ದಾವಣಗೆರೆ: ಲಾಕ್ಡೌನ್ ಇದ್ದರೂ ವೈದ್ಯಕೀಯ ತುರ್ತು ಸೇವೆಗಳಿಗೆ ಅಡೆತಡೆಯಿಲ್ಲ. ಮೆಡಿಕಲ್ ಶಾಪ್ಗಳು ತೆರೆದೇ ಇರುತ್ತವೆ ಎಂದಿದ್ದರೂ ಅದೆಷ್ಟೋ ಜನರಿಗೆ ಸಮಸ್ಯೆಯಾಗುತ್ತಿರುವುದು ಸುಳ್ಳಲ್ಲ.
ಇದೀಗ ಯುವತಿಯೋರ್ವಳು ತನ್ನ ಕ್ಯಾನ್ಸರ್ ಪೀಡಿತ ತಂದೆಗೆ ಔಷಧಿ ಸಿಗುತ್ತಿಲ್ಲ ಎಂದು ತುಂಬ ನೋವಿನಿಂದ ಹೇಳಿಕೊಂಡಿದ್ದಾಳೆ. ಅಲ್ಲದೆ, ಮೆಡಿಸಿನ್ ತರಿಸಿಕೊಡುವಂತೆ ವಿಡಿಯೋ ಮೂಲಕ ಯಡಿಯೂರಪ್ಪನವರಿಗೆ ಮನವಿ ಮಾಡಿದ್ದಾಳೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿ ಕುಂಬಳೂರಿನ ಯುವತಿ ನಿಖಿತಾ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದಾರೆ. ಔಷಧಿ ಸಿಗದೆ ನನ್ನ ತಂದೆ ಕಷ್ಟಪಡುತ್ತಿರುವುದನ್ನು ನೋಡಲಾಗುತ್ತಿಲ್ಲ. ಹೇಗಾದರೂ ಮೆಡಿಸನ್ ತರಿಸಿಕೊಡಿ ಎಂದು ಅಂಗಲಾಚಿ ಬೇಡಿಕೊಂಡಿದ್ದಾರೆ.
ನಿಖಿತಾ ತಂದೆ ಹನುಮಂತಪ್ಪ ಪ್ಯಾಂಕ್ರಿಯಾಸ್ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಅವರಿಗೆ ಉಡುಪಿಯ ಮಣಿಪಾಲ ಆಸ್ಪತ್ರೆಯಲ್ಲಿ ಡಿ.25ರಂದು ಒಂದು ಥೆರಪಿ ಚಿಕಿತ್ಸೆ ನೀಡಲಾಗಿತ್ತು. ಅದಾದ ಬಳಿಕ ಮಾ.25ಕ್ಕೆ ಎರಡನೇ ಬಾರಿಗೆ ಚಿಕಿತ್ಸೆ ನೀಡಬೇಕಿತ್ತು. ಆದರೆ ಲಾಕ್ಡೌನ್ ಇದ್ದುದರಿಂದ ಆಸ್ಪತ್ರೆಯಲ್ಲಿ ಅದಕ್ಕೆ ಬೇಕಾದ ಮೆಡಿಸಿನ್ ಸಿಗುತ್ತಿಲ್ಲ.
ಅದನ್ನು ಮುಂಬೈನಿಂದ ತರಿಸಬೇಕು ಎನ್ನುತ್ತಿದ್ದಾರೆ. ಆದರೆ ಔಷಧಿ ಇಲ್ಲದೆ ನಿಖಿತಾ ಅಪ್ಪ ತೀವ್ರ ಕಷ್ಟಪಡುತ್ತಿದ್ದಾರೆ.
ಈಗ ಇದನ್ನೇ ವಿಡಿಯೋದಲ್ಲಿ ಹೇಳಿರುವ ನಿಖಿತಾ, ಹೇಗಾದರೂ ಮಾಡಿ ಮೆಡಿಸಿನ್ ತರಿಸಿಕೊಡಿ. ನನ್ನ ತಂದೆಯ ನೋವು ನೋಡಲಾಗುತ್ತಿಲ್ಲ ಎಂದಿದ್ದಾರೆ. (ದಿಗ್ವಿಜಯ ನ್ಯೂಸ್)
ವಿದೇಶಿಯರಿಗೆ ಮನ ಮಿಡಿಯುತ್ತಿರುವ ರಾಷ್ಟ್ರಗಳು, ಅಮೆರಿಕ- ಭಾರತ ಬಾಂಧವ್ಯಕ್ಕೆ ಹೊಸ ಸಾಕ್ಷ್ಯ