆದೇಶಿಸಿದ್ದಾರೆ ಎನ್ನಲಾಗಿದೆ.
ಮತ್ತೊಬ್ಬ ಕುಸ್ತಿಪಟು ಸಾಗರ್ ಧನಕರ್ ಕೊಲೆ ಆರೋಪದ ಮೇಲೆ ಸುಶೀಲ್ ಕುಮಾರ್ರನ್ನು ಬಂಧಿಸಿದ್ದು, ಜುಲೈ 9 ರವರೆಗೆ ಅವರನ್ನು ನ್ಯಾಯಾಂಗ ಬಂಧನದಲ್ಲಿರಿಸಿಲು ದೆಹಲಿ ಕೋರ್ಟ್ ಆದೇಶಿಸಿದೆ. (ಏಜೆನ್ಸೀಸ್)
ನಾವು ಕ್ವಾರಂಟೇನ್ನಲ್ಲಿಲ್ಲ, ಬೀದಿಗಿಳಿದು ಹೋರಾಟ ನಡೆಸುತ್ತಿದ್ದೇವೆ: ನಿಖಿಲ್ ಕುಮಾರಸ್ವಾಮಿ
ವಿಸ್ಟಾಡೋಮ್ ಕೋಚ್ಗೆ ಚಾಲನೆ! ಪಶ್ಚಿಮ ಘಟ್ಟಗಳ ಸೌಂದರ್ಯ ಸವಿಯುತ್ತಿರುವ ಪ್ರಯಾಣಿಕರು