ಮೈಸೂರು: ನಾಡಹಬ್ಬ ಮೈಸೂರು ದಸರಾಕ್ಕೆ ಇಂದು ಚಾಲನೆ ಸಿಕ್ಕಿದೆ. ಇದು ಐತಿಹಾಸಿಕ 410ನೇ ದಸರಾ ಕಾರ್ಯಕ್ರಮವಾಗಿದೆ. ಕರೊನಾ ಸಂಕಷ್ಟ ಕಾಲದಲ್ಲಿ ರಾಜ್ಯ ಸರ್ಕಾರ ಈ ಸಲದ ದಸರಾ ಉದ್ಘಾಟನೆಯನ್ನು ಡಾಕ್ಟರ್ ಸಿ.ಎನ್.ಮಂಜುನಾಥ್ ಅವರಿಂದ ಮಾಡಿಸಿದ್ದು ಸಕಾಲಿಕ ಮತ್ತು ಐತಿಹಾಸಿಕವೆನಿಸಿದೆ.
ಡಾಕ್ಟರ್ ಮಂಜುನಾಥ್ ಅವರು ವೇದಿಕೆಯ ಮೇಲೆಇದ್ದ ಅಲಂಕೃತ ಬೆಳ್ಳಿ ರಥದಲ್ಲಿ ವಿರಾಜಮಾನಳಾದ ಶ್ರೀ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದಾದ ಬಳಿಕ, ಅದೇ ವೇದಿಕೆಯಲ್ಲಿ ಆರು ಕರೊನಾ ವಾರಿಯರ್ಸ್ ಅನ್ನು ಸನ್ಮಾನಿಸಲಾಗಿದೆ. ಈ ಎಲ್ಲ ಸಂದರ್ಭಗಳ ಫೋಟೋ ಚಿತ್ರಣ ಇಲ್ಲಿದೆ.