More

    ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ; ಸಲಗ, ಕೋಟಿಗೊಬ್ಬನಿಗೆ ಸೂರಜ್ ಮನವಿ

    ಬೆಂಗಳೂರು: ‘ನಾವು ಟ್ರಾಫಿಕ್ ಜಾಮ್ ಇರುವುದಿಲ್ಲ ಎಂದುಕೊಂಡಿದ್ವಿ. ಈಗ ನೋಡಿದ್ರೆ ಹೀಗಾಯ್ತು …’- ಸ್ವಲ್ಪ ಆತಂಕದಿಂದಲೇ ಹೇಳಿಕೊಳ್ಳುತ್ತಾರೆ ‘ನಿನ್ನ ಸನಿಹಕೆ’ ಚಿತ್ರದ ನಾಯಕ ಕಂ ನಿರ್ದೇಶಕ ಸೂರಜ್ ಗೌಡ. ಎರಡು ಬಾರಿ ಬಿಡುಗಡೆಯ ದಿನಾಂಕ ಫಿಕ್ಸ್ ಆಗಿ ಕಾರಣಾಂತರಗಳಿಂದ ಮುಂದೂಡಲ್ಪಟ್ಟಿದ್ದ ಚಿತ್ರ, ಇದೀಗ ಅ. 8ಕ್ಕೆ ಬಿಡುಗಡೆಯಾಗುತ್ತಿದೆ. ಹಾಗಂತ ಹೆಚ್ಚು ಖುಷಿಪಡುವ ಹಾಗಿಲ್ಲ. ಏಕೆಂದರೆ, ಅದರ ಮರುವಾರವೇ ಅಂದರೆ ಅ.14ಕ್ಕೆ ‘ಕೋಟಿಗೊಬ್ಬ 3’ ಮತ್ತು ‘ಸಲಗ’ ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ಎರಡು ಚಿತ್ರಗಳು ಬಿಡುಗಡೆಯಾದರೆ, ತಮಗೆ ಚಿತ್ರಮಂದಿರಗಳು ಖೋತಾ ಆಗುವುದು ಖಂಡಿತ ಎಂದು ಸೂರಜ್​ಗೆ ಗೊತ್ತಿದೆ. ಅದನ್ನು ಬೇಸರದಿಂದಲೇ ಹೇಳಿಕೊಳ್ಳುತ್ತಾರೆ ಅವರು.

    ‘ನಾವು ರಿಲೀಸ್ ಡೇಟ್ ಘೋಷಣೆ ಮಾಡಿದಾಗ, ಸ್ವಲ್ಪ ಗ್ಯಾಪ್ ಇರುತ್ತದೆ ಎಂದುಕೊಂಡಿದ್ದೆವು. ಆದರೆ, 15ರಂದು ಇಬ್ಬರು ಸ್ಟಾರ್​ಗಳು ಬರುತ್ತಿದ್ದಾರೆ. ಇಬ್ಬರೂ 300, 300 ಚಿತ್ರಮಂದಿರಗಳನ್ನು ತೆಗೆದುಕೊಂಡು ಹೋದರೆ ನಮಗೇನು ಸಿಗುತ್ತದೆ. ಒಂದು ವಾರದಲ್ಲಿ ಎಷ್ಟು ಪ್ರೂವ್ ಮಾಡೋಕೆ ಸಾಧ್ಯವೋ ಅಷ್ಟೂ ಮಾಡಿಕೊಳ್ಳಬೇಕು. ಒಂದು ವಾರದಲ್ಲಿ ಎಷ್ಟು ಸಾಧ್ಯವೋ ಅಷ್ಟು ಮನರಂಜಿಸಬೇಕು. ಚಿತ್ರರಂಗ ಎಂದರೆ ಬರೀ ದೊಡ್ಡ ಸಿನಿಮಾಗಳಷ್ಟೇ ಅಲ್ಲ. ಎಲ್ಲ ಚಿತ್ರಗಳು ಸೇರಿ ಚಿತ್ರರಂಗವಾಗುತ್ತದೆ. ಹಾಗಾಗಿ, ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ’ ಎಂದು ಎರಡೂ ಚಿತ್ರತಂಡದವರಿಗೆ ಅವರು ಮನವಿ ಮಾಡಿಕೊಳ್ಳುತ್ತಾರೆ.

    ಡಾ. ರಾಜಕುಮಾರ್ ಮೊಮ್ಮಗಳು ಧನ್ಯಾ ರಾಮ್ುಮಾರ್ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ. ಈ ಚಿತ್ರದಲ್ಲಿ ಅವರದ್ದು ಅಮೃತಾ ಎಂಬ ಡೆಂಟಿಸ್ಟ್ ಪಾತ್ರವಂತೆ. ‘ಇದು ನನ್ನ ನಿಜಜೀವನಕ್ಕೆ ಬಹಳ ಹತ್ತಿರವಾದ ಪಾತ್ರ. ನನಗೂ ಸಹ ಬೇಸರವಾದಾಗ ಅದನ್ನು ಹಿಡಿದಿಟ್ಟುಕೊಳ್ಳುವುದಿಲ್ಲ. ಈ ಪಾತ್ರ ಸಹ ಹಾಗೆಯೇ ಇದೆ. ಇದೊಂದು ಕ್ಯೂಟ್ ಲವ್​ಸ್ಟೋರಿ. ಇಂಥದ್ದೊಂದು ಅವಕಾಶ ಕೊಟ್ಟ ಎಲ್ಲರಿಗೂ ಥ್ಯಾಂಕ್ಸ್’ ಎನ್ನುತ್ತಾರೆ.

    ಚಲಿಸುತ್ತಿದ್ದ ಬಸ್ಸಲ್ಲೇ ಆಕೆಯ ಮೇಲೆ ಹಲ್ಲೆ ಮಾಡಿದ, ಅವಳ ಹತ್ತಿರ ಯಾರೂ ಬರಬೇಡಿ ಎಂದು ಎಚ್ಚರಿಕೆಯನ್ನೂ ನೀಡಿದ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts