ಬಳ್ಳಾರಿ: ರೈತನಿಂದ 20 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆಯೇ ಎಸಿಬಿ ಅಧಿಕಾರಿಗಳಿಗೆ ಪಿಡಿಒ ಸಿಕ್ಕಿಬಿದ್ದಿದ್ದು, ವಿಚಾರಣೆ ಕೈಗೊಂಡಿದ್ದಾರೆ.
ರೈತನ ಜಮೀನಿನ ಪಹಣಿ ಸಂಬಂಧ ಪಿಡಿಒ ಬೀರಲಿಂಗ 25 ಸಾವಿರ ರೂ.ಲಂಚ ಕೇಳಿದ್ದರು. ಈ ಬಗ್ಗೆ ಎಸಿಬಿ ಅಧಿಕಾರಿಗಳಿಗೆ ರೈತ ದೂರು ನೀಡಿದ್ದರು.
ಶುಕ್ರವಾರ ಬೆಳಗ್ಗೆ ಕಚೇರಿಯಲ್ಲಿ 20 ಸಾವಿರ ರೂ. ಪಡೆಯುತ್ತಿರುವಾಗಲೇ ಬಂದ ಎಸಿಬಿ ಅಧಿಕಾರಿಗಳು ಅಧಿಕಾರಿಯನ್ನು ಬಂಧಿಸಿದ್ದಾರೆ. ದೂರುದಾರ ರೈತ ನಾರಾಯಣಸ್ವಾಮಿ ಎಂಬುವವರು ದೂರು ನೀಡಿದ್ದರು.ಈ ಸಂಬಂಧ ಪಿಡಿಒ ಬೀರಲಿಂಗ, ಗ್ರಾಮ ಪಂಚಾಯ್ತಿ ಸದಸ್ಯ ಒ. ಬಿ. ಕಲ್ಲಣ್ಣ , ಭೀಮೇಶ್ ಮೇಲೆ ಪ್ರಕರಣ ದಾಖಲಾಗಿದೆ.
ಖಾಸಗಿ ವ್ಯಕ್ತಿಯ ಶೆಡ್ ನಲ್ಲಿ ಹಣ ಪಡೆಯುತ್ತಿದ್ದ ಮೂವರನ್ನೂ ಬಂಧಿಸಲಾಗಿದೆ. ಸದ್ಯ ಈ ಸಂಬಂಧ ಡಿವೈಎಸ್ಪಿ ಸೂರ್ಯನಾರಾಯಣ ರಾವ್ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. (ದಿಗ್ವಿಜಯ ನ್ಯೂಸ್)
ಸಿಎಂ ಪಟ್ಟದಿಂದ ಡಿಸಿಎಂ ಆದ ಫಡ್ನವಿಸ್; ಮಹಾರಾಷ್ಟ್ರದಲ್ಲಿ ಸಚಿವರಾಗಿದ್ದ ಇನ್ನುಳಿದ ನಾಲ್ವರು ಮುಖ್ಯಮಂತ್ರಿಗಳ ವಿವರ ಇಲ್ಲಿದೆ!
ಬಿಸಿಯೂಟದ ತೊಗರಿಬೇಳೆ ಮಾರಾಟ ಮಾಡಿದ್ದ ವಿಡಿಯೋ ವೈರಲ್: ಮುಖ್ಯ ಶಿಕ್ಷಕನ ಅಮಾನತು