ನವದೆಹಲಿ : ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ಒದಗಿಸಲಾಗಿರುವ ವೆಂಟಿಲೇಟರ್ಗಳ ಸ್ಥಾಪನೆ ಮತ್ತು ಕಾರ್ಯನಿರ್ವಹಣೆ ಬಗ್ಗೆ ಕೂಡಲೇ ಆಡಿಟ್ ಮಾಡಿ ವರದಿ ಸಲ್ಲಿಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆದೇಶಿಸಿದ್ದಾರೆ. ಇಂದು ಭಾರತದ ಕೋವಿಡ್ ಸನ್ನಿವೇಶವನ್ನು ಸಮೀಕ್ಷೆ ನಡೆಸಲು ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಪ್ರಧಾನಿ ಮೋದಿ ಈ ನಿರ್ದೇಶನ ನೀಡಿದ್ದಾರೆ.
“ಕೆಲವು ರಾಜ್ಯಗಳಲ್ಲಿ ವೆಂಟಿಲೇಟರ್ಗಳು ಬಳಸಲ್ಪಡದೆ ಶೇಖರಿಸಿಡಲಾಗಿವೆ ಎಂಬ ವರದಿಗಳ ಬಗ್ಗೆ ಪಿಎಂ ಗಂಭೀರ ಕಾಳಜಿ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಗಳಿಗೆ ನೀಡಲಾಗಿರುವ ವೆಂಟಿಲೇಟರ್ಗಳ ಇನ್ಸ್ಟಲೇಷನ್ ಮತ್ತು ಆಪರೇಷನ್ ಬಗೆಗೆ ಕೂಡಲೇ ಒಂದು ಆಡಿಟ್ ನಡೆಸಬೇಕೆಂದು ನಿರ್ದೇಶನ ನೀಡಿದರು. ಅಗತ್ಯವಿದ್ದಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ವೆಂಟಿಲೇಟರ್ಗಳನ್ನು ಆಪರೇಟ್ ಮಾಡುವ ಬಗ್ಗೆ ರಿಫ್ರೆಷರ್ ತರಬೇತಿಯನ್ನು ಆರೋಗ್ಯಸೇವಾ ಕಾರ್ಯಕರ್ತರಿಗೆ ನೀಡಬೇಕು ಎಂದು ಹೇಳಿದ್ದಾರೆ” ಎಂದು ಸರ್ಕಾರದ ಅಧಿಕೃತ ಹೇಳಿಕೆ ತಿಳಿಸಿದೆ.
ಇದನ್ನೂ ಓದಿ: ಆಕ್ಸಿಜನ್ ಉಪಕರಣ : ಸ್ವಿಟ್ಜರ್ಲ್ಯಾಂಡ್ ಟು ಅಂಡಮಾನ್ ನಿಕೋಬಾರ್
ಸಭೆಯಲ್ಲಿ ಪ್ರಧಾನಿ ಮೋದಿ ನೀಡಿದ ಇತರ ಸೂಚನೆಗಳೆಂದರೆ –
* ಸ್ಥಳೀಯ ಸ್ತರಗಳಲ್ಲಿ ಕಂಟೈನ್ಮೆಂಟ್ ಯೋಜನೆಗಳನ್ನು ರೂಪಿಸಬೇಕು.
* ಕರೊನಾ ಪಾಸಿಟಿವಿಟಿ ದರ ಹೆಚ್ಚಿರುವ ಪ್ರದೇಶಗಳಲ್ಲಿ ಪರೀಕ್ಷೆಗಳನ್ನು ಮತ್ತಷ್ಟು ಹೆಚ್ಚಿಸಬೇಕು.
* ಮನೆ ಮನೆಗೆ ತೆರಳಿ ಪರೀಕ್ಷೆ ಮತ್ತು ಕಣ್ಗಾವಲು ಒದಗಿಸುವಂತೆ ಗ್ರಾಮೀಣ ಪ್ರದೇಶಗಳಲ್ಲಿನ ಆರೋಗ್ಯ ಸಂಪನ್ಮೂಲಗಳನ್ನು ಹೆಚ್ಚಿಸಬೇಕು.
* ಗ್ರಾಮೀಣ ಪ್ರದೇಶಗಳಲ್ಲಿ ಆಮ್ಲಜನಕದ ಪೂರೈಕೆಯ ಸರಿಯಾದ ವಿತರಣೆಯನ್ನು ಖಚಿತಪಡಿಸಿಕೊಳ್ಳಬೇಕು. (ಏಜೆನ್ಸೀಸ್)
ಭೀಕರ ಕರೊನಾ ವೈರಸ್ ಹುಟ್ಟು ಇನ್ನೂ ಸ್ಪಷ್ಟವಾಗಿಲ್ಲ : ವಿಜ್ಞಾನಿಗಳ ಅಸಮಾಧಾನ
ಕೇರಳ ಲಾಕ್ಡೌನ್ ವಿಸ್ತರಣೆ ; ನಾಲ್ಕು ಜಿಲ್ಲೆಗಳಲ್ಲಿ ಟ್ರಿಪಲ್ ಲಾಕ್ಡೌನ್