More

    ಬಿಜೆಪಿ ಕಾರ್ಯಕರ್ತರಿಂದ ಗೋ ಪೂಜೆ

    ಚಿಕ್ಕಮಗಳೂರು: ಗೋಹತ್ಯಾ ನಿಷೇಧ ವಿಧೇಯಕಕ್ಕೆ ಅನುಮೋದನೆ ಪಡೆದಿರುವುದರಿಂದ ಗೋವುಗಳ ರಕ್ಷಣೆಗೆ ಅನುಕೂಲವಾಗಲಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ವರಸಿದ್ಧಿ ವೇಣುಗೋಪಾಲ್ ಹೇಳಿದರು.

    ಗುರುವಾರ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಪಕ್ಷದ ಕಚೇರಿ ಮುಂದೆ ಗೋ ಪೂಜೆ ನೆರವೇಸಿದ ಬಳಿಕ ಮಾತನಾಡಿದರು.

    ಗೋಮಾತೆ ಪೂಜಿಸುವ ರೈತರು ಹೈನುಗಾರಿಕೆ ಮಾತ್ರವಲ್ಲದೆ ಕೃಷಿ ಸಂಬಂಧಿತ ಚಟುವಟಿಕೆಗೆ ಗೋವುಗಳನ್ನು ಅವಲಂಬಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಗೋವುಗಳ ಕಳ್ಳಸಾಗಣೆ ನಡೆಯುತ್ತಿರುವುದನ್ನು ಕಂಡು ರೈತರು, ಗೋ ರಕ್ಷಕರು ಮತ್ತು ಹೈನುಗಾರಿಕೆಯಲ್ಲಿ ತೊಡಗಿದವರು ಆತಂಕಕ್ಕೆ ಒಳಗಾಗಿದ್ದರು. ಸಮಾಜದಲ್ಲಿ ಸಾಮರಸ್ಯಕ್ಕೂ ಧಕ್ಕೆ ಉಂಟಾಗುತ್ತಿತ್ತು. ಈ ಕಾಯ್ದೆ ಗೋವುಗಳ ಸಂರಕ್ಷಣೆಗೆ ಸಹಕಾರಿಯಾಗಲಿದೆ ಎಂದರು.

    ನಗರಾಧ್ಯಕ್ಷ ಮಧುಕುಮಾರ್ ರಾಜ್ ಅರಸ್ ಮಾತನಾಡಿ, ಸಂವಿಧಾನದ ಪರಿಚ್ಛೇದ 48ರಂತೆ ಗೋತಳಿ ಸಂವರ್ಧನೆ ಮತ್ತು ಸಂರಕ್ಷಣೆ ಸಂವಿಧಾನದ ಆಶಯವಾಗಿದ್ದು ರಾಜ್ಯ ಸರ್ಕಾರ ಗೋಹತ್ಯಾ ನಿಷೇಧದ ಕಠಿಣ ಕಾಯ್ದೆಯನ್ನು ಜಾರಿಗೊಳಿಸಲು ಮುಂದಾಗುವ ಮೂಲಕ ಮಹಾತ್ಮ ಗಾಂಧೀ, ಡಾ. ಅಂಬೇಡ್ಕರ್ ಮತ್ತು ಸಂವಿಧಾನದ ಆಶಯ ಗೌರವಿಸಿದೆ. ಗೋಹತ್ಯಾ ನಿಷೇಧ ಕುರಿತ ರೈತರ ಮನವಿ ಮತ್ತು ಸಾಮಾಜಿಕ ಜಾಲತಾಣದಲ್ಲಿನ ಧ್ವನಿ ಮನಗಂಡ ಬಿಜೆಪಿ ಕೆಲವು ದಶಕಗಳಿಂದ ಗೋಹತ್ಯಾ ನಿಷೇಧದ ಆಂದೋಲನವನ್ನು ನಡೆಸುತ್ತ ಬಂದಿದ್ದು ಗೋಪಾಲಕರಲ್ಲಿ ಸಮಭ್ರಮ ಮನೆಡಮಾಡಿದೆ ಎಂದರು.

    ಮುಖಂಡರಾದ ಸೀತಾರಾಂ ಭರಣ್ಯ, ಜಯರಾಮ್ ಎಸ್​ಡಿಎಂ ಮಂಜು, ಬಸವರಾಜು, ಧನಂಜಯ್, ಜಗದೀಶ್, ಪ್ರದೀಪ್, ರಾಜೇಶ್, ಸಚಿನ್, ಮಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts