ನೋಟ್ ಬ್ಯಾನ್ ಆದಾಗ ಜನ ಹೇಗೆ ಪರಿತಪಿಸಿದ್ದರೋ, ಅದೇ ಪರಿಸ್ಥಿತಿ ಟಿಕ್ಟಾಕ್ ಮಾಡುವವರದ್ದಾಗಿದೆ ಎಂದು ನಟಿ ಮತ್ತು ತೃಣಮೂಲ ಕಾಂಗ್ರೆಸ್ನ ಸಂಸದೆ ನುಸ್ರತ್ ಜಹಾನ್ ಹೇಳಿದ್ದಾರೆ. ಕೇಂದ್ರ ಸರ್ಕಾರ ಚೀನಿಸ್ ಆ್ಯಪ್ ಮಾಡಿದ್ದರ ಪರವಾಗಿರುವ ನುಸ್ರತ್, ಆದರೂ ಒಂದಷ್ಟು ಜನ ಅದರಿಂದಲೇ ಸಂಪಾದನೆ ಕಂಡುಕೊಂಡಿದ್ದರು. ಇದೀಗ ಅದು ಅವರ ಕೈ ತಪ್ಪಿದೆ ಎಂದಿದ್ದಾರೆ.
ಇದನ್ನೂ ಓದಿ: ಟಿಕ್ಟಾಕ್ ಬ್ಯಾನ್ ಆದ್ರೇನಂತೆ HiPi ಇದೆಯಲ್ಲ!
ಸೋಮವಾರವಷ್ಟೇ ಚೀನಾದ 59 ಆ್ಯಪ್ಗಳನ್ನು ಬ್ಯಾನ್ ಮಾಡಿ ಆದೇಶ ಹೊರಡಿಸಿತ್ತು. ಕೇಂದ್ರದ ಈ ನಿರ್ಧಾರವನ್ನು ಬಹುತೇಕರೆಲ್ಲರೂ ಸ್ವಾಗತಿಸಿದ್ದರು. ಅದೇ ರೀತಿ ನುಸ್ರತ್ ಸಹ ಈ ನಡೆಯನ್ನು ಸ್ವಾಗತಿಸಿದ್ದಾರೆ. ‘ಟಿಕ್ಟಾಕ್ ಕೇವಲ ಮನರಂಜನಾ ಉದ್ದೇಶದಿಂದ ಅಭಿವೃದ್ಧಿಪಡಿಸಿದ ಆ್ಯಪ್. ಇದರ ನಿಷೇಧದಿಂದ ಜನ ನಿರೂದ್ಯೋಗಿಗಳಾಗುತ್ತಾರಾ? ನೋಟ್ ಬ್ಯಾನ್ ಆದಾಗ ಅನುಭವಿಸಿದ್ದನ್ನೇ ಈಗ ಮತ್ತೆ ಅನುಭವಿಸುತ್ತಾರೆ. ಇದರಿಂದ ಹೆಚ್ಚೇನೂ ಆಗದು. ರಾಷ್ಟ್ರದ ಹಿತದೃಷ್ಟಿಯಿಂದ ಈ ನಿರ್ಧಾರ ಒಳ್ಳೆಯದು ಎಂದಿದ್ದಾರೆ.
ಇದನ್ನೂ ಓದಿ: ನನ್ನ ಸಾವಿನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವುದನ್ನು ಬಿಡಿ, ನನ್ನ ಆತ್ಮೀಯರಲ್ಲಿ ಹಾರ್ಟ್ ಪೇಷೆಂಟ್ಸ್ ಇದ್ದಾರೆ: ಎಸ್.ಜಾನಕಿ
ಇದಷ್ಟೇ ಅಲ್ಲ ಕೇವಲ ಆ್ಯಪ್ ಬ್ಯಾನ್ ಜತೆಗೆ ಚೀನಾ ಕಂಪನಿಗಳು ಹೂಡಿಕೆ ಮಾಡಿದ ಕಂಪನಿಗಳು, ಅದರ ಶೇರುಗಳ ಬಗ್ಗೆಯೂ ಮುಂದಿನ ದಿನಗಳಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಒಂದಷ್ಟು ಮಂದಿ ಟಿಕ್ಟಾಕ್ ಅನ್ನೇ ಬಂಡವಾಳ ಮಾಡಿಕೊಂಡು ಆದಾಯ ಗಳಿಸುತ್ತಿದ್ದರು. ಇದೀಗ ಅವರ ಆದಾಯಕ್ಕೂ ಕೊಕ್ಕೆ ಬಿದ್ದಿದೆ. ಈ ರೀತಿ ಉತ್ತರಿಸಲಾಗದ ಪ್ರಶ್ನೆಗಳು ಸಾಕಷ್ಟಿವೆ ಎಂದಿದ್ದಾರೆ ನುಸ್ರತ್. ಅಂದಹಾಗೆ, ನಟಿ, ಸಂಸದೆ ನುಸ್ರತ್ ಸಹ ಟಿಕ್ಟಾಕ್ನಲ್ಲಿದ್ದರು. ಸಾಕಷ್ಟು ವಿಡಿಯೋ ಮಾಡಿ, ಅಪಾರ ಪ್ರಮಾಣದ ಫಾಲೋವರ್ಸ್ ಹೊಂದಿದ್ದರು.
ಹಾಸ್ಯನಟ ಮಿಮಿಕ್ರಿ ರಾಜಗೋಪಾಲ್ ವಿಧಿವಶ