ಚಿತ್ರದುರ್ಗ: ನದಾಫ್/ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ರಾಜ್ಯಸರ್ಕಾರವನ್ನು ಒತ್ತಾಯಿಸಿ ರಾಜ್ಯ ನದಾಫ್/ಪಿಂಜಾರ ಅಭಿವೃದ್ಧಿ ಚಿತ್ರ ದುರ್ಗ ತಾಲೂಕು ಘಟಕದ ಪ್ರಮುಖರು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು. ಆರ್ಥಿಕ, ಸಾಮಾಜಿಕ,ಶೈಕ್ಷಣಿಕ,ರಾಜಕೀಯವಾಗಿ ಅತ್ಯಂತ ಹಿಂದುಳಿದಿರುವ ಪಿಂಜಾರ ಸಮುದಾಯ ಕೇಂದ್ರದ ಒಬಿಸಿ ಪಟ್ಟಿಯಲ್ಲಿದ್ದು,ಕರ್ನಾಟ ಕದಲ್ಲಿ ಈ ಸಮುದಾಯ ಅತ್ಯಂತ ಹಿಂದುಳಿದಿದೆ.
ಪಿಂಜಾರ ಸಮುದಾಯದ ಜನರು ಹಾಸಿಗೆ ಹೊಲಿಯುವುದು,ಗುಡಾರಗಳ ನೇಯ್ಗೆ,ಹಗ್ಗ ತಯಾರಿಕೆ ವೃತ್ತಿಯಲ್ಲಿ ತೊಡಗಿ ಅಲೆ ಮಾ ರಿಗಳಂತೆ ಜೀವನ ಸಾಗಿಸುತ್ತಿದ್ದಾರೆ. ಈವರೆವಿಗೂ ಈ ಸಮುದಾಯದಲ್ಲಿ ಯಾರೊಬ್ಬ ಉನ್ನತ ಮಟ್ಟದ ಅಧಿಕಾರಿಗಳಾಗಿಲ್ಲ. ಆದ್ದ ರಿಂದ ಸಮುದಾಯದ ಸರ್ವಾಂಗೀಣ ಏಳಿಗೆಗಾಗಿ ಪಿಂಜಾರ/ನದಾಫ್ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಹಲವು ವರ್ಷಗಳಿಂದ ಬೇಡಿಕೆ ಸಲ್ಲಿ ಸುತ್ತಿದ್ದರೂ ಪ್ರಯೋಜನವಾಗಿಲ್ಲವೆಂದು ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದರು.
ಆದ್ದರಿಂದ ಈಗಲಾದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಮ್ಮ ಬೇಡಿಕೆಯನ್ನು ಈಡೇರಿಸಬೇಕೆಂದು ಮನವಿ ಮಾಡಿದರು. ಹುಸೇನ್ಪೀರ್,ಮಹಮದ್ಆಲಿ,ಅಲಿಪೀರ್, ದಾದವಲಿ,ರಶೀದ್ಸಾಬ್,ಹಾಜಿ ಆರ್.ದಾದಾಪೀರ್,ಶಬ್ಬೀರ್,ಭಾಷ,ಷರಿಫಾಬಿ, ಅಕ್ಬರ್,ಹಸನ್ಸಾಬ್ ಮತ್ತಿತರರು ಇದ್ದರು.