More

    ಕರೊನಾ ರೋಗಿಗಳಿಗೆ ‘ಅಶ್ವತ್ಥ ಮರದ ಕೆಳಗೆ ಕುಳಿತುಕೊಳ್ಳಿ’ ಎಂದ ಪೊಲೀಸ್ !

    ಲಖನೌ : ಉತ್ತರಪ್ರದೇಶದ ಪ್ರಯಾಗ್​ರಾಜ್​ ನಗರದಲ್ಲಿ ಎಷ್ಟೋ ಕರೊನಾ ರೋಗಿಗಳಿಗೆ ಆಸ್ಪತ್ರೆಯಲ್ಲಿ ಬೆಡ್​ ಸಿಗದೆ ಒದ್ದಾಡುವ ಬದಲು ಮನೆಯಲ್ಲೇ ಶುಶ್ರೂಷೆ ಪಡೆಯಲು ಹೇಳಲಾಗಿದೆ. ಆದರೆ ಹೀಗೆ ಮನೆಯಲ್ಲೇ ಇರುವ ರೋಗಿಗಳ ಆಕ್ಸಿಜನ್ ಅಗತ್ಯವನ್ನು ಪೂರೈಸಲು ಸರ್ಕಾರಿ ಅಧಿಕಾರಿಗಳು ವ್ಯವಸ್ಥೆ ಮಾಡುತ್ತಿಲ್ಲ ಎನ್ನಲಾಗಿದೆ.

    ರೋಗಿಗಳ ಸಂಬಂಧಿಕರು ಒಂದು ಆಕ್ಸಿಜನ್ ಪ್ಲ್ಯಾಂಟ್​ನಿಂದ ಇನ್ನೊಂದಕ್ಕೆ ಆಕ್ಸಿಜನ್ ಸಿಲಿಂಡರ್ ಪಡೆಯಲು ಓಡಾಡುತ್ತಿದ್ದಾರೆ. ಪ್ರಯಾಗ್​ರಾಜ್ ಬಿಜೆಪಿ ಶಾಸಕ ಹರ್ಷವರ್ಧನ್ ವಾಜಪೇಯಿ ಅವರ ಆಕ್ಸಿಜನ್ ಉತ್ಪಾದನಾ ಘಟಕದ ಮುಂದೆ ಇಂದು ಹಲವು ಕರೊನಾ ರೋಗಿಗಳ ಸಂಬಂಧಿಕರು ಆಕ್ಸಿಜನ್ ಪಡೆಯಲು ಜಮಾಯಿಸಿದ್ದರು. ಆದರೆ ಈ ಪ್ಲ್ಯಾಂಟ್​ ಈಗ ಸರ್ಕಾರದ ನಿಯಂತ್ರಣದಲ್ಲಿದ್ದು, ಅಲ್ಲಿರುವ ಅಧಿಕಾರಿಗಳು ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಸುವುದಕ್ಕೆ ಆದ್ಯತೆ ನೀಡುತ್ತಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ಕರೊನಾ ಆರ್ಭಟ: 240 ಕೈದಿಗಳಿಗೆ ಪಾಸಿಟೀವ್

    ಹೀಗೆ ಆಕ್ಸಿಜನ್ ಕ್ಯಾನ್, ಸಿಲಿಂಡರ್ ಅಥವಾ ಕಾನ್ಸಂಟ್ರೇಟರ್​​ಗಳು ಲಭ್ಯವಾಗದೆ ಹಲವು ರೋಗಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ. ಇವರ ಸಂಬಂಧಿಕರು ಆಕ್ಸಿಜನ್ ಒದಗಿಸಲು ಅಧಿಕಾರಿಗಳನ್ನು ಸಂಪರ್ಕಿಸಲು ಹೋದರೆ, ಪೊಲೀಸರು ರೋಗಿಗಳನ್ನು ‘ಅಶ್ವತ್ಥ ಮರದ ಕೆಳಗೆ ಕೂರಿಸಿಕೊಳ್ಳಿ. ಆಕ್ಸಿಜನ್ ಸ್ಯಾಚುರೇಷನ್ ಲೆವೆಲ್ ಹೆಚ್ಚಾಗುತ್ತದೆ’ ಎಂದು ಸಲಹೆ ನೀಡಿ ಕಳುಹಿಸುತ್ತಿದ್ದಾರೆ ಎಂದು ಲಲ್ಲನ್​ಟಾಪ್​ ಸುದ್ದಿ ಸಂಸ್ಥೆ ವರದಿ ಮಾಡಿದೆ!

    ಮತ್ತೊಂದೆಡೆ ರಾಜ್ಯ ಸರ್ಕಾರವು ಕಳೆದ ವಾರವಷ್ಟೇ 47 ಜಿಲ್ಲೆಗಳಲ್ಲಿ ಮೆಡಿಕಲ್ ಆಕ್ಸಿಜನ್ ಪ್ಲ್ಯಾಂಟ್​ಗಳನ್ನು ಪಿಎಂ ಕೇರ್ಸ್​ ಫಂಡ್​ನಡಿ ಸ್ಥಾಪಿಸಲಾಗುವುದು ಎಂದು ಹೇಳಿಕೆ ನೀಡಿದೆ. ಪ್ರಯಾಗ್​ರಾಜ್​ ಸೇರಿದಂತೆ ಕರೊನಾ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿರುವ ನಗರಗಳಲ್ಲಿ ಈ ಪ್ಲ್ಯಾಂಟ್​ಗಳನ್ನು ಸ್ಥಾಪಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. (ಏಜೆನ್ಸೀಸ್)

    ಮದುವೆ ಮಂಟಪ ದಾಳಿ : ಎರ್ರಾಬಿರ್ರಿ ವರ್ತಿಸಿದ ಡಿಎಂ ಸಸ್ಪೆಂಡ್

    ನಾಳೆಯಿಂದ ಗಡಿಗಳು ಇನ್ನಷ್ಟು ಭದ್ರ : ಗೃಹ ಸಚಿವ ಬೊಮ್ಮಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts