ಬೆಂಗಳೂರು: ಇಲ್ಲೊಬ್ಬ ಬಾಲಕ ಬೊಮ್ಮಸಂದ್ರದಲ್ಲಿರುವ ತನ್ನ ಮನೆಯಿಂದ ತಪ್ಪಿಸಿಕೊಂಡು ಬಂದಿದ್ದ. ಈತ ಮೆಜೆಸ್ಟಿಕ್ನಲ್ಲಿ ಅತ್ತಿಂದಿತ್ತ, ಇತ್ತಿಂದತ್ತ ಓಡಾಡುತ್ತಿದ್ದ. ಈತನನ್ನು ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಮಾತನಾಡಿಸಿ ವಾಪಸ್ ಆತನ ಮನೆಗೆ ತಲುಪಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ಸಂಚಾರಿ ಪೊಲೀಸ್ ಕಾನ್ಸ್ಟೇಬಲ್ ಎಲ್ಲರೂ ಮೆಚ್ಚುವ ಕೆಲಸ ಮಾಡಿದ್ದು ಮನೆಯಿಂದ ತಪ್ಪಿಸಿಕೊಂಡಿದ್ದ ಬಾಲಕ ಮರಳಿ ಪೋಷಕರ ಮಡಿಲಿಗೆ ತಲುಪಿದ್ದಾನೆ.
ಕಳೆದ ರಾತ್ರಿ ಚಿಕ್ಕಪೇಟೆ ಸಂಚಾರಿ ಕಾನ್ಸ್ ಟೇಬಲ್ ಶ್ರೀಕಾಂತ್ ಸೂಳೆಬಾವಿ ಎನ್ನುವವರು ಕರ್ತವ್ಯದಲ್ಲಿದ್ದರು. ಈ ವೇಳೆ ಮೆಜೆಸ್ಟಿಕ್ನಲ್ಲಿ ಒಬ್ಬಂಟಿಯಾಗಿ ಓಡಾಡುತ್ತಿದ್ದ ಬಾಲಕನನ್ನು ಕರೆದು ಮಾತನಾಡಿಸಿದ್ದಾರೆ. ಆಗ ಈ ಬಾಲಕ ಬೊಮ್ಮಸಂದ್ರದಿಂದ ತಪ್ಪಿಸಿಕೊಂಡಿರೋದಾಗಿ ಹೇಳಿದ್ದಾನೆ.
ಕೂಡಲೇ ಈತನ ಪೋಷಕರನ್ನು ಸಂಪರ್ಕಿಸಿದ ಸಂಚಾರಿ ಕಾನ್ಸ್ಟೇಬಲ್, ಪೋಷಕರಿಗೆ ಬಾಲಕನನ್ನು ಒಪ್ಪಿಸಿದ್ದಾರೆ. ಕಾನ್ಸ್ ಟೇಬಲ್ ಶ್ರೀಕಾಂತ್ ಸಮಯಪ್ರಜ್ಞೆಗೆ ಹಿರಿಯ ಅಧಿಕಾರಿಗಳೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.