More

    ಮನೆಯ ಫ್ರಿಡ್ಜ್​ನಲ್ಲಿತ್ತು ಮೃತದೇಹ: ನಿಗೂಢ ಕೇಸ್​ ಬೆನ್ನತ್ತಿ ಹೋದ ಪೊಲೀಸರಿಗೆ ಮಹಿಳೆಯ ಕರಾಳ ಮುಖ ಬಯಲು!

    ಹೈದರಾಬಾದ್​: ಹೈದರಾಬಾದ್​ನ ಜುಬಿಲಿ ಹಿಲ್ಸ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬರುವ ಕಾರ್ಮಿಕ ನಗರದ ಮನೆಯೊಂದರ ಫ್ರಿಡ್ಜ್​ನಲ್ಲಿ ಕಳೆದ ಶನಿವಾರ ವ್ಯಕ್ತಿಯೊಬ್ಬನ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿತ್ತು. ನಿಗೂಢ ಪ್ರಕರಣದ ಬೆನ್ನತ್ತಿ ಹೋದ ಪೊಲೀಸರು ಸಾವಿನ ರಹಸ್ಯವನ್ನು ಭೇದಿಸಿದ್ದಾರೆ.

    ಕಾರ್ಮಿಕ ನಗರದ ಮನೆಯ ಮಾಲೀಕ ತನ್ನ ಒಂದು ಮನೆಯನ್ನು ಲೀಸ್​ಗೆಂದು ನೀಡಿದ್ದ. ಆ ಮನೆ ಕಳೆದ ಕೆಲವು ದಿನಗಳಿಂದ ಲಾಕ್​ ಆಗಿತ್ತು. ದಿನ ಕಳೆದಂತೆ ಆ ಮನೆಯಿಂದ ದುರ್ವಾಸನೆ ಬರುವುದನ್ನು ಗಮನಿಸಿದ ಮಾಲೀಕ ಹೆದರಿ, ಪೊಲೀಸರಿಗೆ ಕರೆ ಮಾಡಿದಾಗ ಸಾವಿನ ಪ್ರಕರಣ ಬೆಳಕಿಗೆ ಬಂದಿತ್ತು.

    ಇದನ್ನೂ ಓದಿರಿ: ‘ರಾಬರ್ಟ್’ಗೆ ಸಂತೋಷ್​; ‘ವಕೀಲ್​ ಸಾಬ್​’ಗೆ ಭೂಮಿಕಾ

    ಫ್ರಿಡ್ಜ್​ನಲ್ಲಿ ಪತ್ತೆಯಾದ ಮೃತದೇಹ ಸಿದ್ದಿಖ್​ ಅಹ್ಮದ್​ (38) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಟೈಲರ್​ ಆಗಿದ್ದ ಸಿದ್ದಿಖ್​, ತನ್ನ ಕುಟುಂಬದೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದ. ಎರಡು ದಿನಗಳ ಹಿಂದೆ ಸಿದ್ದಿಖ್​ ಪತ್ನಿ ತವರು ಮನೆಗೆ ಹೋಗಿದ್ದಳು. ಇದರ ನಡುವೆ ಮನೆಯಿಂದ ಹೊರಬರುತ್ತಿದ್ದ ದುರ್ವಾಸನೆ ನೋಡಿ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದಾಗ, ಬಂದು ಸ್ಥಳ ಪರಿಶೀಲನೆ ಮಾಡಿದ ಪೊಲೀಸರಿಗೆ ಮನೆಯ ಫ್ರಿಡ್ಜ್​ನಲ್ಲಿ ಸಿದ್ದಿಖ್​ ಮೃತದೇಹ ಪತ್ತೆಯಾಗಿದೆ.

    ನಿಗೂಢ ಪ್ರಕರಣದ ಬೆನ್ನತ್ತಿ ಹೋದ ಪೊಲೀಸರಿಗೆ ಅಕ್ರಮ ಸಂಬಂಧದ ಕತೆ ತೆರೆದುಕೊಂಡಿದ್ದು, ಅಲ್ಲಿಗೆ ಕೊಲೆ ಎಂಬುದು ಖಚಿತವಾಗಿದೆ. ಈ ಕೊಲೆಯನ್ನು ಮೊಹಮ್ಮದ್​ ಅಲಿ ಎಂಬಾತ ಎಸಗಿದ್ದಾನೆ. ಕಾರಣ ಈತ ಸಿದ್ದಿಖ್​ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಇಬ್ಬರು ಸೇರಿ ಸಂಚು ಹೂಡಿ ಕೊಲೆ ಮಾಡಿರುವ ಆರೋಪದ ಮೇಲೆ ಸೋಮವಾರ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

    ಮೊಹಮ್ಮದ್​ ಅಲಿ ತನ್ನ ಪತ್ನಿ ಜತೆಗಿರುವುದನ್ನು ಸಿದ್ದಿಖ್​ ನೇರವಾಗಿ ನೋಡಿದ್ದ. ಇದಾದ ಬಳಿಕ ಪತ್ನಿಗೆ ಕಿರುಕುಳ ನೀಡಲು ಆರಂಭಿಸಿದ. ಹಲವಾರು ಹಲ್ಲೆಯನ್ನು ಮಾಡಿದ್ದ. ಇದನ್ನು ತಾಳಲಾರದೆ ಸಿದ್ದಿಖ್​ ಪತ್ನಿ, ಪ್ರಿಯಕರ ಮೊಹಮ್ಮದ್​ ಅಲಿ ಸೇರಿ ಸಂಚು ಹೂಡಿ ಗಂಡನನ್ನು ಕೊಂದಿದ್ದಾಳೆ.

    ಇದನ್ನೂ ಓದಿರಿ: ಸಮರ್ಪಕ ಚಿಕಿತ್ಸೆ ಸಿಗದೆ ಕರೊನಾ ಸೋಂಕಿಗೆ ಬಲಿಯಾದ ಸ್ಟಾಫ್​ನರ್ಸ್; ರಾತ್ರಿ ಪಾಳಿಗೆ ಹಾಜರಾಗದ ವೈದ್ಯರು

    ತಮ್ಮ ಯೋಜನೆಯಂತೆ ಸಿದ್ದಿಖ್​ ಪತ್ನಿ ತನ್ನ ಮಕ್ಕಳೊಂದಿಗೆ ತವರು ಮನೆಗೆ ಹಬ್ಬಕ್ಕೆಂದು ತೆರಳಿದ್ದಾಳೆ. ಬಳಿಕ ಮೊಹಮ್ಮದ್​ ಅಲಿ ಕಬ್ಬಿಣದ ಸಲಾಕೆಯೊಂದಿಗೆ ಸಿದ್ದಿಖ್​ ಮನೆಗೆ ಹೋಗಿದ್ದಾನೆ. ಸ್ಕ್ರೂಡ್ರೈವರ್ ಸಹಾಯದಿಂದ​ ಕಿಟಕಿಗಳನ್ನು ಬಿಚ್ಚಿ ಮನೆಯೊಳಗೆ ಪ್ರವೇಶಿಸಿ ಸಿದ್ದಿಖ್​ ಮೇಲೆ ಹಲ್ಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಸಿದ್ದಿಖ್​ ಅಲ್ಲಿಯೇ ಪ್ರಾಣ ಬಿಟ್ಟಿದ್ದಾನೆ.

    ಇದಾದ ಬಳಿಕ ಮೃತದೇಹವನ್ನು ಫ್ರಿಡ್ಜ್​ ಒಳಗಡೆ ಹಾಕಿ, ಆರೋಪಿ ಅಲಿ ಮನೆಯನ್ನು ಹೊರಗಿನಿಂದ ಲಾಕ್​ ಮಾಡಿ, ಅಲ್ಲಿಂದ ಪರಾರಿಯಾಗಿದ್ದ. ಸದ್ಯ ಆರೋಪಿ ಮತ್ತು ಸಿದ್ದಿಖ್​ ಪತ್ನಿಯನ್ನು ಬಂಧಿಸಲಾಗಿದ್ದು, ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. (ಏಜೆನ್ಸೀಸ್​)

    ಬೆಳ್ಳಂಬೆಳಗ್ಗೆ ತಟ್ಟಿದ ಸಾರಿಗೆ ನೌಕರರ ಮುಷ್ಕರ ಬಿಸಿ: ಸರ್ಕಾರಿ ನಿಲ್ದಾಣದಲ್ಲಿ ಖಾಸಗಿ ದರ್ಬಾರ್​, ದುಪ್ಪಟ್ಟು ದರ

    ಶಾಸಕರ ಪುತ್ರನ ಮೇಲೆಯೇ ಹಲ್ಲೆ; ಕಾರನ್ನು ಹಿಂಬಾಲಿಸಿಕೊಂಡು ಬಂದು ಕಪಾಳಕ್ಕೆ ಹೊಡೆದರು!?

    ಸೂಕ್ತ ಕ್ರಮ ಅವಶ್ಯ, ಶೈತ್ಯಾಗಾರಗಳ ಸಂಖ್ಯೆ ಹೆಚ್ಚಳವಾಗಲಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts