More

    ತಾಯಿ ಭಾರತಿಯ ಸುರಕ್ಷಾ ಕವಚವೇ ನೀವು..; ದೀಪಾವಳಿ ಪ್ರಯುಕ್ತ ಯೋಧರನ್ನು ಭೇಟಿ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ ಮೋದಿ

    ದೆಹಲಿ: ಪ್ರತಿವರ್ಷದಂತೆ ಈ ವರ್ಷವೂ ದೀಪಾವಳಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾರತೀಯ ಯೋಧರನ್ನು ಭೇಟಿ ಮಾಡಿ, ಹಬ್ಬದ ಶುಭಾಶಯ ಕೋರಿದ್ದಾರೆ. ಮಾತ್ರವಲ್ಲ, ಭಾರತ ಮಾತೆಯ ಸುರಕ್ಷಾ ಕವಚವೇ ಸೈನಿಕರು ಎಂದೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಜಮ್ಮು ಮತ್ತು ಕಾಶ್ಮೀರದಲ್ಲಿರುವ ಸೈನಿಕರನ್ನು ಇಂದು ಬೆಳಗ್ಗೆಯೇ ಭೇಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರು, ರಜೌರಿ ಜಿಲ್ಲೆಯ ನೌಷೆರಾ ಪ್ರದೇಶದಲ್ಲಿ ಯೋಧರನ್ನು ಉದ್ದೇಶಿಸಿ ಮಾತನಾಡಿದರು. ನಾನು ನನ್ನ ಕುಟುಂಬಸ್ಥರ ಜೊತೆ ದೀಪಾವಳಿ ಆಚರಿಸಬೇಕು ಅಂದೊಂಡು ನಿಮ್ಮಲ್ಲಿಗೆ ಬಂದಿದ್ದೇನೆ, ನೀವೇ ನನ್ನ ಕುಟಂಬ ಎಂಬುದಾಗಿಯೂ ಅವರು ಹೇಳಿದ್ದಾರೆ.

    ನೀವು ಸೈನಿಕರಿಂದಾಗಿ ದೇಶದ ಜನತೆ ನೆಮ್ಮದಿಯಾಗಿ ನಿದ್ರಿಸಲು ಸಾಧ್ಯವಾಗುತ್ತಿದೆ. ನಿಮ್ಮ ಕಾರಣದಿಂದಾಗಿ ಹಬ್ಬದ ಸಂದರ್ಭದಲ್ಲಿ ಸಂತೋಷ ಸಾಧ್ಯವಾಗುತ್ತಿದೆ. ನಿಮ್ಮ ಶಕ್ತಿ-ಸಾಮರ್ಥ್ಯದಿಂದ ದೇಶದ ಶಾಂತಿ-ಸುರಕ್ಷತೆ ಖಚಿತಗೊಂಡಿದೆ. ಅಂಥ ನಿಮಗೆ ನಾನು ಇಂದು ದೇಶದ ಕೋಟ್ಯಂತರ ಜನರ ಹಾರೈಕೆಗಳನ್ನು ಹೊತ್ತುಕೊಂಡು ಬಂದು ಶುಭ ಕೋರುತ್ತಿದ್ದೇನೆ ಎಂದರು.

    ಗಂಡನನ್ನು ಕೊಂದು ಗುಂಡಿ ತೋಡಿ ಮುಚ್ಚಿದ ಪತ್ನಿ; ಬಳಿಕ ಮೊಬೈಲ್​ಫೋನ್​ ಸ್ವಿಚ್ಡ್​ ಆಫ್ ಮಾಡಿ ಪರಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts