More

    ಹುಚ್ಚನ ಹಾವಳಿಗೆ ಬೆಚ್ಚಿದ ಜನ

    ರೋಣ: ಪಟ್ಟಣದಲ್ಲಿ ಹುಚ್ಚನೊಬ್ಬನ ಹಾವಳಿ ಮಿತಿ ಮೀರಿದ್ದರಿಂದ ಸಾರ್ವಜನಿಕರು ಹಾಗೂ ಮಕ್ಕಳು ಮನೆಯಿಂದ ಹೊರಬರಲು ನಾಗರಿಕರು ಭಯಪಡುವ ಸ್ಥಿತಿ ನಿರ್ವಣವಾಗಿದೆ.

    ಪಟ್ಟಣದ ಮಾರುಕಟ್ಟೆಯಲ್ಲಿ ಅರೆಬೆತ್ತಲೆಯಾಗಿ ತಿರುಗಾಡುತ್ತಿರುವ ಹುಚ್ಚನಿಂದ ಮಹಿಳೆಯರು ಕೂಡ ಮುಜುಗರ ಕ್ಕೊಳಗಾಗುತ್ತಿದ್ದಾರೆ. ಬೆಳ್ಳಂಬೆಳಗ್ಗೆ ವಾಯುವಿಹಾರಕ್ಕೆ ಹೋಗುವ ಮಹಿಳೆಯರನ್ನು ಹಿಂಬಾಲಿಸಿ ಹೋಗು ವುದು, ದ್ವಿಚಕ್ರ ವಾಹನ ಸವಾರರ ಕಣ್ಣಿಗೆ ಮಣ್ಣೆರೆಚುವುದು, ಮಾರುಕಟ್ಟೆಯಲ್ಲಿ ಹೋಗುತ್ತಿರುವ ಮಹಿಳೆ ಮತ್ತು ಮಕ್ಕಳ ಮೇಲೆ ಏಕಾಏಕಿ ಬಡಿಗೆಯಿಂದ ಹಲ್ಲೆ ಮಾಡುವುದು, ಮನೆಯ ಮುಂದೆ ಹಾಗೂ ಮಾರುಕಟ್ಟೆಯಲ್ಲಿ ನಿಲ್ಲಿಸಿರುವ ವಾಹನಗಳ ಗಾಜುಗಳನ್ನು ಒಡೆದುಹಾಕುವ ಕೆಲಸವನ್ನು ಈ ಹುಚ್ಚ ಮಾಡುತ್ತಿದ್ದಾನೆ. ಅವನನ್ನು ಬೆದರಿಸಲು ಹೋದವರಿಗೆ ಕಲ್ಲಿನಿಂದ ಹೊಡೆಯುತ್ತಿದ್ದಾನೆ. ಇದರಿಂದಾಗಿ ಸಾರ್ವಜನಿಕರಲ್ಲಿ ಆತಂಕಕ್ಕೀಡಾಗಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ತೀವ್ರ ತೆರನಾದ ಚಳಿ ಹೆಚ್ಚಾಗಿರುವುದರಿಂದ ರಾತ್ರಿ ವೇಳೆ ಮಾರುಕಟ್ಟೆಯಲ್ಲಿರುವ ಅಂಗಡಿಗಳ ಬಾಗಿಲಿನ ಮುಂದೆ ಕುಳಿತು ಬೀಡಿಗಳನ್ನು ಸೇದಿ ಅಂಗಡಿಗಳಲ್ಲಿ ಎಸೆಯುತ್ತಾನೆ. ಇದರಿಂದಾಗಿ ಅನೇಕ ಅಂಗಡಿಗಳು ಬೆಂಕಿಗೆ ಆಹುತಿಯಾದ ಘಟನೆಗಳು ನಡೆದಿವೆ. ಈ ಕೂಡಲೆ, ಈ ಹುಚ್ಚನ ಆಟಾಟೋಪ ನಿಲ್ಲಿಸಲು ಸಂಬಂಧ ಪಟ್ಟವರು ಮುಂದಾಗಬೇಕು ಎಂದು ಪಟ್ಟಣವಾಸಿಗಳು ಒತ್ತಾಯಿಸಿದ್ದಾರೆ.

    ಪಟ್ಟಣದಲ್ಲಿರುವ ಹುಚ್ಚ ಸಂತೆ ಮಾರುಕಟ್ಟೆಯಲ್ಲಿ ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡುತ್ತಿದ್ದಾನೆ, ಇದನ್ನು ಕಣ್ಣಾರೆ ಕಂಡ ನಾವು ನಮ್ಮ ಮಕ್ಕಳನ್ನು ಮಾರುಕಟ್ಟೆಗೆ ಕರೆದುಕೊಂಡು ಹೋಗಲು ಹೆದರುವಂತಾಗಿದೆ.

    | ಮುಮ್ತಾಜ್ ಬೇವಿನಗಿಡ

    ಬಾಳೆಹಣ್ಣು ವ್ಯಾಪಾರಿ, ರೋಣ

    ಪಟ್ಟಣದ ಪೇಂಟ್ ಅಂಗಡಿಯೊಂದರ ಮುಂದೆ ಹುಚ್ಚನೊಬ್ಬ ರಾತ್ರಿ ವೇಳೆ ಬೀಡಿ ಸೇದಿ ಎಸೆದ ಪರಿಣಾಮ ಪೇಂಟ್ ಅಂಗಡಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ವಸ್ತಗಳ ಹಾನಿಯಾಗಿದೆ.

    | ವೀರಭದ್ರಪ್ಪ ಜಕ್ಕನಗೌಡ್ರ

    ಸ್ಥಳೀಯ

    ಹುಚ್ಚನ ಉಪಟಳದ ಬಗ್ಗೆ ನಮಗೂ ಮಾಹಿತಿ ದೊರಕಿದ್ದು, ಆತನನ್ನು ನಿರ್ಗತಿಕ ಕೇಂದ್ರಕ್ಕೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು.

    | ನೂರೂಲ್ಲಾಖಾನ್

    ಮುಖ್ಯಾಧಿಕಾರಿ ಪುರಸಭೆ ರೋಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts