More

    ಅನುರಾಗ್​ ವಿರುದ್ಧ ಆ್ಯಕ್ಷನ್​ ತೆಗೆದುಕೊಳ್ಳದಿದ್ದರೆ ಪಾಯಲ್​ ಏನ್ಮಾಡ್ತಾರಂತೆ ಗೊತ್ತಾ?

    ಮುಂಬೈ: ಬಾಲಿವುಡ್​ ನಿರ್ದೇಶಕ ಅನುರಾಗ್​ ವಿರುದ್ಧ ವಿರುದ್ಧ ಸೂಕ್ತ ಆ್ಯಕ್ಷನ್​ ತೆಗೆದುಕೊಳ್ಳದಿದ್ದರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಅವರ ಮೇಲೆ ಅತ್ಯಾಚಾರದ ಆರೋಪ ಹೊರಿಸಿರುವ ನಟಿ ಪಾಯಲ್​ ಘೋಶ್​ ಬೆದರಿಕೆ ಹಾಕಿದ್ದಾರೆ.

    ಇದನ್ನೂ ಓದಿ: ಅಭಿಮಾನಿಯ ಚಪ್ಪಲಿ ಎತ್ತಿಕೊಟ್ಟ ವಿಜಯ್​ಗೆ ಭಾರೀ ಮೆಚ್ಚುಗೆ …

    2013ರಲ್ಲಿ ಅನುರಾಗ್​ ಕಶ್ಯಪ್​ ತನನ್ನು ವರ್ಸೋವಾದ ತಮ್ಮ ಆಫೀಸಿಗೆ ಕರೆಸಿಕೊಂಡು ಬಹಳ ಕೆಟ್ಟದಾಗಿ ನಡೆಸಿಕೊಂಡಿದ್ದರು ಎಂದು ಪಾಯಲ್​ ಇತ್ತೀಚೆಗಷ್ಟೇ ವರ್ಸೋವಾ ಪೊಲೀಸ್​ ಸ್ಟೇಶನ್​ನಲ್ಲಿ ದೂರು ದಾಖಲಿಸಿದ್ದರು. ಅಷ್ಟೇ ಅಲ್ಲದೆ, ಡ್ರಗ್ಸ್​​ ಆಕ್ಟ್​ನಡಿ ಅನುರಾಗ್​ ಕಶ್ಯಪ್​ ವಿರುದ್ಧ ಪಾಯಲ್ ಇನ್ನೊಂದು ಕೇಸನ್ನು ದಾಖಲಿಸಿದ್ದರು. ಆದರೆ, ವರ್ಸೋವಾ ಪೊಲೀಸರು ಇನ್ನೂ ಅನುರಾಗ್​ ಅವರನ್ನು ಕರೆದು ವಿಚಾರಣೆ ಮಾಡಿಲ್ಲ.

    ಈ ಕುರಿತು ಮಾತನಾಡಿರುವ ಪಾಯಲ್​, ‘ಅನುರಾಗ್​ ವಿರುದ್ಧ ನಾನು ದೂರು ಕೊಟ್ಟು ಒಂದು ವಾರವಾಯಿತು. ಪೊಲೀಸರು ನನ್ನನ್ನು ಸಾಕಷ್ಟು ಬಾರಿ ಠಾಣೆಗೆ ಅಲೆದಾಡಿಸಿದ್ದಾರೆ. ಪರೀಕ್ಷೆಗೆಂದು ಆಸ್ಪತ್ರೆಗೇ ಮೂರು ದಿನ ಕರೆಸಿಕೊಂಡಿದ್ದಾರೆ. ಆದರೆ, ಆರೋಪಿ ಅನುರಾಗ್​ ಅವರನ್ನು ಒಮ್ಮೆಯೂ ಕರೆಸಿಲ್ಲ. ನಾನು ಬೀದಿಬೀದಿ ಸುತ್ತುತ್ತಿದ್ದರೆ, ಅನುರಾಗ್​ ಮನೆಯಲ್ಲಿ ಆರಾಮವಾಗಿದ್ದಾನೆ’ ಎಂದು ಪಾಯಲ್​ ಹೇಳಿದ್ದರು.

    ಅಷ್ಟೇ ಅಲ್ಲ, ಈ ಕುರಿತು ಟ್ವೀಟ್ ಮಾಡಿದ್ದ ಅವರು, ‘ಅನುರಾಗ್​ ವಿರುದ್ಧ ಒಂದು ದೂರು ಕೊಟ್ಟಿದ್ದೆ. ನಾನೊಬ್ಬಳಷ್ಟೇ ಅಲ್ಲ, ಬೇರೆಯವರು ಸಹ ಅನುರಾಗ್​ ಮೇಲೆ ಅಂತದ್ದೇ ಆರೋಪಗಳನ್ನು ಹೊರಿಸಿದ್ದಾರೆ. ಆದರೆ, ದೂರು ಕೊಟ್ಟಿದ್ದಿಕ್ಕೆ ಪೊಲೀಸರು ನನ್ನನ್ನೇ ವಿಚಾರಣೆ ಮಾಡುತ್ತಿದ್ದಾರೆ. ಆ ಕಡೆ ಅನುರಾಗ್​ ಮನೆಯಲ್ಲಿ ಚಿಲ್​ ಮಾಡುತ್ತಿದ್ದೇನೆ. ನನಗೆ ನ್ಯಾಯ ಸಿಗುತ್ತದಾ ಸಾರ್​’ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಟ್ಯಾಗ್​ ಮಾಡಿದ್ದರು ಪಾಯಲ್​.

    ಇದನ್ನೂ ಓದಿ: ಬಿಲ್​ ಪಾವತಿಸದೆ ಎಸ್​ಪಿಬಿ ಅವರ ಪಾರ್ಥೀವ ಶರೀರ ಕೊಡಲ್ಲ ಎಂದರೇ ಆಸ್ಪತ್ರೆಯವರು?

    ಈಗ ಈ ವಿಷಯದ ಬಗ್ಗೆ ಮತ್ತಷ್ಟು ವ್ಯಘ್ರರಾಗಿರುವ ಅವರು, ‘ನಾನು ಕೆಲವು ದಿನಗಳಿಂದ ತಾಳ್ಮೆಯಿಂದ ಕಾಯುತ್ತಲೇ ಇದ್ದೇನೆ. ಒಂದು ಪಕ್ಷ, ಅನುರಾಗ್​ ಅವರನ್ನು ಕರೆಸಿ, ಈ ವಿಷಯದಲ್ಲಿ ವಿಚಾರಣೆ ನಡೆಸದಿದ್ದರೆ, ಉಪವಾಸ ಸತ್ಯಾಗ್ರಹ ಪ್ರಾರಂಭಿಸುತ್ತೇನೆ’ ಎಂದು ಪಾಯಲ್​ ಹೇಳಿಕೊಂಡಿದ್ದಾರೆ.

    ಎಸ್​ಪಿಬಿ ಆತ್ಮಕ್ಕೆ ಶಾಂತಿ ಸಿಗಲಿ ಎಂಬ ಮೋಕ್ಷ ದೀಪ ಬೆಳಗಿದ ಇಳಯರಾಜ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts